ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂಕ್ರಾಂತಿ

ಕಾಡಜ್ಜಿ ಮಂಜುನಾಥ

ನೇಸರ ಪಥವ ಬದಲಿಸುವ ಸಮಯ
ಚಳಿಯು ಕರಗಿ ಉಷ್ಣತೆಯ ಉದಯ
ಮನಗಳು ಬೆಸೆವ ಎಳ್ಳುಬೆಲ್ಲದ ರಸಪಾಕ
ರವಿಯ ಕಿರಣವು ಭುವಿಗೆ ಹೊಸನಾಕ

ಗಿಡಮರಕೆ ನವೋಲ್ಲಾಸದ ಉದಕ
ಎಲೆಗಳುದುರಿ ಚಿಗುರು ಬರುವ ತವಕ
ಬಿಸಿಲು ಮಾಗಿಸಿ ನಗುವ ದಿನಕರ
ಮಳೆಯ ಮೋಡಗಳು ಕಳೆಗಟ್ಟೋ ಆತುರ

ರೈತನ ಬೆವರಿಗೆ ಬೆಲೆಬಂದ ಸಮಯ
ಧಾನ್ಯದ ರಾಶಿಯ ನೋಡುವುದೇ ವಿಸ್ಮಯ
ದಣಿದ ಮನಸಿಗೆ ಕಬ್ಬಿನ ರಸಕವಳ
ಎಳ್ಳುಬೆಲ್ಲಕೆ ಮನಸೋಲದವರೇ ವಿರಳ

ಸ್ನೇಹ ಪ್ರೀತಿಯ ಬಂಧವ ಮೂಡಿಸಿ
ದ್ವೇಷಗಳನು ಬಿಸಿಲಲಿ ಮೌನದಿ ದಹಿಸಿ
ಎಲ್ಲರ ಮನದಲ್ಲೂ ಸೌಹಾರ್ದತೆ ಮೊಳಗಿಸಿ
ಭಾರತವೆಂಬ ಭೂಮಿಯಲಿ ಏಕತೆಯ ಬೆಳೆಸಿ


About The Author

2 thoughts on “ಕಾಡಜ್ಜಿ ಮಂಜುನಾಥ ಕವಿತೆ-ಸಂಕ್ರಾಂತಿ”

Leave a Reply

You cannot copy content of this page

Scroll to Top