ರೋಹಿಣಿ ಯಾದವಾಡ-ಗಜಲ್

ಕಾವ್ಯ ಸಂಗಾತಿ

ಗಜಲ್

ರೋಹಿಣಿ ಯಾದವಾಡ.

ಪ್ರೀತಿ ಎಂದಿಗೂ ನಂಜೇರದಂತೆ ಕಾಪಿಟ್ಟುಕೊಳ್ಳಬೇಕು
ಸ್ನೇಹದ ಒರತೆ ಸದಾ ಹರಿಯುವಂತೆ ಇರಬೇಕು

ಒಲವಿನ ಪ್ರೇಮ ಹನಿಹನಿಯಾಗಿ ಜಿನಗುತ್ತಲೆ ಇರಬೇಕು
ನೋವಿನ ಕಣ್ಣೀರ ಇಳಿಯದಂತೆ ಒರೆಸುತ್ತಲಿರಬೇಕು

ಸಜ್ಜನರ ಸಂಗದಲಿ ಕಲೆತು ಅರಿಯಬೇಕು
ದುರ್ಜನರ ಸಹವಾಸ ಇರದಂತೆ ತೊರೆಯಲೇಬೇಕು

ನೋವನ್ನು ಮರೆಸಿ ಸದಾ ನಗುವ ಚಿಮ್ಮಬೇಕು
ಮನಸ್ಸಿಗಾದ ಗಾಯ ಮರೆವಂತೆ ಮಾಯಿಸಲೇಬೇಕು

ಮಾಗಿದ ಕಾಯಕೆ ಹರುಷದ ಸಿಂಚನವಾಗಬೇಕು
ಹಳೆಯದನು ತೊರೆದು ಹೊಸದರಂತೆ ಬರಲೇಬೇಕು

ಹೊಸ ವರುಷಕೆ ಹೊಸ ಚಿಗರು ಚಿಗುರಲೇಬೇಕು
ರೋಹಿಣಿಯ ಹೊಸತಿನ ಸಂಕಲ್ಪದಂತೆ ಈಡೇರಲೇಬೇ

————————————————

Leave a Reply

Back To Top