ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಗಜಲ್

ಸುಜಾತಾ ರವೀಶ್ 

ಹಚ್ಚಿದ ಹಣತೆಯ ಬೆಳಕು ದ್ವೇಷವ ತೊಲಗಿಸಿ ಐಕ್ಯವ ಮೆರೆಸಲಿ ಇಂದು 
ಮುಚ್ಚಿದ ಕತ್ತಲೆಯ ಕೃತಿಮದ ತೆರೆಯ ಸರಿಸಿ ಹೊನಲು ಹರಿಸಲಿ ಇಂದು 

ನೆಚ್ಚಿದ ಸಜ್ಜನತೆ ಸ್ನೇಹವು ಬಾಳಲಿ ದೊರೆಯುತ ಸುಖವ ತರುತಲಿರಲಿ 
ಹೆಚ್ಚಿದ ಶಾಂತಿಯ ನೆರಳು ಸುತ್ತಲೂ ಪಸರಿಸಿ ನೆಮ್ಮದಿ ಲಭಿಸಲಿ ಇಂದು 

ಆವರಿಸಿದ ತಮಜಾಡ್ಯ ಕರಗಿಹೋಗಲಿ ಜ್ಞಾನದ ಜ್ಯೋತಿಯ ಪ್ರಭಾವದಲಿ
ಆಗಮಿಸಿದ ಹೊಸ ಪ್ರಭಾತ ಕಿರಣ ವರ್ಷದ ಚೇತನ ಸುರಿಸಲಿ ಇಂದು 

ಮನದ ರಿಪುಗಳನು ಸಾತ್ತ್ವಿಕತೆಯು ಎದುರಿಸಿ ದುರ್ಗುಣ ಹರಣವಾಗಲಿ 
ಮನೆಯ ಕತ್ತಲೆಯ ಹೊಂಬೆಳಕು ಓಡಿಸಿ ಚೈತನ್ಯ ತರಿಸಲಿ ಇಂದು 

ಬೆಳಗುವ ಹಣತೆಯ ಸಾಲ ಈಕ್ಷಿಸುತಿಹಳು ಸುಜಿಯು ಸಂತಸದಲಿ 
ಮೊಳಗುವ ದಿವ್ಯಗೀತೆ ಅಂಗಣದಿ ರಿಂಗಣಿಸಿ ಸರ್ವರ ಹರಸಲಿ ಇಂದು 


ಸುಜಾತಾ ರವೀಶ್ 

About The Author

Leave a Reply

You cannot copy content of this page

Scroll to Top