ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


 
ಭಾರವಾಗಿ ಸುರಿದ ಹಿಮರಾಶಿಯ
ಮುತ್ತುಗಳಾಗಿಸಿ ರೂಪಾಂತರಿಸಿ,
ಮೃದು ಕಿರಣಗಳ ಸೂರ್ಯೋದಯವ
ಮಿನುಗುತ್ತಲೇ ಸ್ವಾಗತಿಸುತಿದೆ.

ನಡೆಗೆ ಬಂದವರ ಮಾತುಕತೆಯಲ್ಲಿ
ಸಭ್ಯತೆಯ ಲಹರಿ ಕೇಳುತ್ತಿದೆ,
ಸಂತಸದ ನಗುವಿನ ಪರವಶದಿ

ನಾದಗಳೆಲ್ಲವೂ ಸಂಗೀತವಾಗುತ್ತಿದೆ.
ದಣಿವಿನಲಿ ಮೌನವಾಗಿ ಕುಳಿತರೆ
ಚದುರಿದ ಮನಕೆ ಆಸರೆಯಾಗಿ,
ಬಾಳ ಪಯಣದ ಯುದ್ಧಗಳ ಮಧ್ಯೆ
ಶಕ್ತಿಯ ತುಂಬುವ ಶಾಂತಿ ಸರೋವರವಿದು.

ಎಲೆಗಳು ಉದುರಿದ ಮರಗಳಲಿ
ನವಚೈತನ್ಯದ ಚಲನೆಯಿದೆ,
ಚಿಗುರೊಡೆಯುವ ಕೊಂಬೆಗಳ ನಡುವೆ
ಭವಿಷ್ಯದ ಕೋಗಿಲೆಯ ಕುಹೂಗಾನವಿದೆ.

ಸುಂಟರಗಾಳಿಯ ಸವಾಲಿಗೂ
ಬಗ್ಗದ ಬೆನ್ನಲಬಿನ ಧೈರ್ಯವಿದು,
ಬಿದ್ದವರ ಎದೆಯಲಿ ಮತ್ತೆ ಏಳುವ
ಪ್ರೇರಣೆಯ ದೀಪವಿದು.

ಅನ್ಯಾಯದ ಅಂಧಕಾರವ ಸೀಳುವ
ಆಶೆಗಳ ಅಗ್ನಿಜ್ವಾಲೆಯಾಗಿ,
ಬಂಧನದ ಬೇಡಿಗಳನು ಮುರಿದು
ಬೀಸುವ ಸ್ವಾತಂತ್ರ್ಯದ ಗಾಳಿಯಾಗಿದೆ.

ಕಣ್ಣೀರಿನ ಕಾಲುವೆಯ ಕಲ್ಲೋಲದಿ
ಹೊಸ ಕ್ರಾಂತಿಯ ಕಿಡಿ ಎಬ್ಬಿಸಿ,
ದೌರ್ಜನ್ಯದ ಅರಣ್ಯವ ಸುಡುವ
ವಿಪ್ಲವದ ವಸಂತವಾಗಲಿ.

ಬದುಕಿನ ಓಟದ ಒರಟು ಹಾದಿಯಲಿ
ಪ್ರಕೃತಿಯ ಮಡಿಲ ಅರಳಿದ ಹೂವಾಗಿ,
ಪ್ರತಿ ಮುಂಜಾವಿನ ಹೊಸ ಉತ್ಸಾಹದ
 
ಉಸಿರಾಗಲಿ ಈ ‘ಉದ್ಯಾನಗೀತ’.


About The Author

Leave a Reply

You cannot copy content of this page

Scroll to Top