ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ ವ್ಯಾಸ ಜೋಶಿ ತನಗಗಳು ಮಳೆ ಹೊಯ್ದ ವರುಣಸೂರ್ಯನ ಕಳಿಸಿದಹಸಿಯಾದ ಭೂಮಿಯುಹದವಾಗಿದೆನೆಂದ? ಬಿಸಿ ಕೊಟ್ಟ ರವಿಯುಹೂವು ಅರಳಿಸಿದಸಂಜೆ ಹೊತ್ತಾಗುತಾತಾನೇ ನಾಚಿ ಕೆಂಪಾದ. ಮಳೆ ಸುರಿಸಿ ಬಾನುಇಳೆಗೆ ಇಣುಕಿತುಚಿಗುರೊಡೆದ ಭೂಮಿಧನ್ಯವಾದ ಹೇಳಿತು. ಹುಲುಸಾದ ಭೂಮಿಗೆಸಂಕ್ರಾಂತಿಯೇ ಸೀಮಂತಸಲಹುವ ಭೂತಾಯಿಕಕ್ಕುಲಾತಿ ಹೃದಯಿ. ಕೀಟವ ತಿಂದ ಹಕ್ಕಿಬೆಳೆಯ ರಕ್ಷಿಸಿತುಮಾಗಿದ ತೆನೆ ತುಂಬಿಮೃಷ್ಟಾನ್ನಪಡೆಯಿತು. ಬೆವರು ಸುರಿಸುತಕಷ್ಟಪಡೋ ರೈತನುಸಾಲ-ಶೂಲವಾದರೂಅನ್ನ ಕೊಡೋ ದಾತನು. ವ್ಯಾಸ. ಜೋಶಿ.

ವ್ಯಾಸ ಜೋಶಿ ಅವರ ತನಗಗಳು Read Post »

