ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಕವಿತೆ

ಎಲ್ಲಾ ಹೊತ್ತು ಗಣಿತ ಗಮ್ಮತ್ತು

ಲಕ್ಷ್ಮೀದೇವಿ ಕಮ್ಮಾರ

ಗಣಿತ ಬಲು ಸುಲಭ
ಸುಲಿದ ಬಾಳೆಹಣ್ಣು
ಲಕ್ಷ್ಯ ಕೊಟ್ಟು ಕಲೆತರೆ
ಬಲು ಖುಷಿ ಕೊಡುವ ಹೊನ್ನು

ಗರಗರ ತಿರುಗಿ ಗೆರೆ ಎಳೆದರೆ ವೃತ್ತ
ಮನೆ ಸುತ್ತ ಒಂದು ಸುತ್ತು ತಿರುಗಿದರೆ ಆಯ್ತು ಆಯತ

ದಿನ ದಿನ ಕುಡಿಕೆಯಲ್ಲಿ ಕೂಡಿಟ್ಟರೆ ರೊಕ್ಕ ಅದೇ ಕೂಡಿಸುವ ಲೆಕ್ಕ
ಮೊತ್ತದಲ್ಲಿ ಒಂದಿಷ್ಟು ತೆಗೆದರೆ
ಮಿಕ್ಕಿದ್ದೆ ಕಳೆ ಲೆಕ್ಕ

ಸಮನಾಗಿ ಹಂಚಿ ತಿನ್ನುವುದು ಭಾಗಾಕಾರ ಎಲ್ಲರೂ ಕೂಡಿ ದುಡಿದು ಸಂಗ್ರಹಿಸಿದರೆ ಅದೇ ಗುಣಾಕಾರ

ಎರಡೆರಡು ರೂಪಾಯಿ ಹಾಕುತ್ತಾ ಹೋದರೆ ಅದೇ ಎರಡರ ಮಗ್ಗಿ
ಹೀಗೆ ಮಾಡಿದರೆ ಉಳಿದೆಲ್ಲ ಮಗ್ಗಿ

ಮನೆ ಒಳಗೂ ಹೊರಗೂ ಗಣಿತಾಕೃತಿಗಳದೇ ಸುಗ್ಗಿ

ಎಲ್ಲಾ ಕಡೆನೂ ಬೇಕು ಗಣಿತದ ಲೆಕ್ಕಾಚಾರ ಅಂಕಿ ಸಂಖ್ಯೆ ಜ್ಞಾನವಿಲ್ಲದಿರೆ ನಡೆಯದು ವ್ಯವಹಾರ

ಪ್ರತಿನಿತ್ಯ ಮಾಡೋ ಲೆಕ್ಕ
ಪರೀಕ್ಷೆಯಲ್ಲಿ ಪಾಸ್ ಆಗೋದು ಪಕ್ಕಾ

ಎಲ್ಲಾ ವಿಷಯ ರಾಜ ಗಣಿತ
ಸಂಖ್ಯಾಜ್ಞಾನವುಳ್ಳವನ ಬದುಕು ಸುಲಲಿತ


About The Author

1 thought on “ಎಲ್ಲಾ ಹೊತ್ತು ಗಣಿತ ಗಮ್ಮತ್ತು ಲಕ್ಷ್ಮೀದೇವಿ ಕಮ್ಮಾರ ಕವಿತೆ-”

  1. Raghavendra Mangalore

    ಕಬ್ಬಿಣ ಕದಲೆಯಂತಹ ಗಣಿತವನ್ನು ಬಹಳ ಸುಲಭವಾಗಿ ಬಿಡಿಸಿ ಹೇಳಿರುವಿರಿ…ಚೆನ್ನಾಗಿದೆ ಗಣಿತದ ಕವಿತೆ. ಅಭಿನಂದನೆಗಳು ಮೇಡಂ

Leave a Reply

You cannot copy content of this page

Scroll to Top