ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಿನ್ನಹ

ಜಯಲಕ್ಷ್ಮಿ ಎಂ ಬಿ

ವರುಣ ದೇವನೆ ತೋರಿ ಕೃಪೆಯನು
ಧರಣಿ ದೇವಿಯ ತಣಿಸೆಯ
ಸೊರಗಿ ಹೋಗಿಹ ಜೀವ ಸಂಕುಲ
ಹರಸಿ ಒಲವನು ತೋರೆಯ

ಬಟ್ಟ ಬಯಲಲಿ ಹರಡಿ ಚೆಲ್ಲಿಹ
ನೆಟ್ಟ ಬೆಳೆಗಳು ಸೊರಗಿವೆ
ಗಟ್ಟಿ ಮನದಲಿ ಬೇಡಿ ನಿನ್ನಲಿ
ತೊಟ್ಟು ಹನಿಯನು ಬಯಸಿವೆ

ಮಳೆಯ ಜಾಡನು ಹಿಡಿದು ಹೋಗಲು
ಸುಳಿವು ಎಲ್ಲಿಯು ಕಾಣದು
ಬೆಳಕು ತೋರದು ಬಾಳ ಪಯಣದಿ
ನಲಿವು ಮನದಲಿ ಸುಳಿಯದು

ಬಿಸಿಯ ಗಾಳಿಯು ಚಲನೆ ಇಲ್ಲದೆ
ಬಿಸಿಲ ಬೇಗೆಯ ಹರಡಿದೆ
ಹಸಿದ ರೈತನ ಬೆವರ ಹನಿಯೊಳು
ಬಸಿದು ಹೋಗುತ ಕರಗಿದೆ

ಹೊತ್ತು ಮುಳುಗಿದೆ ಎತ್ತ ನೋಡಲು
ಮತ್ತೆ ಸುಳಿಯದು ಮೋಡವು
ಸುತ್ತ ನೋಟವ ಚೆಲ್ಲಿ ಹರಿಸಲು
ಗೊತ್ತು ಗುರಿಯದು ಇಲ್ಲವೊ


About The Author

Leave a Reply

You cannot copy content of this page

Scroll to Top