ಇತರೆ, ಗಜಲ್ ದುನಿಯಾ

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ

ಗಜಲ್‌ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಎಲ್ಲರಿಗೂ ನಮಸ್ಕಾರಗಳು…ಗಜಲ್.. ಇದು ಕೇವಲ ಕಾವ್ಯ ಪ್ರಕಾರವಲ್ಲ, ಇದೊಂದು ಜೀವನ ಶೈಲಿ, ತಹಜೀಬ್ ಹಾಗೂ ಸಂವೇದನೆಗಳ ಒಂದು ಭಾಗ. ಹೃದಯದ ಆಳದಿಂದ ಹೊರಬರುವ ನಿಜವಾದ ಧ್ವನಿ. ಇದು ಭಾವನೆಗಳು, ಪ್ರೀತಿ, ನೋವು ಮತ್ತು ಭರವಸೆಯ ಸುಂದರ ಅಭಿವ್ಯಕ್ತಿ. ಇದೊಂದು ಎಕ್ಸರೇ ಇದ್ದಂತೆ, ನಮ್ಮೊಳಗಿನ ಗಾಯ ತೋರಿಸಿ ಅರಿತುಕೊಳ್ಳಲು ಸಹಕರಿಸುತ್ತದೆ. ಗಜಲ್… ಕನ್ನಡದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ಹೆಚ್ಚೆಚ್ಚು ಓದುಗರನ್ನೂ- ಬರಹಗಾರರನ್ನು ಸೆಳೆಯುತ್ತಿರುವ ಕಾವ್ಯ ಪ್ರಕಾರ. ಕನ್ನಡದ ಭಾಗಶಃ ಸಾಹಿತ್ಯಾಸಕ್ತರು ಗಜಲ್ ಗಳನ್ನು ಬರೆಯಲು, ಓದಲು ಹಾಗೂ ಗಜಲ್ ಕುರಿತು ತಿಳಿದುಕೊಳ್ಳಲು ಆಸಕ್ತರಾಗಿದ್ದಾರೆ. ಇಂಥ ಗಜಲ್ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿ ಅರ್ಧ ಶತಮಾನವೇ ಉರುಳಿದೆ. ಇಂದು ಗಜಲ್ ಕಾವ್ಯ ಪ್ರಕಾರ ಅಸಂಖ್ಯಾತ ಸಹೃದಯಿಗಳಿಂದ ಕನ್ನಡ ಸಾಹಿತ್ಯ ಪರಪಂಚದಲ್ಲಿ ಸಕ್ರೀಯವಾಗಿದೆ. ಈ ಗಜಲ್ ಕಾವ್ಯ ಪ್ರಕಾರ ಹತ್ತು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಆಂತರಿಕ ಹಾಗೂ ಬಾಹ್ಯ ಲಕ್ಷಣಗಳೆಂದು ವಿಂಗಡಿಸಲಾಗಿದೆ. ಇಂದು ನಾವು ಈ ಲಕ್ಷಣಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ, ಅಳವಡಿಸಿಕೊಳ್ಳುತಿದ್ದೇವೆ ಹಾಗೂ ಆ ದಿಸೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಮತ್ಲಾ, ಮಕ್ತಾ, ರದೀಫ್ ಹಾಗೂ ಕಾಫಿಯಾ… ಇವು ಗಜಲ್ ನ ನಾಲ್ಕು ಅಂಗಗಳು. ಇವುಗಳಲ್ಲಿ ‘ರದೀಫ್’ ಐಚ್ಛಿಕವಾಗಿದ್ದು, ಉಳಿದವುಗಳು ಗಜಲ್ ನ ಜೀವಾಳವಾಗಿವೆ. ಇವುಗಳ ಹೊರತು ಗಜಲ್ ರಚನೆಯಾಗದು. ಯಾರಾದರೂ ಬರೆದಿದ್ದಾರೆ, ಬರೆಯುತ್ತಾರೆ ಎಂದರೆ ಅದು ಗಜಲ್ ಎಂದೆನಿಸಿಕೊಳ್ಳದೆ, ಕಾವ್ಯ ಎಂದೆನಿಸಿಕೊಳ್ಳುವುದು! ಗಜಲ್ ಮೂಲಭೂತವಾಗಿ ಷೇರ್ ಮಾದರಿಯಲ್ಲಿ ಇರುವಂತದ್ದು. ಈ ಷೇರ್ ನ ಪ್ರತಿ ಮಿಸ್ರಾ ಸ್ವತಂತ್ರವಾಗಿದ್ದು, ಒಂದಕ್ಕೊಂದು ಪೂರಕವಾಗಿಯೋ ಅಥವಾ ವಿರುದ್ಧಮುಖವಾಗಿಯೊ ಇರಬೇಕು. ಮಿಸ್ರಾ-ಎ-ಊಲಾದ ಕೊನೆಯಲ್ಲಿಯ ಕೌತುಕತೆ ಮಸ್ರಾ-ಎ-ಸಾನಿಯ ಆರಂಭದಲ್ಲಿ ರೂಪ ಪಡೆಯಬೇಕು. ಅವು ಒಂದರೊಳಗೊಂದು ತಳುಕು ಹಾಕಿಕೊಂಡಿರಬಾರದು. ಇದುವೇ ಕಾವ್ಯವನ್ನು ‘ಗಜಲ್’ ಆಗಿಸುವತ್ತ ಮುನ್ನಡೆಯುತ್ತದೆ. ಇಂಥ ಗಜಲ್ ಗೆ ‘ಮತ್ಲಾ’ ತುಂಬಾ ಅವಶ್ಯಕ. ಇದು ಮನೆಗೆ ಹೊಸ್ತಿಲು ಇರುವಂತೆ! ಇನ್ನೂ ‘ಮತ್ಲಾ’ ಅಂದರೆ ಆರಂಭ, ಉದಯ ಎಂದರ್ಥ. ಇಲ್ಲಿ ಏನು ಹೇಳಬೇಕಾಗಿದೆ ಎನ್ನುವುದರ ನಿರ್ಣಯ, ಗಜಲ್ ಕಾರರ ಉದ್ದೇಶವಿರುತ್ತದೆ. ಗಜಲ್ ಒಳಗೊಂಡಿರಬಹುದಾದ, ಒಳಗೊಳ್ಳಬಹುದಾದ ವಿಷಯ, ಮೀಟರ್, ವಜನ್, ಬೆಹರ್ ಹಾಗೂ ಕವಾಫಿ (ಕಾಫಿಯಾಗಳು) ಆಯ್ಕೆಯನ್ನು ನಿರ್ಧರಿಸುತ್ತದೆ. ‘ಮತ್ಲಾ’ ಏನು ಒಳಗೊಂಡಿರುತ್ತದೆಯೋ ಅದುವೇ ಇಡೀ ಗಜಲ್ ನ ಉದ್ದಕ್ಕೂ ಬರಬೇಕು. ಅದು ಅಲಾಮತ್ ಆದರೂ ಸರಿ, ಮೀಟರ್, ಬೆಹರ್ ಆದರೂ ಸರಿಯೆ! ಅಂತೆಯೇ ಶಾಯರ್/ಶಾಯರಾ ಆದವರು ಮತ್ಲಾವನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಂಡು ಹೋಗಬೇಕು. ಇದೊಂದು ರೀತಿಯಲ್ಲಿ ಗಜಲ್ ನ ಉಳಿದ ಅಶ್ಆರ್ ಗೆ ಸ್ಪಷ್ಟಿಕರಣ ಕೊಡುವ ರೀತಿಯಲ್ಲಿ ಇರುತ್ತದೆ, ಇರಬೇಕು! ಇದು ಗಜಲ್ ನ ಸೌಂದರ್ಯಕ್ಕೆ ಬಾಗಿಲು, ಭಾವ ಲೋಕಕ್ಕೆ ಪ್ರವೇಶದ್ವಾರವಿದ್ದಂತೆ. ಇದು ಅಷ್ಟೊಂದು ಸರಳವಲ್ಲ, ಸುಲಭವೂ ಅಲ್ಲ. ಪ್ರತಿಯೊಬ್ಬರೂ ಇದನ್ನು ‘ಸವಾಲು’ ಎಂದು ಸ್ವೀಕರಿಸಿ ಗಜಲ್ ರಚನೆಗೆ ಮುಂದಾಗಬೇಕು. ‘ಮಕ್ತಾ’ ಎಂದರೆ ಅಂತ್ಯ, ಮುಕ್ತಾಯ. ಗಜಲ್ ಗೆ ‘ಮತ್ಲಾ’ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ‘ಮಕ್ತಾ’. ಇದು ಗಜಲ್ ಗೆ ಒಂದು ತಾರ್ಕಿಕ ಹಾಗೂ ಭಾವನಾತ್ಮಕ ಅಂತ್ಯವನ್ನು ನೀಡುತ್ತದೆ. ಅಂದರೆ, ಶಾಯರ್/ಶಾಯರಾ ಅವರ ಇಂಗಿತ, ಆಶಯ ಹಾಗೂ ಉದ್ದೇಶವನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂದರೆ, ಅವರ ಅಂತಿಮ ಮಾತು, ಸಂದೇಶ ಹಾಗೂ ವೈಯಕ್ತಿಕ ಧ್ವನಿಗೆ ವೇದಿಕೆಯನ್ನು ಒದಗಿಸುತ್ತದೆ. ಈ ಷೇರ್ ಓದುತಿದ್ದಂತೆಯೇ ಗಜಲ್ ಮುಗಿಯಿತು ಎಂಬ ಭಾವ ಸಹೃದಯ ಓದುಗರಲ್ಲಿ, ಕೇಳುಗರಲ್ಲಿ ಬರುತ್ತದೆ, ಬರಬೇಕು. ಇಂತಹ ‘ಮಕ್ತಾ’ಗೆ ಇನ್ನೊಂದು ಬಹುಮುಖ್ಯವಾದ ಲಕ್ಷಣವಿದೆ. ಅದೆಂದರೆ ‘ತಖಲ್ಲುಸ’. ತಖಲ್ಲುಸ್ ಅಂದರೆ ಶಾಯರ್/ಶಾಯರಾ ಅವರ ಗುರುತು. ಇಲ್ಲಿ ಅವರು ತಮ್ಮ ಹೆಸರು, ಇಲ್ಲವೇ ತಮ್ಮ ಇಷ್ಟದ ಹೆಸರನ್ನು ಬಳಸುತ್ತಾರೆ. ಇದು ಹೆಚ್ಚಾಗಿ ‘ನಾಮವಾಚಕ’ವಾಗಿಯೇ ಬಳಕೆಯಾಗಿದೆ. ಆದಾಗ್ಯೂ ಈ ತಖಲ್ಲುಸ್ ರೂಪಕವಾಗಿ ಬಳಕೆಯಾದರೆ ‘ಮಕ್ತಾ’ಗೆ ಒಂದು ಅನುಪಮ ಕಳೆ ಬರುತ್ತದೆ. ‘ತಖಲ್ಲುಸ್’ ಬಳಕೆ ಐಚ್ಛಿಕವಾಗಿದ್ದರೂ ಅದರ ಉಪಸ್ಥಿತಿಯೇ ‘ಮಕ್ತಾ’ಗೆ ಅನ್ವರ್ಥಕವಾಗಿದೆ. ಒಂದುವೇಳೆ ಬೇಮಕ್ತಾ ಷೇರ್ ಇದ್ದರೆ ಅದನ್ನು ಗಜಲ್ ನ ಕೊನೆಯ ಷೇರ್ ಎಂದು ಗುರುತಿಸುವುದು ಕಷ್ಟ! ಇನ್ನೂ ಕಾಫಿಯಾ… ಗಜಲ್ ನ ಉಸಿರು, ಕವಾಫಿ (ಕಾಫಿಯಾಗಳು) ಹೊರತುಪಡಿಸಿ ಗಜಲ್ ಅನ್ನು ಊಹಿಸಿಕೊಳ್ಳಲೂ ಆಗದು! ಕಾಫಿಯ ಆಯ್ಕೆ ಶಾಯರ್/ಶಾಯರಾ ಅವರ ಸೃಜನಶೀಲತೆ, ಗಜಲ್ ಮೇಲಿನ ಪ್ರೀತಿ-ಹುಚ್ಚನ್ನು ಅವಲಂಬಿಸುತ್ತದೆ. ಗಜಲ್ ಕಲಿಕೆಯ ಆರಂಭಿಕ ಹಂತದಲ್ಲಿ ‘ಕಾಫಿಯಾ’ವನ್ನು ಸಾಮಾನ್ಯವಾಗಿ ‘ಪ್ರಾಸ’ ಎಂದು ಗುರುತಿಸಲಾಗುತ್ತದೆ. ಆದರೆ ‘ಪ್ರಾಸ’ ಎಂಬ ಸಾಮಾನ್ಯೀಕರಣ ತುಂಬಾ ಅಪಾಯಕಾರಿ! ಏಕೆಂದರೆ ಕಾಫಿಯಾ ಎಂದರೆ ಕೇವಲ ಪ್ರಾಸವಲ್ಲ, ರವಿ/ರವೀಶ್ ಹೊಂದಿದ್ದರೆ ಸಾಲದು. ಸಾಧ್ಯವಾದಷ್ಟು ಸಮತೂಕ ಹಾಗೂ ಸಮ ಅಕ್ಷರಗಳಿಂದ ಕೂಡಿದ್ದು ರೌಫ್, ಕೈದ್ ಒಳಗೊಂಡಿರಬೇಕು. ಏಕ ಅಲಾಮತ್ -ಬಹು ಅಲಾಮತ್ ರೂಢಿಸಿಕೊಂಡಿರಬೇಕು. ಇದು ಅಷ್ಟೊಂದು ಸುಲಭವಲ್ಲ, ಇದಕ್ಕೆ ಬದ್ಧತೆ ಮತ್ತು ಅಭ್ಯಾಸ ಬೇಕು. ಇದು ಸೃಜನಶೀಲತೆಗೆ ಅಡ್ಡಿಪಡಿಸುತ್ತದೆ ಎಂದು ಭಾವಿಸುವುದು ತರವಲ್ಲ, ಬದಲಿಗೆ ಇದುವೇ ಸೃಜನಶೀಲತೆ ಎಂದು ಬಯಸಬೇಕು! ಪರಿಪೂರ್ಣ ಕವಾಫಿಯ ಆಯ್ಕೆಯೇ ಗಜಲ್ ಅನ್ನು ಗೆಲ್ಲಿಸುತ್ತದೆ. ಅಂತೆಯೇ ಕವಾಫಿ ಗಜಲ್ ನ ಧ್ವನಿಯನ್ನು ಬಲಪಡಿಸುವಂತಿರಬೇಕು, ಗಜಲ್ ನ ಭಾವಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಆರಿಸಬೇಕು. ಸಂದರ್ಭಕ್ಕೆ ತಕ್ಕಂತೆ ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಇರಬೇಕು. ಇಂತಹ ‘ಕಾಫಿಯಾ’ ಇಲ್ಲದ ಬರಹ ಕಾವ್ಯವಾಗಬಹುದೇ ಯಾವತ್ತೂ ಗಜಲ್ ಆಗದು! ಇದು ಕಹಿಯೆನಿಸಿದರೂ ಸತ್ಯ! ರದೀಫ್.. ಗಜಲ್ ಗೆ ಹಾಡುಗಬ್ಬದ ಪೋಷಾಕು ತೊಡಿಸುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ‘ಗಜಲ್’ ಶಿಷ್ಟ ಸಾಹಿತ್ಯ ಪ್ರಕಾರವಾದರೂ ರದೀಫ್ ಇದಕ್ಕೆ ಜಾನಪದೀಯ ರೂಪವನ್ನು ನೀಡುವಲ್ಲಿ ಶ್ರಮಿಸುತ್ತದೆ. ಗಜಲ್ ಗೆ ವಿಶಿಷ್ಟ ಗೇಯತೆ, ಲಾಲಿತ್ಯ ಮತ್ತು ಭಾವತೀವ್ರತೆಯನ್ನು ನೀಡುತ್ತದೆ. ಇದುವೇ ಜನರ ನಾಲಿಗೆಯ ತುದಿಯಲ್ಲಿ ಜೀವಂತವಾಗಿ ಉಳಿಯುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ರದೀಫ್ ನ ಆಯ್ಕೆಗೆ ಸಮರ್ಪಕ ಯೋಚನೆ ಅವಶ್ಯಕ. ಅನಗತ್ಯ ಪದಗಳ, ಶಬ್ಧಗಳ ಬಳಕೆ ರಸಭಂಗ ಮಾಡುತ್ತದೆ ಎಂಬುದನ್ನು ಮರೆಯಬಾರದು! ಸಾಮಾನ್ಯವಾಗಿ ದಿನನಿತ್ಯ ಬಳಸುವ ಪದಗಳಿಗಿಂತ ವಿಭಿನ್ನವಾಗಿಯೂ, ಗಾಢಭಾವ, ಸುಲಭವಾಗಿ ಉಚ್ಚರಿಸಬಲ್ಲಂತಹ ಪದಗಳ ಆಯ್ಕೆ ಮಾಡಬೇಕು. ರದೀಫ್ ಗಜಲ್ ನ ಕಾಂತಿ, ರಮ್ಯತೆ ಹಾಗೂ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೆ ‘ರದೀಫ್’ ಅತ್ಯವಶ್ಯಕ. ಆದಾಗ್ಯೂ ಇದರ ಬಳಕೆ ಐಚ್ಛಿಕವಾಗಿದೆ! ಇನ್ನೂ ಗಜಲ್‌ನ ಭಾಷೆ ಲಾಲಿತ್ಯಪೂರ್ಣ, ಸಂಕೇತಾತ್ಮಕ ಮತ್ತು ಸಂವೇದನಾಶೀಲವಾಗಿರಬೇಕು. ನೇರವಾದ ಹೇಳಿಕೆಗಳ ಬದಲು ಸೂಚನೆ, ಸಂಕೇತ ಮತ್ತು ರೂಪಕಗಳ ಮೂಲಕ ಭಾವವನ್ನು ಹೇಳುವುದು ಗಜಲ್‌ನ ಮುಖ್ಯ ಲಕ್ಷಣವಾಗಿದೆ. ಭಾಷೆ ಸರಳವಾಗಿದ್ದರೂ ಅರ್ಥದಲ್ಲಿ ಗಾಢತೆ ಹೊಂದಿರಬೇಕು. ರೂಪಕ, ಪ್ರತೀಕ, ಅಲಂಕಾರ, ವ್ಯಂಗ್ಯಗಳ ಸಮೃದ್ಧ ಬಳಕೆಯಾಗಬೇಕು. ಪ್ರತಿ ಷೇರ್ ಸ್ವತಂತ್ರವಾಗಿದ್ದರೂ ಭಾಷೆಯ ಲಯ ಮತ್ತು ಭಾವದ ತೀವ್ರತೆ ಗಜಲ್‌ಗೆ ಏಕತೆಯನ್ನು ನೀಡಬೇಕು. ಉರ್ದೂ ಗಜಲ್ ಪರಂಪರೆಯಲ್ಲಿ ಪರ್ಷಿಯನ್–ಅರಬಿ ಪದಗಳ ಪ್ರಭಾವ ಕಂಡುಬಂದರೂ, ಕನ್ನಡ ಗಜಲ್‌ನಲ್ಲಿ ದೇಸಿ, ತದ್ಭವ ಮತ್ತು ತತ್ಸಮ ಪದಗಳ ಸಮನ್ವಯ ಕಾಣಸಿಗುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್‌ನ ಭಾಷೆ ಹೇಳುವುದಕ್ಕಿಂತ ಸೂಚಿಸುವುದರ ಕಡೆಗೆ, ವಿವರಿಸುವುದಕ್ಕಿಂತ ಅನುಭವಿಸಿಸುವುದರ ಕಡೆಗೆ ಗಮನ ಹರಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ. ಅಂದರೆ ಗಜಲ್ ಕೋಮಲ, ಮೃದುತ್ವ ಮತ್ತು ಹೃದಯ ತಟ್ಟುವ ಪದಗಳ ಬಳಕೆಯನ್ನು ನಿರೀಕ್ಷಿಸುತ್ತದೆ. ಅಂತೆಯೇ ಇಲ್ಲಿ ಬೌದ್ಧಿಕತೆಗಿಂತ ಹೃದಯವಂತಿಕೆ ಅತ್ಯವಶ್ಯಕ! ಇಂದು ಗಜಲ್ ಕೇವಲ ಪ್ರೇಮಕ್ಕೆ ಸೀಮಿತವಾಗಿ ಉಳಿದಿಲ್ಲ; ಮಾನವನ ಅಂತರಂಗ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತಿದೆ. ಪ್ರೇಮ ಮತ್ತು ವಿರಹ, ನೋವು ಮತ್ತು ಮನೋವ್ಯಥೆ, ತತ್ತ್ವ ಮತ್ತು ಅಸ್ತಿತ್ವದ ಪ್ರಶ್ನೆಗಳು, ಸಾಮಾಜಿಕ ವ್ಯಂಗ್ಯ ಮತ್ತು ವಿರೋಧ, ಆಧ್ಯಾತ್ಮಿಕ ಮತ್ತು ಸೂಫಿ ಭಾವನೆ, ನೆನಪು, ಕನಸು ಮತ್ತು ಹಂಬಲ.. ಎಲ್ಲವನ್ನೂ ಗಜಲ್ ಒಳಗೊಳ್ಳುತ್ತಿದೆ! ಆದರೆ ಒಂದನ್ನು ನಾವು ಮರೆಯಬಾರದು, ಅದೆಂದರೆ ಅಭಿವ್ಯಕ್ತಿಯ ಕ್ರಮ! ಗಜಲ್ ಯಾವುದೇ ವಿಷಯವನ್ನು ಒಳಗೊಳ್ಳಬಹುದು, ಆದರೆ ಅದು ಸಹೃದಯ ಓದುಗರ, ಕೇಳುಗರ ಹೃದಯದ ಕದ ತಟ್ಟಬೇಕು! ಪ್ರತಿಯೊಂದು ಕಾವ್ಯದ ಬಗ್ಗೆ ಮಾತಾಡುವಾಗಲೆಲ್ಲ ನಾವು ‘ಆತ್ಮ’ದ ಉಲ್ಲೇಖ ಮಾಡುತ್ತೇವೆ. ಅಂದರೆ, ಬಾಹ್ಯ ಲಕ್ಷಣಗಳಿಗಿಂತಲೂ ಆಂತರಿಕ ಭಾವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ನೆಲೆಯಲ್ಲಿ! ಹೌದು, ಪ್ರತಿ ಬರಹದ ಮೂಲ ಸ್ಥಾಯಿಯೇ ಅದು ಒಳಗೊಂಡಿರಬಹುದಾದ ಧ್ವನಿ, ರಸ! ಹಾಗಂತ ಬಾಹ್ಯ ಲಕ್ಷಣಗಳನ್ನು ನಿರಾಕರಿಸುವಂತಿಲ್ಲ. ಏಕೆಂದರೆ ನಮಗೆ ಮೊದಲು ಗೋಚರಿಸುವುದೆ ಭೌತಿಕ ಶರೀರ, ನಂತರವಷ್ಟೇ ಆತ್ಮದ ಪರಿಚಯ! ಇಲ್ಲಿ ಇನ್ನೊಂದು ಅಪಾಯವಿದೆ, ಏನೆಂದರೆ ಲಕ್ಷಣಗಳು ಕೇವಲ ‘ಹಿಟ್ಟಿನ ಹುಂಜ’ವನ್ನು ತಯಾರಿಸುವಂತಾಗಬಾರದು! ಆಂತರಿಕ ಹಾಗೂ ಬಾಹ್ಯ ಲಕ್ಷಣಗಳ ಸಾಮರಸ್ಯ ಶಾಯರ್/ಶಾಯರಾ ಸಾಧಿಸುವಂತಾಗಬೇಕು. ಆವಾಗಲೇ ಗಜಲ್ ಉದಯಿಸಲು ಸಾಧ್ಯ, ಸಾರಸ್ವತ ಲೋಕದಲ್ಲಿ ನೆಲೆಯೂರಲು ಸಾಧ್ಯ ಹಾಗೂ ರಸಿಕರ ನಾಲಿಗೆಯ ತುದಿಯಲ್ಲಿ ನುಲಿಯಲೂ ಸಾಧ್ಯ! ಡಾ. ಮಲ್ಲಿನಾಥ ಎಸ್. ತಳವಾರ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು,ಕನ್ನಡ ಅಧ್ಯಯನ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ Read Post »

