ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಿಖರವೇರುವುದಕೆ

ರೇಷ್ಮಾ ಕಂದಕೂರ

ನೋವುಗಳು ಸಾವಿರಾರು
ಕಷ್ಟಗಳು ಹಲವಾರು
ಬದುಕಿನ ಧಾವಂತಕೆ.

ಹೇಳತೀರದ ಸವಾಲುಗಳು
ನಡುವೆ ಈಜಿದ ಪರಿ
ಪದಗಳೆ ಸಾಲದಾಗಿವೆ.

ಎಲ್ಲವುಗಳ ಮೆಟ್ಟಿ ನಿಲ್ಲುವ
ವ್ಯವಧಾನ ಒಂದೇ ಗಟ್ಟಿ
ಛಲವು ತುಂಬಿದ ಮನಕೇ.

ಗುರಿಯ ಮುಟ್ಟಲು
ಕಷ್ಟ ಕೊಟ್ಟವರೇ ನನ್ನವರು
ನಷ್ಟ ಮಾಡಿದವರೇ ದಾರಿ ತೋರಿದವರು.

ಅವರಿಗಿಷ್ಟು ಒಂದನೇ
ಸಹಿಸುವ ಸಾಮರ್ಥ್ಯ ಕಲಿಸಿದವರು
ಸಂಚುಗಳೆ ವರವಾದವು.

ಕೈ ಕಟ್ಟಿ ಕುಳಿತಾಗಲೆಲ್ಲ
ಹಿಯಾಳಿಸುವ ಮಾತು ನೆನಪಾಗಿ
ಮುಂದೆ ಸಾಗುವ ಮನಸಾಯಿತು.

ಸಾಗುವ ದಾರಿಗೆ
ಮುಳ್ಳು ಹಾಸಿದವರು
ಇಂದು ನಗೆಯ ಬೀರುವ.

ಮನಸು ಮಾಡಿದರು
ಮತ್ತೆನು ಬೇಕು ಜೀವಕೆ
ಸಾಗರದಡಿಯ ಮುತ್ತು.

ಸಿಗಲು ಸಾಹಸ ಮಾಡಬೇಕು
ಮೊಸರು ಕಡಿದಾಗಲೆ
ಬೆಣ್ಣೆ ಬರುವುದು.

ಒಳ ಮನದಿ ಧೃಡತೆಗಿರಲಿ
ಒಂದಿಷ್ಟು ಗಮನ
ಶಿಖರ ವೇರುವುದಕೆ


About The Author

Leave a Reply

You cannot copy content of this page

Scroll to Top