ದೇವಕಿರಣ

ಕಾವ್ಯ7ಸಂಗಾತಿ

ದೇವಕಿರಣ

ಗಿರಿಜಾ ‌ಇಟಗಿ

ದಟ್ಟಕಾನನದ ನಟ್ಟನಡುವೆ
ಕತ್ತಲೆಯನಾಚೆ ದೂಡುತ್ತಾ,
ಭಾಸ್ಕರನ ಪ್ರಖರಕಿರಣ
ವಸುಮತಿಯ ದರುಶನಕೆ ಕಾತರಿಸುತಿಹದು

ಏನದ್ಭುತ!! ಸೃಷ್ಟಿಯ ಲೀಲೆಯದು
ಕೊರಡು ಕೊನರುವ ಸಮಯ
ಹಸಿರೆಲ್ಲಾ ಉಸಿರಲಿ ಬೆರೆಸಿ
ಹರ್ಷದ ಛಾಯೆಯಲಿ ಮಿಂದೇಳುತಿಹದು

ಧ್ಯಾನಗೈಯುತಲಿಹಳು ಪ್ರಕೃತಿ
ತನ್ಮಯಳಾಗಿ, ದೇವಕಿರಣವು
ಬಳಿಗೆ ಪೊಡಮಡಲು ತನ್ನನ್ನೆ
ಪರಿಶುದ್ಧ ಚೇತನಕೆ‌ ಅರ್ಪಿಸುತಿಹಳು

ಹೊಸತನದ ಸಿರಿಸೊಬಗಿನೊಳು
ತನ್ನೆದೆಯ ತಮವ ಕರಗಿಸುತಲಿ
ಮೃದುಮಧುರ ಭಾವದೊಳು
ದೈವಯೋಗವನು ಸ್ವೀಕರಿಸುತಿಹಳು

ವ್ಯಾಪಿಸಿಹುದು ಜಗದೊಳೆಲ್ಲಾ ಪೂರ್ಣತೆಯ ದರುಶನವು
ಎಲ್ಲ ಧರ್ಮದ ಬಂಧನವ ಕಳಚಿ
ವಿಶ್ವರೂಪದಿ ಪ್ರಕೃತಿ ಅನುಗ್ರಹಿಸುತಿಹಳು


Leave a Reply

Back To Top