ಶಿಖರವೇರುವುದಕೆ

ಕಾವ್ಯ ಸಂಗಾತಿ

ಶಿಖರವೇರುವುದಕೆ

ರೇಷ್ಮಾ ಕಂದಕೂರ

ನೋವುಗಳು ಸಾವಿರಾರು
ಕಷ್ಟಗಳು ಹಲವಾರು
ಬದುಕಿನ ಧಾವಂತಕೆ.

ಹೇಳತೀರದ ಸವಾಲುಗಳು
ನಡುವೆ ಈಜಿದ ಪರಿ
ಪದಗಳೆ ಸಾಲದಾಗಿವೆ.

ಎಲ್ಲವುಗಳ ಮೆಟ್ಟಿ ನಿಲ್ಲುವ
ವ್ಯವಧಾನ ಒಂದೇ ಗಟ್ಟಿ
ಛಲವು ತುಂಬಿದ ಮನಕೇ.

ಗುರಿಯ ಮುಟ್ಟಲು
ಕಷ್ಟ ಕೊಟ್ಟವರೇ ನನ್ನವರು
ನಷ್ಟ ಮಾಡಿದವರೇ ದಾರಿ ತೋರಿದವರು.

ಅವರಿಗಿಷ್ಟು ಒಂದನೇ
ಸಹಿಸುವ ಸಾಮರ್ಥ್ಯ ಕಲಿಸಿದವರು
ಸಂಚುಗಳೆ ವರವಾದವು.

ಕೈ ಕಟ್ಟಿ ಕುಳಿತಾಗಲೆಲ್ಲ
ಹಿಯಾಳಿಸುವ ಮಾತು ನೆನಪಾಗಿ
ಮುಂದೆ ಸಾಗುವ ಮನಸಾಯಿತು.

ಸಾಗುವ ದಾರಿಗೆ
ಮುಳ್ಳು ಹಾಸಿದವರು
ಇಂದು ನಗೆಯ ಬೀರುವ.

ಮನಸು ಮಾಡಿದರು
ಮತ್ತೆನು ಬೇಕು ಜೀವಕೆ
ಸಾಗರದಡಿಯ ಮುತ್ತು.

ಸಿಗಲು ಸಾಹಸ ಮಾಡಬೇಕು
ಮೊಸರು ಕಡಿದಾಗಲೆ
ಬೆಣ್ಣೆ ಬರುವುದು.

ಒಳ ಮನದಿ ಧೃಡತೆಗಿರಲಿ
ಒಂದಿಷ್ಟು ಗಮನ
ಶಿಖರ ವೇರುವುದಕೆ


Leave a Reply

Back To Top