ಮಾಜಾನ್ ಮಸ್ಕಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ವಿಶ್ವನಾಥದತ್ತ ಭುವನೇಶ್ವರಿಯ ಮಗನಾಗಿ ಹುಟ್ಟಿದರು ವಿವೇಕಾನಂದ
ಭಾರತೀಯ ಸಂಸ್ಕೃತಿಯ ವಿಶ್ವವಿಖ್ಯಾತಕ್ಕೆ ಮೆರಗಾದರು ವಿವೇಕಾನಂದ

ಚಿಕಾಗೋದಲ್ಲಿಯ ಭಾಷಣದಿ ವಿಶ್ವವನ್ನೇ ಬೆರಗುಗೊಳಿದ್ದರು
ಸಹೋದರತ್ವದ ಗುಣದಿ ವೀರಸನ್ಯಾಸಿಯಾಗಿ ಬೆಳೆದರು ವಿವೇಕಾನಂದ

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಘರ್ಜಸಿದ ವೀರಪುತ್ರ
ಯುವಕರಲ್ಲಿದ್ದ ಸೋಮಾರಿತನ ಬಡಿದೋಡಿಸಿದರು ವಿವೇಕಾನಂದ

ಜೀವ ನಮ್ಮ ಕೈಯ್ಯಲ್ಲಿ ಇಲ್ಲ ಜೀವನ ನಮ್ಮ ಕೈಯ್ಯಲ್ಲಿದೆ ಎನ್ನುವ ಗಟ್ಟಿತನ
ಮೂಢನಂಬಿಕೆ ತೊರೆದು ಜೀವನ ಮಾರ್ಗ ತೋರುಸಿದರು ವಿವೇಕಾನಂದ

ಭಾರತ ನಿರ್ಮಾಣ ಅದಮ್ಯ ಚೇತನ ಆಧ್ಯಾತ್ಮಿಕತೆಯ ಮೇರುಪರ್ವತ ಇವರು
“ಮಾಜಾ” ನರೇಂದ್ರರು ವಿಶ್ವ ಮಾನವ ಸಿಡಿಲು ಸಂತರಾಗಿ ಮಿಂಚಿದರು ವಿವೇಕಾನಂದ


Leave a Reply

Back To Top