ಡಾ ಶಶಿಕಾಂತ ಪಟ್ಟಣ-ನೇಮಕಾತಿ

ಕಾವ್ಯ ಸಂಗಾತಿ

ನೇಮಕಾತಿ

ಡಾ ಶಶಿಕಾಂತ ಪಟ್ಟಣ

ಮತ್ತೆ ಶುರುವಾಯಿತು
ಐದು ವರ್ಷಕ್ಕೆ
ನೇರ ನೇಮಕಾತಿ
ಹುದ್ದೆ 224
ಶಿಕ್ಷಣ ಅರ್ಹತೆ
ಸುಳ್ಳು ಮೋಸ ವಂಚನೆ
ಕೊಲೆ ಸುಲಿಗೆ ಶೋಷಣೆ
ಸಂಬಳ ಎಷ್ಟು ಏನು ಇಲ್ಲ
ನಾಡು ನೆಲ ಗಣಿ ಭೂಮಿ
ಲೂಟಿ ಮಾಡಬಹುದು
ಇದಕ್ಕೆ ಸರಕಾರದ ಲಕ್ಷ
ಲಕ್ಷ ಬತ್ತೆ ಮತ್ತು ಸಂಬಳ
ಕೆಲಸ ಗುದ್ದಲಿ ಪೂಜೆ
ಪರ್ಸಂಟೇಜ್ ವಸೂಲಿ
ಕಟ್ಟಡ ಕಾಮಗಾರಿ ಕಾಲುವೆ
ನಾಲೆ ಕೆರೆ ಹಳ್ಳ ನುಂಗುವುದು
ವಯೋಮಿತಿ ಉಸಿರು ನಿಲ್ಲೋವರೆಗೆ
ಮುಂದಿನ ವಾರಸುದಾರರು
ಮಕ್ಕಳು.ಮೊಮ್ಮಕ್ಕಳು ಕುಟುಂಬ
ಸತ್ತ ಜನತೆಗಳ ಕನಸಿನ
ಭವ್ಯ ಸಮಾಧಿಗೆ ಪೂಜೆ
ಕಳ್ಳರು ದರೋಡೆಕೋರರು
ಅರ್ಜಿ ಸಲ್ಲಿಸಬಹುದು
ಐದು ವರ್ಷದ ನೇಮಕಾತಿ


——–

6 thoughts on “ಡಾ ಶಶಿಕಾಂತ ಪಟ್ಟಣ-ನೇಮಕಾತಿ

  1. ಅತ್ತ್ಯುತ್ತಮ ವಿಡಂಬನೆ ಟೀಕೆ ಹೊಂದಿದ ಶ್ರೇಷ್ಠ ಕವನ
    ಡಾ ಗೌರಿಶಂಕರ ಕಾಪಸೆ

  2. ಸುಂದರ ಕವಿತೆ ರಾಜಕಾರಣಿಗಳಿಗೆ ಚಾಟಿ ಬೀಸಿದ್ದಾರೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

  3. ನಿಜಕ್ಕೂ ತುಂಬಾ ಒಳ್ಳೆಯ ಕವನ ಕಾವ್ಯ

    ಪುಷ್ಪಾ ಅಂಗಡಿ

Leave a Reply

Back To Top