ಕಾವ್ಯಯಾನ

“ನಾನು ನಾನಾಗದಿದ್ದರೆ…?” ಡಾ.ತಾರಾ ಬಿ.ಎನ್.ಧಾರವಾಡ

ಕಾವ್ಯ ಸಂಗಾತಿ ಡಾ.ತಾರಾ ಬಿ.ಎನ್.ಧಾರವಾಡ “ನಾನು ನಾನಾಗದಿದ್ದರೆ…?” ನಾನು ನಾನಾಗದಿದ್ದರೆಬೆಳಗಿನ ಕಿರಣಗಳುನನ್ನ ಬಳಿ ಬಂದುಹೆಸರೇ ಇಲ್ಲದ ಆತ್ಮವನ್ನು  ಹುಡುಕುತ್ತಿರಬಹುದೇ?ಕನ್ನಡಿಯ ಮುಂದೆ ನಿಂತಾಗನನ್ನ ಕಣ್ಣುಗಳಲ್ಲಿ ನನ್ನನ್ನೇಕಾಣಲಾಗದ ದಿನ,ಆ ನೋಟವೇ ನನಗೆನಾನೇ ಅಪರಿಚಿತನಾಗಿ ಬಿಡುವೆನಾನು ನಾನಾಗದಿದ್ದರೆ, ನನ್ನ ನಗುವೂ ಸಾಲುಗಟ್ಟಿದ ಸಾಲಾಗಿಬಿಡುತ್ತದಾ?ಮನಸ್ಸು ನಿಜವಾಗಿಹರ್ಷವಾಗದಿದ್ದರೂವದನ ಮಾತ್ರಜಗತ್ತಿಗೆ ಉತ್ತರಿಸಬೇಕೆಂದುನಗು  ಮುಖವಾಡಧರಿಸಬೇಕಾಗುತ್ತಾ?ನಾನು ನಾನಾಗದಿದ್ದರೆ, ನನ್ನ ಮೌನಕ್ಕೂ ಅರ್ಥವಿಲ್ಲದೆಹೃದಯದ ಆಂತರ್ಯದಲಿಉಕ್ಕುವ ಪ್ರಶ್ನೆಗಳುಶಬ್ದವಾಗದೇ,ಕೇವಲ ಭಾರವಾಗಿಯೇಉಳಿಯುತ್ತವೆನಾನು ನಾನಾಗದಿದ್ದರೆ, ನನ್ನ ನೋವಿಗೂಅನುಮತಿ ಬೇಕಾಗುತ್ತನನ್ನ ಕಣ್ಣೀರು ಕೂಡನಾಚಿಕೆಯಿಂದಹಿಂದಿರುಗಿಬಿಡುವುದುನಾನು ನನಾಗದಿದ್ದರೆ,ನನ್ನ ಕನಸುಗಳು ಯಾರದೋ ಅಧೀನದಲಿ ಸಿಕ್ಕಿಹಾಕಿಕೊಂಡು“ಸಾಧ್ಯ” ಮತ್ತು “ಅಸಾಧ್ಯ” ಎಂಬ ಗೋಡೆಗಳ ನಡುವೆಉಸಿರುಗಟ್ಟುತ್ತವೆ.ನಾನು ನಾನಾಗದಿದ್ದರೆ, ನನ್ನೊಳಗಿನ ನಗುವನ್ನುಯಾರಿಗೂ ತೋರಿಸದಂತೆ ಕೇಳುವ ಸರಳ ಪ್ರಶ್ನೆಗಳಿಗೆನನ್ನಲ್ಲೇ ಉತ್ತರ ಇರದೇ ಹೋಗುತ್ತದಯೇ ?ಆದರೆನಾನು ನಾನಾಗಿರುವುದೇಒಂದು ಕ್ರಾಂತಿ.ನನ್ನ  ಶಕ್ತಿ ದೌರ್ಬಲ್ಯಗಳೊಂದಿಗೆ,ನನ್ನ ಭಯಗಳೊಂದಿಗೆ,ನನ್ನ ಸಂಪೂರ್ಣತೆಯೊಂದಿಗೆನಾನು ನಿಂತಿರುವುದೇನನ್ನ ಅಸ್ತಿತ್ವದ ಆಧಾರನನ್ನ ಆತ್ಮಬಲದ ಘೋಷಣೆ.ನಾನು ನಾನಾಗಿದ್ದರೆ,ನನ್ನ ಕಣ್ಣೀರಿಗೆ ಕಾರಣ ಬೇಕಾಗಿಲ್ಲ,ನಗುವಿಗೆ ಅನುಮತಿ ಬೇಕಾಗಿಲ್ಲ.ನಾನು ಬಿದ್ದರೂ,ಮತ್ತೆ ಏಳುವ ಹಕ್ಕು ನನಗಿದೆ.ನಾನು ನಾನಾಗಿರುವ ತನಕ,ನನ್ನ ಜೀವನ   ಬಯಕೆ, ಆದರ್ಶ ಉತ್ತರ ಹುಡುಕುವ ದಾರಿಯೂನನ್ನದೇ ಆಗಿರುತ್ತದೆ.ಹಾಗಾಗಿ,ನಾನು ನಾನಾಗದಿರುವ ಲೋಕಕ್ಕಿಂತನಾನು ನಾನಾಗಿರುವ  ಭಾವ ನಿಜವಾದ ಜೀವನವೇ ಸ್ವಾದ ಡಾ ತಾರಾ ಬಿ ಎನ್ ಧಾರವಾಡ

