ಸುಮ್ಮನಿದ್ದು ಬಿಡಿ,ಲಕ್ಷ್ಮೀದೇವಿ ಪತ್ತಾರ ಕವಿತೆ

ಕಾವ್ಯ ಸಂಗಾತಿ

ಸುಮ್ಮನಿದ್ದು ಬಿಡಿ

ಲಕ್ಷ್ಮೀದೇವಿ ಪತ್ತಾರರ ಹೊಸ ಕವಿತೆ

ಮಾಯುತಿದೆ ಗಾಯ
ತ್ತೆ ಮತ್ತೆ ಉಪ್ಪು ಸುರಿಯದಿರಿ
ತಿಳಿಯಾಗುತಿದೆ ನೀರು
ಕದಡದಿರಿ

ಆರುತಿದೆ ಬೆಂಕಿ
ಸೀಮೆಎಣ್ಣೆ ಸುರಿಯದಿರಿ
ಚಿಗುರುತಿದೆ ತರು
ಚಿವುಟದಿರಿ
ತಿಳಿಯಾಗುತಿದೆ ವಾತಾವರಣ
ಧೂಳೆಬ್ದಿಬಿಸದಿರಿ

ಸ್ವಚ್ಚಂದವಾಗಿ ಅಲೆದಾಡುತಿವೆ
ಖಗಮೃಗಗಳ
ಬಂಧಿಸಿಡದಿರಿ

ವಿಕಸಿತಗೊಳ್ಳುತ್ತಿವೆ ಸುಂದರ ಕುಸುಮಗಳು
ಹೊಸಕಿ ಎಸೆಯದಿರಿ
ಸಾಧ್ಯವಾದರೆ ಒಳ್ಳೆಯದು ಮಾಡಿ
ಇಲ್ಲವೇ ಸುಮ್ಮನಿದ್ದು ಬಿಡಿ


Leave a Reply

Back To Top