ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಗಝಲ್

ದೇಶದ ಸ್ವಾತಂತ್ರ್ಯದ ಅಮೃತ ವರ್ಷಕೆ
ಹುರುಪು ನೀಡಬೇಕಿದೆ ಗೆಳೆಯಾ
ಉದ್ಘೋಷದಿ ಕೆಚ್ಚಿನ ಗೀತೆಗಳನು ನಿತ್ಯ
ತೋಷದಿ ಹಾಡಬೇಕಿದೆ ಗೆಳೆಯಾ

ಗಗನದಾಚೆ ಮಾರ್ದನಿಗಳನೆಬ್ಬಿಸಿ ನಿಲ್ಲಲು
ಎಲ್ಲೆಡೆ ಘಂಟಾಘೋಷ
ತ್ಯಾಗ ಬಲಿದಾನಗೈದ ದೇಶಭಕ್ತರ ಚರಿತ್ರೆ
ಪುಟಗಳಲಿ ಮೂಡಬೇಕಿದೆ ಗೆಳೆಯಾ

ವಂದೆಮಾತರಂ ಹಾಡುತ್ತ ಮನೆಮನೆಯಲ್ಲೂ
ಹಾರುತಿದೆ ತ್ರಿವರ್ಣ ಧ್ವಜ
ಅಹಮ್ಮಿನ ಕೋಟೆಯನು ತೊರೆದು ನಾವೆಲ್ಲರೂ
ನೇಹದಿ ಕೂಡಬೇಕಿದೆ ಗೆಳೆಯಾ

ಅಮರರಾದ ವ್ಯಕ್ತಿಗಳ ಜೀವನ ಸಾಧನೆಗಳ
ಇನ್ನಾದರೂ ಮೈಗೂಡಿಕೋ
ಗಾಂಧೀಜಿ ಕಂಡಿರುವ ಕನಸುಗಳ ಸಮಾಜದಿ
ಸಾಕಾರ ಮಾಡಬೇಕಿದೆ ಗೆಳೆಯಾ

ಮಹೋತ್ಸವದಲಿ ಭರತಮಾತೆಯ ನಾಮವ
ಜಪಿಸಿ ಪಾವನರಾಗೋಣ
ಅಭಿನವನ ಗಝಲಿನ ಅಂತರಾರ್ಥವು ಭವ್ಯ
ಭಾರತೀಯರ ಕಾಡಬೇಕಿದೆ ಗೆಳೆಯಾ


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top