“ನಾನು ನಾನಾಗದಿದ್ದರೆ…?” ಡಾ.ತಾರಾ ಬಿ.ಎನ್.ಧಾರವಾಡ Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ “ಹತ್ತು ಶಾಯಿರಿಗಳು”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ “ಹತ್ತು ಶಾಯಿರಿಗಳು” ೧ನಿನ್ನ ಮ್ಯಾಲ ನಾ ಬರಿಬೇಕಾದ ಸಾಲೆಲ್ಲಯಾರೋ ಕದ್ದಕೊಂಡ ಹೋಗ್ಯಾರ,ನಿಜಆದರ ನಿನ್ನ ಮ್ಯಾಲ ನಾ ಇಟ್ಟಿರೋಪ್ರೀತಿನ ಯಾರ ಕದ್ದಕೊಂಡಹೋಗ್ತಾರ ೨ಗಿಡದಾಗ ಅರಳಿದ ತಾಜಾಹೂವ ಹರಿದುನಿನ್ನ ಮುಡಿಗೆ ಅರ್ಪಿಸಬೇಕಂತಿದ್ದೆಆದರ ಅದರೊಳಗಿಂದ ದುಂಬಿಹಾರಿ ಹೋದದ್ದ ನೋಡಿಅವು ಮೀಸಲಲ್ಲ ಅಂತಹೃದಯಾನ ಹೂವ ಮಾಡಿಅರ್ಪಿಸಿ ಬಿಟ್ಟೆ. ೩ನೀ ಪ್ರೀತಿ ಮಾಡಿತಿದಿ ಇಲ್ಲ,ನನ್ನ ಮುಂದಿರೂ ಪ್ರಶ್ನೆನ ಅಲ್ಲನೀ ಒಮ್ಮೆ ಪ್ರೀತಿ ಮಾಡಿದ್ದಿ ಅನ್ನೊಉತ್ತರನ ಈ ಜನ್ಮ ಮುಗಸಾಕನನಗ ಸಾಕು ೪ಪ್ರೀತಿ ಪ್ರೇಮ ಸುಳ್ಳು ಅಂತವಾದ ಮಾಡು ಹುಚ್ಚರನ್ನಕಾಂಡ್ರಿಕ್ ನನಗ ನಗಿ ಬರ್ತದೆಮಳಿ ಬೆಳಿ ಸುಳ್ಳಂದರಜೀವನ ಹೆಂಗ ನಡಿತೈತಿ೫ದೇವಸ್ಥಾನದಾಗ ದೇವ್ರುಅದಾನ ಬಿಟ್ಟಾನ ಅದುನನಗ ಮುಖ್ಯ ಅಲ್ಲಎದಿ ಮದೇವಸ್ಥಾನದಾಗಸ್ಥಾಪಿತಾದ ನಿನ್ನ ಮೂರ್ತಿಬಿಟ್ಟರ ನನಗ ಬ್ಯಾರೆ ದೇವರ ಬೇಕಿಲ್ಲ ೬ಹಾದು ನಾನು ಹುಚ್ಚಬಹಳ ಮಂದಿ ಇವ ಹುಚ್ಚ ಅಂದರಅದು ಖರೇನ ಅಂತಿನಿಆದರ ಅವರು ತಮ್ಮ ಹುಚ್ಚ ಮರತುಮಾತಾಡೂದು ಕಂಡನಾ ಒಳಗೊಳಗ ನಗತಿನಿ ೭ದಿನಾ ಪ್ರವಚನ ಕೇಳಾಕ ಹೋದಆ ಸುಂದರಿ ಮುಖ ನೋಡಿ ನೋಡಿಅವನ ಆ ಪ್ರವಚನದಾಗಆಕಿ ಒಂದ ಪಾತ್ರ ಆದದ್ದುಹೆಂಗಂತ್ ನನಗ ತಿಳಿವಲ್ದು ೮ಜೀವನ ಅಂದರ ಇದ ಇರಬೇಕುಪ್ರೀತಿ ಮಾಡಿದವರು ಕೈ ಕೊಟ್ಟರೂಪ್ರೀತಿ ಕೈಕೊಡಂಗೊಇಲ್ಲಹಂಗಂತನ ಈ ಪ್ರೇಮ ಕವಿತಾಹುಟ್ಟಗೋತನ ಇರ‍್ತಾವಲ್ಲ ೯ಉದಯ ಆಗೋ ಆ ಸೂರ್ಯಾಗನಂದ ಒಂದ ವಿನಂತಿಬಹಳ ಸುಡು ಸುಡು ಬಿಸಲ  ಬೀರಬ್ಯಾಡನನ್ನ ಎದಿಯಾಗ ತಣ್ಣಗ ಇರುಆಕಿ ಹಸರ ನೆನಪು  ಆರಿ ಹೋದೀತು ಅಂತ ೧೦ಹರಕೊಂಡು ಹೋಗೂ ಮಳಿ ನೀರಿನ್ಯಾಗಎಲ್ಲಾ ಹರಕೊಂಡ ಹೋಗ್ತಾವಎಂಥ ವಿಸ್ಮಯ ಅಂತಿಎಂಥ ರ‍್ರನ ಮಳಿ ಅದರೂಎದಿಯಾಗಿನ ನೆನಪ ಮಾತ್ರ ಶಾಶ್ವತ ಇರ‍್ತಾವ ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ “ಹತ್ತು ಶಾಯಿರಿಗಳು” Read Post »

