ಸಂಕ್ರಾಂತಿ ವಿಶೇಷ-ಸಂಕ್ರಮಣ-

ಕಾವ್ಯ ಸಂಕ್ರಾಂತಿ

ಸಂಕ್ರಮಣ

ಆದಪ್ಪ ಹೆಂಬಾ ಮಸ್ಕಿ

ಸುಗ್ಗಿ ಬಂದಿಹುದಹದು
ಹಿಗ್ಗೇನು ಇಲ್ಲ
ಬೆಳೆದ ರೈತನ ಗೋಳು
ಕೇಳುವವರಿಲ್ಲ ||

ಈ ಹಿಂದಿನಂತೆ
ತೆನೆ ಮುರಿಯುವುದಿಲ್ಲ
ರಾಶಿಮಾಡುವುದಿಲ್ಲ
ಅಂತಿಯ ಪದಗಳ್ಯಾವೂ
ಕೇಳುವುದೇ ಇಲ್ಲ ||

ರಾಜಕಾರಣದಿ ದ್ವೇಷ ಅಸೂಯೆಗಳ ಛಾಯೆ
ಎಲ್ಲ ಕಂಡೂ
ನಾಡು ಸಾಕೆನ್ನುತಿದೆ
ಕಾಡು ಬಾ ಎನ್ನುತಿದೆ ಎನ್ನುವ ಹಿರಿಯ ಮಂದಿ
ಯುವಕರೋ ಸಾಮಾಜಿಕವಲ್ಲದ
ಜಾಲತಾಣಗಳ ಬಂಧಿ
ಯಾರಿಗಿದೆ ಸುಗ್ಗಿ ? ||

ಸೂರ್ಯ ಬಂದ
ಪಥವ ಬದಲಿಸಿದ
ಮರ್ಮವರಿಯದೆ
ನಾವಿಟ್ಟಿರುವ ಹೆಸರು
ಸುಗ್ಗಿ
ಹಿಗ್ಗಿದೆಯಾ ? ನೀವೇ ಹೇಳಿ.


ಆದಪ್ಪ ಹೆಂಬಾ ಮಸ್ಕಿ

Leave a Reply

Back To Top