ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ

ಮಠಗಳು

ಡಾ ಶಶಿಕಾಂತ ಪಟ್ಟಣ

shashikanth pattan

ಮಠಗಳು ಇಂದು
ಮಠಗಳಾಗಿ ಉಳಿದಿಲ್ಲ
ಮಠಗಳು ವಾಣಿಜ್ಯ ಮಳಿಗೆ
ಬಸವ ಪ್ರಜ್ಞೆ ಮರೆತ
ರುದ್ರಾಕ್ಷಿ ಫೋಟೋ
ಲಿಂಗ ವಿಭೂತಿ ಮಾರುಕಟ್ಟೆ

ಕಾಲೇಜು ಕಲ್ಯಾಣ ಮಂಟಪ
ಅಂಗಡಿ ಮಳಿಗೆ
ಸೇವೆ ಬಿಟ್ಟ ಸುಲಿಗೆ ಕೇಂದ್ರ
ಮಠಗಳಲ್ಲಿ ಯಜ್ಞ ವೇದ ಪಾಠ
ತಿಂಗಳ ಪ್ರವಚನ ಪುರಾಣ
ಅಂದು ಹೋಳಿಗೆ ಹುಗ್ಗಿ

ಮಠಗಳಿಗೆ ಬೇಕು ಹಣ ಆಸ್ತಿ
ಬೇಕಿಲ್ಲ ನಿಷ್ಠ ಭಕ್ತರು
ಜಾತ್ರೆ ಉತ್ಸವ ಮೇಳ ಗಾಯನ
ಮೈಕ್ ತಬಲಾ ಮಂಟಪ ಕಟ್ಟಲು
ತಟ್ಟೆ ಎತ್ತಲು ಗುಲಾಮರು
ವರ್ಷಕ್ಕೊಮ್ಮೆ ಇವರಿಗೆ ಶಾಲು

ಮಠಗಳಲ್ಲಿ ಪೊಕ್ಸೊ ಪ್ರಕರಣ
ಸ್ವಾಮಿ ಜಗದ್ಗುರು ಜೈಲು ಪಾಲು
ಟಿವಿ ಮಧ್ಯಮದಲ್ಲಿ ಸುದ್ಧಿ ಸುಗ್ಗಿ
ಪೋಲೀಸರ ಸರ್ಪಕಾವಲು
ಪೀಠಕ್ಕೆ ನೇಮಕ ಗೊಂದಲ ಗದ್ದಲ
ಸರ್ವೇ ಜನ ಸುಖಿನೋ ಭವಂತು


Leave a Reply

Back To Top