ಸಾಕ್ಷಿ ಶ್ರೀಕಾಂತ ತಿಕೋಟಿಕರ ಕವಿತೆ-ಪಾರಿಜಾತ

ಕಾವ್ಯ ಸಂಗಾತಿ

ಪಾರಿಜಾತ

ಸಾಕ್ಷಿ ಶ್ರೀಕಾಂತ ತಿಕೋಟಿಕರ.

ಅಂಗಳದ ತುಂಬ ಸುರಿದ ಪಾರಿಜಾತ
ಕಂಗಳಿಂದ ನೋಡಲು ಸುಖ ಸಂಜಾತ

ಬಿಳಿಯ ಐದು ದಳದ ನಾಜೂಕಿನ ಸುಮ
ಹೊಳೆವ ಕೇಸರಿ ತೊಟ್ಟಿನ ಮಂದ ಘಮ

ಹಾಸಿಹುದು ಹೂವಿನ ರಂಗೋಲಿ ಚಿತ್ತಾರದಿ
ಆರಿಸುವಳು ಬಾಲೆ ಪುಷ್ಪ ಹಗುರಾಗಿ ಹಸ್ತದಿ

ನೇಸರನ ಹೊಂಬೆಳಕಿಗೆ ನಕ್ಷತ್ರ ಉರಳಿದಂತೆ
ಪಸರಿಸಿವೆ ನೆಲಕೆ ಬೆಳ್ಳಿಹಿಮವು ಹರಡಿದಂತೆ

ರಂಗನ ಪೂಜೆಗೆ ಸ್ವರ್ಗದಿ ಧರೆಗೆ ಬಂದಿಹವು
ರಂಗೇರುವ ಬಿಸಿಲಿಗೆ ನಿಧಾನದಿ ಕಂದಿಹವು.


Leave a Reply

Back To Top