ಬಾಗೇಪಲ್ಲಿಯವರ ಗಜಲ್

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ಸುತ್ತಲ ಜನಕೆ ನಿನ್ನ ಅವಶ್ಯವು ಯಾರಿಗೆ ಎಷ್ಟಿದೆಯೆಂದ ನೀನರಿಯೆ
ನಿನ್ನೊಂದು ಕಿರುನಗೆಯ ಅಗತ್ಯವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ಪ್ರಾಂಶಾಂತ ಚಿತ್ತ ಏಸುಪ್ರಭುವ ನೆನೆಯುತ ಪ್ರಾರ್ಥಿಸುವ ದಿನಗಳಿವು
ನಿನ್ನ ಕರುಣಾ ನೋಟದ ಹಂಬಲವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ಸೌಹಾರ್ದ,ಸಹಬಾಳ್ವೆಗಳೇ ಜಗತ್ತಿಗೆ ಇಂದಿಗೆ ಜರೂರು ಬೇಕಿರುವ ಅಂಶಗಳು
ಆವಶ್ಯವಾಗಿ, ನಿನ್ನ ಬಿಗಿ ಅಪ್ಪುಗೆ ತಾಪವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ಅಯ್ಯಾ ಎಂದರೆ ಸ್ವರ್ಗ, ಎಲವೋ ಎನ್ನಲು ನರಕವೆಂದು ಹೇಳುವರು
ನಿನ್ನ ಸಾಂತ್ವನದ ನುಡಿಯ ಹಸಿವು ಯಾರಿಗೆ ಎಷ್ಟಿದೆಯೆಂದು ನೀನರಿಯೆ

ನೆರವಾಗುವ ಅವಕಾಶ ಕೈ ಬಿಡದಿರು ಹಾಗಯೇ ಮುಂದೂಡಲೂ ಬೇಡ
ಕೃಷ್ಣಾ! ಸಹಜೀವಿಗಳಿಗೆ ನಿನ್ನ ಋಣವು ಯಾರಿಗೆ ಎಷ್ಟಿದೆಯೆಂದು ನೀನರಿಯೆ


Leave a Reply

Back To Top