ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….!

ಕಾವ್ಯ ಸಂಗಾತಿ

ದೇವರಾಜ್ ಹುಣಸಿಕಟ್ಟಿಗೆ ದೊರೆತ….!

ಕನಕ

ಬಾಗಿಲು ಮುಚ್ಚುವಾಗ
ಕಿಟಕಿ ತೆರೆಯುವಾಗ
ಕೃಷ್ಣ ಕನಕ ಚರಿತ….

ಬೆರಳು ಕುಣಿಸುವಾಗ
ಕೊರಳು ಮಣಿಸುವಾಗ
ಕೃಷ್ಣನರಿಯುವಾಗ ಕನಕ ಹರಿತ …

ಕೃಷ್ಣನೊಂದು ಗಾಳಿ
ಕನಕನೊಂದು ಗಂಧ
ಗಾಳಿಯಲಿ ಸುಗಂಧವಾಗಿ ಬೆರತ…..

ಕೃಷ್ಣ ಕಂಬಳಿ ಹೊದ್ದ
ಕನಕ ಬೆಣ್ಣೆ ಮೆದ್ದ
ಲೋಕದ ತುಂಬಾ ಪ್ರೀತಿ ಸದ್ದ
ಈಗ ಬೆರತ ಚರಿತೆಯ ಮೊರೆತ….

‘ನಾನು ‘ತೊರೆಯುವಾಗ
ಜಾತಿ ಮುರಿಯುವಾಗ
ಕುಲದ ನೆಲೆಯನರಿಯುವಾಗ
ಕನಕ ದೊರೆತ….

2 thoughts on “ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….!

  1. ‘ಕುಲದ ನೆಲೆಯನರಿಯುವವಾಗ ಕನಕ ದೊರೆತ’ ದೇವರಾಜ್ – ನಿಮ್ಮ ಕವಿತೆ ಓದಿ, ನನಗಗೂ ದೊರೆತ – ಕಿಂಡಿಯಕನಕ.

Leave a Reply

Back To Top