ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಿಹಿಯಾಗಲಿ ಸಂಕ್ರಾಂತಿ

ಸುರೇಶ್ ಕಲಾಪ್ರಿಯಾ

ಬದಲಾಯಿತು ಸೂರ್ಯ ಪಥ
ಸಂಕ್ರಮಣದ ನೆಪದಲ್ಲಿ
ಬದಲಾಗಬೇಕಿದೆ ಗುರಿಯ ಪಥ
ಸಾಧನೆಯ ನೆನಪಲ್ಲಿ

ಝಾಡಿಸುತ್ತಿವೆ ತರುಲತೆಗಳೆಲ್ಲಾ
ಮೈಯ ಮೆತ್ತಿದ ಕೊಳಕ
ಬೀಳಿಸುತ ನೆಲಕವನು
ಹೊಸ ಚಿಗುರ ಸ್ವಾಗತಿಸಿ

ಕಿಚ್ಚ ಹಾಯುವ ಪಶುವೂ
ಕಳೆದು ಪಡೆದಿದೆ ಹೊಳಪ
ಮೈಗೆ ಮೆತ್ತಿದ ಕ್ರಿಮಿಯ ಕೆಡವಿ
ಚೈತನ್ಯವನ್ನು ಮತ್ತೊಮ್ಮೆ ಮೈಗೂಡಿಸಿ

ಸರಿಯುತ್ತಿರುವುದು ಕಾಲ
ಕೊರಗುತ್ತಿರುವುದು ಬದುಕು
ಎಚ್ಚರದಿ ನಡೆದರೂ ಬೆನ್ನು ಬಿಡದೆ
ಬೇತಾಳವಾಗಿದೆ ಕಾಣದ ಕ್ರಿಮಿ

ಸಂಕ್ರಾಂತಿ ಸಿಹಿಯು ಕಹಿಯಾಗದಿರಲಿ
ದಿಕ್ಕೆಟ್ಟ ಬದುಕು ನೆಮ್ಮದಿಯ ಕಾಣಲಿ
ಕಾಣದ ಕ್ರಿಮಿಯ ಮಣ್ಣು ಸೇರಲಿ
ಸಂಕ್ರಮಣಕ್ಕೆ ಹೊಸ ಅರ್ಥ ಬರಲಿ


About The Author

Leave a Reply

You cannot copy content of this page

Scroll to Top