ಕೊರೊನಾ ಕಾಲದ ಕವಿತೆ

ಕಾವ್ಯಯಾನ

ಕೊರೊನಾ ಕಾಲದ ಕವಿತೆ

ಬಿ.ಶ್ರೀನಿವಾಸ

ಬಡವರ ಶವಗಳು
ವಾಸಿಯಾದ ರಾಜನ ಮನೆಯ ಮುಂದೆಯೆ ಹಾದು ಹೋಗುವುವು

ಈ ರೋಗಕ್ಕೂ
ತಗುಲಿದೆ
ಮೇಲುಕೀಳಿನ ಗೀಳು!

ಹಿಂದೂ ಆಕ್ಸಿಜನ್,
ಮುಸ್ಲಿಮ್ ವೆಂಟಿಲೇಟರ್
ಕ್ರಿಶ್ಚಿಯನ್ ಡಾಕ್ಟರು
ಎಂದೇನೋ ಇರುವುದಿಲ್ಲ ಗೆಳೆಯಾ….

ಒಂದೊಂದು ಜೀವ
ನಿಲ್ಲಿಸಿದಾಗಲೂ ಉಸಿರು
ನನ್ನ ನೆರಳೂ
ಕೊಲೆಗಾರನ ಸಾಲಿನಲ್ಲಿ!

ಆಕ್ಸಿಜನ್ನಿಗೆ
ವೆಂಟಿಲೇಟರಿಗೆ
ಹೋಗುವ ಮುನ್ನ…
ಭಾರತಕ್ಕೆ ಬೇಕು
ಬುದ್ಧನ ನಗೆ

************

Leave a Reply

Back To Top