ಕಥಾಗುಚ್ಛ

“ತಪ್ಪು” ಸಣ್ಣ ಕಥೆ, ಚಂದ್ರಿಕಾ ನಾಗರಾಜ್ ಹಿರಿಯಡಕ

ಕಥಾ ಸಂಗಾತಿ ಚಂದ್ರಿಕಾ ನಾಗರಾಜ್ ಹಿರಿಯಡಕ “ತಪ್ಪು” ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಒಂದೊಂದೇ ಹನಿ ರಕ್ತ ನೆಲಕ್ಕೆ ಬೀಳುತ್ತಿತ್ತು.‌ ಒಂದು ನೊಣ ಬಂದು  ರಕ್ತವನ್ನೊಮ್ಮೆ ಮೂಸಿ ಹಾರಿತು. ಸ್ವಲ್ಪ ಸಮಯದ ಬಳಿಕ ಮತ್ತೆ ನಾಲ್ಕು ನೊಣಗಳು ರಕ್ತದ ಮೇಲೆ ಕುಳಿತು, ಹಾರಿ, ಮತ್ತೆ ಕುಳಿತು ನೆಕ್ಕುವ ಕಾರ್ಯದಲ್ಲಿ ನಿರತವಾದವು.‘ತಪ್ಪು ಮಾಡಿ ಬಿಟ್ನಾ?’ ಸುತ್ತ ಕತ್ತಲೆ ಕವಿದಂತಾಯಿತು.ಅಮ್ಮನ ಹತ್ರ ಮುದ್ದೆ, ನಾಟಿ ಕೋಳಿ ಸಾರು ಮಾಡು ಅಂದಿದ್ದೆ…ಸಂಜೆ ಬರ್ತಾ ಹೂವ ತಂದು ಬಿಡು…ಶುಕ್ರವಾರಲಾ ದೇವ್ರಿಗೆ ಹಾಕೋಕೆ  ಅಂದಿದ್ಲು…ಅದಕ್ಕೂ ಮೊದಲು ಸುಮಾ ಆಂಜನೇಯ ಗುಡಿ ಹತ್ರ ಸಿಕ್ತೀನಿ ಅಂದಿದ್ಲು…ಎಲ್ಲವೂ ಕಣ್ಣೆದುರು ಒಂದು ಕ್ಷಣ ತೇಲಿ ಹೋದವು.ಆವತ್ತೇನಾಗಿತ್ತು….ಅಮ್ಮ, ಏಳಮ್ಮ…ಮೈ ಕೈ ಸುಡ್ತಾ ಇದ್ಯಲಾ…ತಾಯಿಯ ಹಣೆ ಮುಟ್ಟಿದ ರಾಘು ಸಣ್ಣಗೆ ಕಂಪಿಸಿದ. ಭಯಗೊಂಡ. ಯಾವಾಗಲೂ ಲವಲವಿಕೆಯಿಂದ, ಮನೆ ಕೆಲಸ, ಜೊತೆ ಸಾಹುಕಾರರ ಮನೆ ಕೆಲಸ ಮಾಡಿಕೊಂಡಿದ್ದ ತಾಯಿ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದರೆ ಮಗನಿಗೆ ಹೇಗಾಗಬೇಡ…ಊರಿನ ಆಸ್ಪತ್ರೆಗೆ ತೋರಿಸಿದಾಗ ಹೊಟ್ಟೆಯಲ್ಲಿ ಬೆಳೆದಿರುವ ಗಡ್ಡೆ ಬಗ್ಗೆ…ಆಪರೇಷನ್ ಮಾಡಿಸಲು ನಗರದ ಆಸ್ಪತ್ರೆಯನ್ನು ಸೂಚಿಸಿದರು.ಪಕ್ಕದ ಮನೆಯರೆಲ್ಲ ಮನೆಗೆ ಬಂದು ನೂರು ಮಾತಾಡಿದರು. ಮಗನಿಗೆ ಕಷ್ಟ ಕೊಡಬಾರದೆಂದು ತಾಯಿ ಇಷ್ಟು ವರ್ಷಗಳ ಕಾಲ ಹೊಟ್ಟೆ ನೋವು ಸಹಿಸಿಕೊಂಡಿದ್ದರ ಮುಂದೆ ಲಕ್ಷಾಂತರ ಖರ್ಚು ದೊಡ್ಡದಾಗಿ ಕಾಣಲಿಲ್ಲ ರಾಘುಗೆ. ಆದ್ರೆ, ದುಡ್ಡಿಗಾಗಿ ಏನ್ ಮಾಡೋದು?ತಾನು ಕೆಲಸ ಮಾಡುತ್ತಿದ್ದ ತೋಟದ ಒಡೆಯನ ಮುಂದೆ ಹೋಗಿ ಕೈಯೊಡ್ಡಿದ.‘ಅಷ್ಟೊಂದ್ ದುಡ್ಡು ಕೊಡೋಕಾಗಲ್ಲಯ್ಯ…’ ಎಂದು ಬಿಟ್ಟಿದ್ದರು. ಸಾಲ ಕೊಡೋರು ಯಾರು ಸಿಕ್ಕಿರಲಿಲ್ಲ. ಆಗಲೇ ರಾಘು ತಪ್ಪು ಮಾಡಿದ್ದ. ಆ ಕ್ಷಣಕ್ಕೆ ಅವನಿಗೆ ಸರಿ ಕಂಡಿದ್ದು ಅದೊಂದೆ.‌ಅಂದೊಂದು ದಿನ ಧನಿಯ ಪತ್ನಿಯ ಚಿನ್ನದ ಸರ ಕದ್ದು ಬಿಟ್ಟ. ಅದ್ಯಾರಲ್ಲೋ ಅಡವಿಟ್ಟು ಹಣ ಪಡೆದು ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದ. ಅತ್ತ ಆಪರೇಷನ್ ನಡೆಯುತ್ತಿದ್ದರೆ, ಇತ್ತ ರಾಘುವೇ ಚಿನ್ನ ಕದ್ದಿರುವುದೆಂದು ಗೊತ್ತಾಗಿ ಕೈಗೆ ಕೋಳ ಹಾಕಲಾಯಿತು. **** ಅವತ್ ನಾನು ಆ ತಪ್ಪು ಮಾಡದೇ ಹೋಗಿದ್ರೆ ಅಮ್ಮನ ಉಳಿಸಿಕೊಳ್ಳಲಾಗ್ತಿತ್ತೆ? ರಾಘು ಕಣ್ಣಿಂದ ಒಂದು ಹನಿ ಕಣ್ಣೀರು ಜಾರಿ ನೆಲಕ್ಕೆ ಬಿದ್ದಿದ್ದ ರಕ್ತದ ಹನಿಗಳ ಜೊತೆಯಾಯಿತು. ಈಗ ರಕ್ತದ ಮೇಲೆ ನೊಣಗಳು ಮಾತ್ರವಲ್ಲ ಇರುವೆಗಳ ಸಂಚಾರವೂ ಶುರುವಾಗಿತ್ತು. ಕೈ ಮೇಲೆ ಹಾರಾಡುತ್ತಿದ್ದ ನೊಣಗಳು ರಾಘುವಿಗೆ ಹಿಂಸೆ ಎನಿಸುತ್ತಿರಲಿಲ್ಲ. ಮನಸ್ಸಿನೊಳಗಿನ ಸಾವಿರ ಯೋಚನೆಗಳು ಹೊರಪ್ರಪಂಚದ ಚಲನ ವಲನಗಳ ಮೇಲೆ ನಿಗಾ ಇಡಲು ಅವಕಾಶ ಕೊಡಬಲ್ಲುದೇ…ರಾಘು ತಾಯಿ ಚೇತರಿಸಿಕೊಳ್ಳುತ್ತಿದ್ದಂತೆ ಮಗ ಜೈಲು ಸೇರಿರುವ ವಿಚಾರ ತಿಳಿಯಿತು. ತನಗಾಗಿ ಮಗ ಮಾಡಿದ ತಪ್ಪಿಗೆ ಸಂಕಟ ಪಟ್ಟ ಆಕೆ ಧನಿಯ ಮುಂದೆ ಅಂಗಾಲಾಚಿದಳು. ಆಕೆಯ ದುಃಖ ಅರಿತ ಧನಿಯ ಪತ್ನಿ ಪತಿಯಲ್ಲಿ ಹೇಳಿ ರಾಘುವನ್ನು ಸೆರೆ ಮನೆಯಿಂದ ಹೊರ ಬರುವಂತೆ ಮಾಡಿದಳು.***ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದವನಿಗೆ ಮತ್ತೆ ಕೆಲಸ ಕೊಡಲೊಪ್ಪಲಿಲ್ಲ ತೋಟದ ಯಜಮಾನ. ಕಂಗೆಟ್ಟು ಹೋದ ರಾಘುಗೆ ದಾರಿ ತೋರಿಸಿದ್ದು, ಮಣ್ಣು. ಹಿತ್ತಲಿನಲ್ಲಿದ್ದ ಪುಟ್ಟ ಜಾಗದಲ್ಲಿ ಬಸಳೆ, ಹರಿವೆ ನಲಿದವು. ತೊಂಡೆ ಕಾಯಿ ಚಪ್ಪರ ನಕ್ಕಿತು. ಬೆಂಡೆ ಕಾಯಿ, ಅಲಸಂಡೆ ಕೈ ಕುಲುಕಿದವು. ರಾಘು ಚೆಂದದ ಜೀವನ ಆರಂಭಿಸಿದ್ದ. ಮಾವನ ಮಗಳು ಸುಮಾ ಬದುಕ ಪಯಣಕೆ ಜೊತೆಯಾಗಲು‌ ಅಣಿಯಾದಳು. ಆದರೆ, ಅವರ ಕನಸುಗಳಿಗೆ ವಿಧಿ ಹರಸಲಿಲ್ಲ…***ತಾಯಿಗಾಗಿ ರಾಘು ಕದ್ದಿದ್ದ…ಆದರೆ, ಕೆಲವರು ಆತನ ಆ ತಪ್ಪನ್ನು ಕೆಣಕುತ್ತಿದ್ದರು. ಅವರಲ್ಲಿ ಮಂಜು, ಭದ್ರ ಕೂಡ ಇಬ್ಬರು.ಅಂಗಡಿಗೆ ಬಂದವರೆ ‘ಕಳ್ಳ, ಇದಕ್ಕೆಷ್ಟೋ, ಅದಕ್ಕೆಷ್ಟೋ’, ‘ಕಳ್ಳ ಎಲ್ಲಿಂದ ಕದ್ಕೊಂಡ್ ಬಂದ್ಯೋ ಸೊಪ್ಪನ್ನ’ ಎಂದು ದಿನ ನಿತ್ಯ ಹಂಗಿಸುತ್ತಿದ್ದರು. ರಾಘು ತಾಳ್ಮೆಯಿಂದಲೇ ಇದ್ದ.‌ ಆದ್ರೆ, ಅವತ್ತು ಅದೇನಾಯ್ತೋ ಬುದ್ಧಿಯ ಮೇಲೆ ಕೋಪಾಗ್ನಿ ಉರಿಯಿತು.‘ಕಳ್ಳಂಗೆ ಮದ್ವೆ ಅಂತೆ…ಹುಡ್ಗಿ ಕಳ್ಳಿನೇ ಇರ್ಬೇಕು…ಅಥವಾ…’ ಮಂಜು, ಭದ್ರನಾ ನಗು ಕೆರಳಿಸಿತು.    ಹಲ್ಲು ಕಚ್ಚಿ ನಿಂತ. ‘ಕಳ್ಳ ಯಾಕೋ ಮಾತಾಡ್ತಿಲ್ಲ’ ರಾಘುಗೆ ತಡೆಯಲಾಗಲಿಲ್ಲ. ಅಲ್ಲೇ ಇದ್ದ ಚಾಕುವನ್ನು ಹಿಡಿದ. ರಾಘುವಿನ ಅನಿರೀಕ್ಷಿತ ದಾಳಿಗೆ ಭದ್ರ, ಮಂಜು ತತ್ತರಿಸಿ ಹೋದರು. ನೆಲಕ್ಕುರುಳಿದ ಇಬ್ಬರ ಮೇಲೂ ರಾಘು ಕೈಯಲ್ಲಿದ್ದ ಚಾಕು ತನಗಿಷ್ಟ ಬಂದಹಾಗೆ ಇರಿದು ಬಿಟ್ಟಿತ್ತು.‌ ಒದ್ದಾಡಿ ಒದ್ದಾಡಿ ಇಬ್ಬರು ಉಸಿರು ಚೆಲ್ಲಿದರು.ರಾಘು ಕುಸಿದು ಕುಳಿತ…ಇಬ್ಬರ ಹೆಣಗಳ ನಡುವೆ…ಕೈಯಲ್ಲಿ ರಕ್ತ ಸಿಕ್ತ ಚಾಕು…ಎದೆಯೊಳಗೆ ಭಾರ!ದೊಡ್ಡ ತಪ್ಪು ಮಾಡ್ದೆ…ಕಳ್ಳ‌‌…ಅಲ್ಲ…ಕೊಲೆಗಾರ ಆದ್ನ…..ರಾಘು ಎದ್ದ…ಓಡಲಾರಂಭಿಸಿದ…ಅಮ್ಮ…ಸುಮಾ…ಕಣ್ಣ ಮುಂದೆ ಹಾದು ಹೋದಂತಾಯಿತು. ರಾಘು ಓಡುತ್ತಿದ್ದ. ಕೈಯಲ್ಲಿದ್ದ ಚಾಕು ಎಸೆದ. ದುಃಖದ ಸಂಕೇತವಾಗಿ ಕಣ್ಣಿಂದ ಜಾರುತ್ತಿದ್ದ  ನೀರನ್ನು ತೋಳಿನಿಂದ ಒರೆಸಿಕೊಳ್ಳುತ್ತಾ ಓಡುತ್ತಿದ್ದ. ಚಂದ್ರಿಕಾ ನಾಗರಾಜ್ ಹಿರಿಯಡಕ

