ಬಿ.ಟಿ.ನಾಯಕ್-ಸಿಡಿದ ಒಲವು

ಕಾವ್ಯ ಸಂಗಾತಿ

ಸಿಡಿದ ಒಲವು

ಬಿ.ಟಿ.ನಾಯಕ್

ನನ್ನಯ ಒಲವೇ ಎಲ್ಲಿಗೆ ನಿನ್ನಾ ಪಯಣ,
ತಿಳಿಯದೆನಗೆ ನಿನ್ನಾ ಮನಸಿನ ಹೂರಣ,
ನಲ್ಮೆಯ ಮುಖ ಬಾಡಿದರಿಯದು ಕಾರಣ.

ಕಾರಣ ಕೇಳ ಬಯಸಿದರೂ ದೊರೆಯದದು,
ಶಂಕೆಯ ಪ್ರೀತಿ ಕಂಡಾಗ ಅರುಹದಾಗದು,
ಬಯಸಿ ಬಂದೆ ನಾ ನಿಂತಲ್ಲಿ ನಿಲ್ಲಲಾಗದು.

ಶೃಂಗಾರ ಕಾವ್ಯ ನಿನಗಾಗಿ ಸಂಭ್ರಮಿಸಿದೆ,
ಬಂಗಾರದ ಸಹ್ಯ ನಿನಗಾಗಿ ಮೂಡಿಸಿದೆ,
ಅದೇಕೋ ನಾ ಕಾಣೆ ನಿನ್ನೊಲವು ಸಿಡಿದಿದೆ.


Leave a Reply

Back To Top