ಕಾವ್ಯ ಸಂಗಾತಿ
ಸಂಕ್ರಾಂತಿ ಸಂಭ್ರಾಂತಿ
ಡಾ.ಡೋ ನಾ ವೆಂಕಟೇಶ
ಮಹೋತ್ಸವಗಳ ಸಂಭ್ರಮ
ಬೆಳ್ಳಿ ಹಬ್ಬಗಳ ಸಡಗರ
ಮುಗಿದರೂ ಮೈಲಿಕಲ್ಲುಗಳನ್ನ
ಮೆರೆದರೂ ಮಕ್ಕಳ ಮೊಮ್ಮಕ್ಕಳ ಬದುಕಿನ ಹೊಸ ಹೊಸ ಬಣ್ಣನೆ ಕಂಡರೂ
ಏ! ಬದುಕೇ
ಅಚ್ಚೊತ್ತಿದ ಚಿತ್ರ
ವಿಚಿತ್ರ ಪ್ರಪಂಚದ
ಮಳೆಗಾಲ ಚಳಿಗಾಲ
ಮತ್ತೆ ಸುಡು ಬೇಸಿಗೆಯ
ದಾಹ ಕಾಲ ಕಾಲಾಂತರದಲ್ಲಿ
ಕುಲಾಂತರಗೊಳ್ಳಲಿಲ್ಲ
ಪ್ರಥಮ ನಿವೇದನೆ
ವಿವೇಚನೆ
ವೇದನೆಯಾಗಲೇ ಇಲ್ಲ
ದ್ವಂದ್ವ ಘಳಿಗೆ ಇಲ್ಲ
ಖಂಡ ಭಾವನೆಗಳ ಮೂಸೆಯಲ್ಲಿ ಮಿಂದೆದ್ದ
ಮಿಂಚು ಕಾಣು
ಪ್ರಕೃತಿಯ ಸಂಚು ಕಾಣು
ನೇರ ಆಕಾಶದ
ಪರಿಶುದ್ಧ ನಿರ್ಮಲ ಪ್ರಕಾಶ
ನಿರ್ಮಲ ಮನಸ್ಸಿನ
ಆಕಾಶದೆತ್ತರದ ಪರಿಶುದ್ಧ
ಪ್ರಕಾಶ !!
ಸದಾ ಸಂಕ್ರಾಂತಿ
ಬಹಳ ಆಸಕ್ತಿದಾಯಕ ಸಂಯೋಜನೆಗಳು.
ಕವಿತೆ ಓದಿ ಮನಸ್ಸು ಪ್ರಕಾಶಮಯವಾಯಿತು.
ಧನ್ಯವಾದಗಳು ಮಂಜುನಾಥ್ ಪೈ
(ನಿಮ್ಮೆಲ್ಲರ ತಾಳ್ಮೆಗೆ ಒಂದು hats off)