“ತಪ್ಪು” ಸಣ್ಣ ಕಥೆ, ಚಂದ್ರಿಕಾ ನಾಗರಾಜ್ ಹಿರಿಯಡಕ Read Post »

ಇತರೆ

“ರಾಷ್ಟ್ರೀಯ ಕೈ ಬರಹ ದಿನಾಚರಣೆ” ಗಾಯತ್ರಿ ಸುಂಕದ

ಕೈಬರಹ ಸಂಗಾತಿ ಗಾಯತ್ರಿ ಸುಂಕದ “ರಾಷ್ಟ್ರೀಯ ಕೈ ಬರಹ ದಿನಾಚರಣೆ” ಕೈ ಬರಹದ ಚಿತ್ರ ರಂಗಮ್ಮ ಹೊದೇಕಲ್ ಕಂಪ್ಯೂಟರ್ ಬಂದಾಗಿನಿಂದ ಬಹುಶಃ ನಮಗೆ ಕೈ ಬರಹ   ಮರೆತು ಹೋಗಿದೆ. ಆದರೂ ಚಿಕ್ಕವರಿದ್ದಾಗ ಕಾಪಿ ರೈಟಿಂಗ್ ಬುಕ್ ತಂದು ಬರೆದಿದ್ದು ಇನ್ನೂ ಹಸಿರಾಗಿದೆ.ನಮ್ಮ ಕೈ ಬರಹ ನಮ್ಮ ವ್ಯಕ್ತಿತ್ವವನ್ನು ಕೂಡ ಸೂಚಿಸುತ್ತದೆ.ನೀವು. ಎಡಗಡೆಗೆ ವಾಲಿಸಿ ಬರೆದರೆ ಹತಮಾರಿಗಳು, ನಿಮ್ಮದೇ ನಡೆಯ ಬೇಕೆಂಬ ಅಹಂ ಉಳ್ಳವರು.ನೀವು ಬಲಗಡೆಗೆ ವಾಲಿಸಿ ಬರೆದರೆ ಎಲ್ಲಿ ಹೋದರೂ ಹೊಂದಿ ಕೊಳ್ಳುವ ವ್ಯಕ್ತಿತ್ವ ಉಳ್ಳವರು ಮತ್ತು ಸ್ವಭಾವತಃ ಒಳ್ಳೆಯವರು.ನೀವು ನೇರವಾಗಿ ಬರೆದರೆ ಸದಾ ಕ್ರಿಯಾಶೀಲರು ಎಂದರ್ಥ.ನೀವು ಎರಡು ಗೆರೆಗೆ ಹತ್ತಿಸಿ ಬರೆದರೆ ನೀವು ಸ್ವಭಾವತಃ   ಯಾರೊಡನೆ  ಜಾಸ್ತಿ  ಬೇರೆಯದೇ ಒಬ್ಬರೇ ಇರಲಿಕ್ಕೆ ಇಚ್ಛೆ ಪಡುವರು.ನೀವು ಎರಡು ಗೆರೆಗಳ ನಡುವೆ ಬರೆದರೆ ಹಗಲುಗನಸು ಕಾಣುವ ವ್ಯಕ್ತಿತ್ವ ಉಳ್ಳವರು.ನೀವು ತುಂಬಾ ಜಾಗ ಬಿಟ್ಟು  ಪುಟ ತುಂಬಿಸುವವರು ಇದ್ದರೆ ನೀವು ಸೋಮಾರಿ ಮತ್ತು ಟೈಮ್ ಪಾಸ್ ಮಾಡುವ ವ್ಯಕ್ತಿತ್ವ ಉಳ್ಳವರು.ನೀವು ಸ್ವಲ್ಪವೂ  ಜಾಗ ಬಿಡದೆ ಪುಟ. ತುಂಬಿಸುವವರೂ ಇದ್ದರೆ ನೀವು ಸಮಯಕ್ಕೆ ತುಂಬಾ ಮಹತ್ವ ಕೊಡುವವರು ಆಗಿರುತ್ತೀರಿ.   ತಪ್ಪಾಗಿದ್ದ ಶಬ್ದವನ್ನು ತುಂಬ ಜೋರಾಗಿ ಹೊಡೆದು ಹಾಕುವವರು ಆಗಿದ್ದರೆ, ನೀವು ಇನ್ನೊಬ್ಬರಿಗೆ  ಮುಖಕ್ಕೆ ಹೊಡೆಯುವಂತೆ ಮಾತನಾಡುವ ವ್ಯಕ್ತಿತ್ವ ಉಳ್ಳವರು ಆಗಿರುತ್ತೀರಾ.ನೀವು ದುಂಡಗೆ ಅಂದವಾಗಿ ಬರೆಯುವವರು ಆಗಿದ್ದರೆ, ನೀವು ಆಲ್ರೌಂಡರ್ ಾಗಿರುತ್ತೀರಾ. ನೀವು ಗಜಿಬಿಜಿ ಬರೆಯುವವರು ಆಗಿದ್ದರೆ, ನೀವು ಮಾನಸಿಕವಾಗಿ. ಸ್ಥಿರತೆ ಇಲ್ಲದೆ  ಚಂಚಲ ವ್ಯಕ್ತಿ ಆಗಿರುತ್ತೀರ.ನಮ್ಮ ಜೀವನದಲ್ಲಿ ಬದಲಾವಣೆಗಳು ಆದರೆ, ನಮ್ಮ ಕೈ ಬರಹದಲ್ಲಿ ಕೂಡ ಬದಲಾವಣೆ. ಆಗಿರುತ್ತದೆ.ನಮ್ಮ ಕೈ. ಬರಹ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ತುಂಬ ವೇಗವಾಗಿ ಚಿಂತಿಸಿ ಬರೆಯುವವರು ಇದ್ದರೆ, ಅವರ ಸಹಿ ರನ್ನಿಂಗ್ ಲೆಟರ್ಸ್ ಆಗಿರುತ್ತದೆ.ಎಷ್ಟೊಂದು  ಇಂಟರೆಸ್ಟಿಂಗ್ ಅಲ್ಲವೇ!ಒಂದು ಸಾರಿ ಚೆಕ್ ಮಾಡಿ ಕೊಳ್ಳಿ. ಗಾಯತ್ರಿ ಸುಂಕದ

“ರಾಷ್ಟ್ರೀಯ ಕೈ ಬರಹ ದಿನಾಚರಣೆ” ಗಾಯತ್ರಿ ಸುಂಕದ Read Post »

ಕಾವ್ಯಯಾನ

ಪ್ರೇಮ(ಲತಾ)ಕವಿತೆ ಲತಾ ಎ ಆರ್‌ ಬಾಳೆಹೊನ್ನೂರು

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು ನನ್ನವನು ಕಣ್ಣಿನಲಿ  ಇಳಿಸಿದೆ ಪ್ರೇಮಪತ್ರವ ಹೃದಯಕೆಅರಿತು ಮನ ಸೆಳೆದಿಹುದು ಬರಹಕೆಆಳದ ಮಾತು ಇಳಿಸಲಾಗದು ಕವನಕೆಬಯಸಿದೆ ಜೀವ ಬಿಡಿಸದ ಬಂಧನಕೆ ಸೆಳೆಯುತಿರುವೆ ಕನಸು ನನಸಿನಲಿನೋಡ ಬಯಸಿರುವೆ ಈ ದಿನದಲಿತಂಗಾಳಿ ಸುಳಿದಂತೆ ನಿನ್ನ ನೆನಪಿನಲಿಚಳಿಯಲ್ಲೂ ಮೈ ನಡುಗಿದೆ ಕಂಪಿಸುತಲಿ ನೀನೆ ಜೀವನದ ಸುಮಧುರ ಗೆಳೆಯಸರಿಯುತಿದೆ ಸವಿಯಾದ ಸಮಯಬರೆದು ಬಿಡು ಹೆಸರ ಸಹಿಯಕಾಪಾಡುವ ಪ್ರೇಮಿಗಳಂತೆ ಪ್ರೀತಿ ನಿಧಿಯ ನೀನೆಂದೆಂದು ನನ್ನವನು ತಿಳಿದಿರುನನ್ನೊಲವ ಪ್ರೇಮವ ತೊರೆಯದಿರುಸಪ್ತ ಸಾಗರದಾಚೆ ನನ್ನ ಕರೆಯದಿರುತಾಯಿ ನೆಲದ ಋಣವ ಮರೆಯದಿರು ಲತಾ ಎ ಆರ್ ಬಾಳೆಹೊನ್ನೂರು

ಪ್ರೇಮ(ಲತಾ)ಕವಿತೆ ಲತಾ ಎ ಆರ್‌ ಬಾಳೆಹೊನ್ನೂರು Read Post »

You cannot copy content of this page

Scroll to Top