ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಆಶೀರ್ವಾದ

ಸತೀಶ ಜೆ.ಚಿಕ್ಕಜಾಜೂರು(ಸಜಲ).

ಎದುರಿನ ಪ್ರಾಣವನ್ನು ಹಾರಿಸಿಕೊಂಡು
ಹಕ್ಕಿಯಾಗದ ನಿಮ್ಮಂತ
ರೆಕ್ಕೆಯ ಆಶೀರ್ವಾದ ಬೇಕು ನನಗೆ

ಕಂಡ ಕಣ್ಣಿನ ದೃಷ್ಟಿ ಎತ್ತಿಕೊಂಡಿರದ
ನಿಮ್ಮಂತ ಸ್ವಚ್ಚ ನೋಟದ
ಆಶೀರ್ವಾದ ಬೇಕು ನನಗೆ

ಅವರಿವರ ಮೈಸವೆತದ ಸಾರವನ್ನು
ಬಸಿದುಕೊಳ್ಳದ ನಿಮ್ಮಂತ
ಎದೆಯ ಆಶೀರ್ವಾದ ಬೇಕು ನನಗೆ

ಆಸೆಯ ಸಂಸತ್ತಿನ ಪೀಠಾಧಿಕಾರಿಯಾಗದ
ನಿಮ್ಮಂತ ಸ್ಥಾನದ
ಆಶೀರ್ವಾದ ಬೇಕು ನನಗೆ

ಗಾಳಿಗೆ ಗೋಳು ಕೊಡದ,
ನೀರ ಏರಿಸಿಕೊಂಡಿರದ ,
ಮಣ್ಣ ಭೋಗಿಸಿರದ ,
ನೆರೆದಿದ್ದಕ್ಕೆ ಬೆಂಕಿ
ಹಾಕದಿರುವ,
ನಿಮ್ಮಂತ ಆಕಾಶದೆದೆಯೊಳಗಿನ
ಆಶೀರ್ವಾದ ಮಾತ್ರ ಬೇಕು ನನಗೆ.


ಸತೀಶ ಜೆ.ಚಿಕ್ಕಜಾಜೂರು(ಸಜಲ).

Leave a Reply

Back To Top