ಕಾಡಜ್ಜಿ ಮಂಜುನಾಥ ಕವಿತೆ-ಸಂಕ್ರಾಂತಿ

ಕಾವ್ಯ ಸಂಗಾತಿ

ಸಂಕ್ರಾಂತಿ

ಕಾಡಜ್ಜಿ ಮಂಜುನಾಥ

ನೇಸರ ಪಥವ ಬದಲಿಸುವ ಸಮಯ
ಚಳಿಯು ಕರಗಿ ಉಷ್ಣತೆಯ ಉದಯ
ಮನಗಳು ಬೆಸೆವ ಎಳ್ಳುಬೆಲ್ಲದ ರಸಪಾಕ
ರವಿಯ ಕಿರಣವು ಭುವಿಗೆ ಹೊಸನಾಕ

ಗಿಡಮರಕೆ ನವೋಲ್ಲಾಸದ ಉದಕ
ಎಲೆಗಳುದುರಿ ಚಿಗುರು ಬರುವ ತವಕ
ಬಿಸಿಲು ಮಾಗಿಸಿ ನಗುವ ದಿನಕರ
ಮಳೆಯ ಮೋಡಗಳು ಕಳೆಗಟ್ಟೋ ಆತುರ

ರೈತನ ಬೆವರಿಗೆ ಬೆಲೆಬಂದ ಸಮಯ
ಧಾನ್ಯದ ರಾಶಿಯ ನೋಡುವುದೇ ವಿಸ್ಮಯ
ದಣಿದ ಮನಸಿಗೆ ಕಬ್ಬಿನ ರಸಕವಳ
ಎಳ್ಳುಬೆಲ್ಲಕೆ ಮನಸೋಲದವರೇ ವಿರಳ

ಸ್ನೇಹ ಪ್ರೀತಿಯ ಬಂಧವ ಮೂಡಿಸಿ
ದ್ವೇಷಗಳನು ಬಿಸಿಲಲಿ ಮೌನದಿ ದಹಿಸಿ
ಎಲ್ಲರ ಮನದಲ್ಲೂ ಸೌಹಾರ್ದತೆ ಮೊಳಗಿಸಿ
ಭಾರತವೆಂಬ ಭೂಮಿಯಲಿ ಏಕತೆಯ ಬೆಳೆಸಿ


2 thoughts on “ಕಾಡಜ್ಜಿ ಮಂಜುನಾಥ ಕವಿತೆ-ಸಂಕ್ರಾಂತಿ

Leave a Reply

Back To Top