“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ
ವಿದ್ಯಾರ್ಥಿ ಸಂಗಾತಿ ನಾಗರತ್ನ. ಹೆಚ್ ಗಂಗಾವತಿ “ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನ ಕೌಶಲ್ಯ ಮತ್ತು ವಿಷಯದ ಆಳವಾದ ತಿಳುವಳಿಕೆಯನ್ನು ಅಳೆಯುವ ಪ್ರಮುಖ ಶೈಕ್ಷಣಿಕ ಮೌಲ್ಯಮಾಪನ ಸಾಧನವಾಗಿದೆ ಇವು ಶಿಸ್ತು ,ಸಮಯ, ನಿರ್ವಹಣೆ ಮತ್ತು ಕಠಿಣ ಪರಿಶ್ರಮವನ್ನು ಉತ್ತೇಜಿಸುತ್ತವೆ. ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣದ ಅಗತ್ಯವಾದ ತಾರ್ಕಿಕ ಚಿಂತನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತವೆ ಅಷ್ಟೇ ಅಲ್ಲದೆ ಇದು ಕಲಿಕೆಯ ಪ್ರಕ್ರಿಯೆ ಪ್ರಮುಖ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪ್ರಮುಖ ಸಾಧನವಾಗಿದೆ. ಪರೀಕ್ಷೆಗಳು ವಿದ್ಯಾರ್ಥಿ ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ವಿಷಯವನ್ನು ಕಲಿತಿದ್ದಾನೆ ಮತ್ತು ವಿಷಯವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ನಿರ್ಣಯಿಸುವುದು ಹಾಗೂ ಕೇವಲ ಅಂಕ ಗಳಿಗಾಗಿ ಅಲ್ಲ ಬದಲಿಗೆ ವಿಷಯದ ಮೇಲಿನ ಹಿಡಿತವನ್ನು ಪರೀಕ್ಷಿಸುತ್ತದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದಷ್ಟೇ ಅಲ್ಲದೆ ಅವನ ಜ್ಞಾನವನ್ನು ಅಳೆಯುವಂತಹ ಒಂದು ಸಾಧನವು ಕೂಡ ಹೌದು. ಮತ್ತು ವಿದ್ಯಾರ್ಥಿಗೆ ಸಮಯವನ್ನು ಹಾಗೂ ಬರವಣಿಗೆ ಕೌಶಲ್ಯವನ್ನು ಯಾವ ರೀತಿ ಉಪಯೋಗ ಸುವಂತಹ ಕಲೆಯನ್ನ ಬಳಸುತ್ತದೆ ಮತ್ತು ಎಷ್ಟೇ ಸವಾಲುಗಳು ಇದ್ದರೂ ಸಹ ಪರೀಕ್ಷೆಯಲ್ಲಿ ಉತ್ತಮ ಬರೆಯಬೇಕು ಎಂಬ ಛಲವನ್ನ ಮೂಡಿಸುತ್ತದೆ. ಹಾಗೂ ವಿಷಯದ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ . ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ಅಗತ್ಯವಾದ ಜ್ಞಾನವನ್ನು ಬೆಳೆಸುತ್ತದೆ. ಕಲಿಕೆಯ ಗುಣಮಟ್ಟ ಮತ್ತು ವಿಷಯದ ಜ್ಞಾನದ ಮಟ್ಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರೀಕ್ಷೆಗಳು ಸಹಾಯ ಮಾಡುತ್ತವೆ. ಓದಲು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದಷ್ಟೇ ಅಲ್ಲದೆ ಪ್ರೇರಣೆಯನ್ನು ಒದಗಿಸುತ್ತದೆ ಪರೀಕ್ಷೆಯು ಕೇವಲ ಅಂಕಗಳಿಗಾಗಿ ಅಲ್ಲ ಬದಲಾಗಿ ಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದರಿಂದ ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಹಾಗಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಜೀವನದಲ್ಲಿ ಮಹತ್ವವಾದಗಳು *ಉದಾಹರಣೆಗೆ*ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ನೋಡುವುದಾದರೆ ಹೀಗೆ ಒಂದು ಊರಿನಲ್ಲಿ ಗಿರೀಶ ಮತ್ತು ಹರೀಶ್ ಎನ್ನುವ ಇಬ್ಬರು ಗೆಳೆಯರಿದ್ದರು.ಇಬ್ಬರೂ ಓದಿದಲ್ಲಿ ಅಷ್ಟೇ ಜಾಣನಿದ್ದರೂ ಕೂಡ ಗಿರೀಶನಿಗೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಯಲ್ಲಿ ಹಾಜರಾಗದೆ ಹಿಂದುಳಿದ ತೊಡಗಿದ ಆಗ ಹರೀಶನು ಆತನಿಗೆ ಉತ್ತಮ ಅಂಕ ಗಳಿಸಲು ತನಗೆ ತಿಳಿದಂತಹ ಎಲ್ಲಾ ಸಲಹೆಗಳನ್ನು ನಿತ್ಯವೂ ಹೇಳುತ್ತಾ ಬಂದನು ಆಗ ಆತನು ಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಅವರಿಬ್ಬರು ಕೂಡಿ ತಮ್ಮ ಗ್ರಾಮದಲ್ಲಿ ಇರುವಂತಹ ಅನಕ್ಷರಸ್ಥರನ್ನು ಸೇರಿಸಿನಿತ್ಯವೂ ಸಂಜೆ ಸಮಯದಲ್ಲಿ ಅವರುಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತಾ ಬಂದರು ಆಗ ಊರಿಗೆ ಊರೇ ಸಾಕ್ಷರತಾ ಗ್ರಾಮವಾಗಿ ಪರಿವರ್ತನೆಗೊಂಡಿತು.ಅದಕ್ಕೆ ಹೇಳುವುದು *ವಿದ್ಯೆ ಕದಿಯಲಾರದ ಸಂಪತ್ತು*ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪರೀಕ್ಷೆಗಳು ಅವರ ಜೀವನವನ್ನೇ ಬದಲಾಯಿಸುವಂತಹ ಮಹತ್ವದ ಪಾತ್ರವನ್ನು ವಹಿಸುತ್ತವೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಕೇವಲ ಅಂಕಗಳಿಗಾಗಿ ಅಷ್ಟೇ ಅಲ್ಲದೆ ಜ್ಞಾನಕ್ಕಾಗಿ ಓದುವುದು ಅಷ್ಟೇ ಮುಖ್ಯ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪರೀಕ್ಷೆಗಳು ಪ್ರಮುಖ ಸಾಧನಗಳಾಗಿವೆ. ನಾಗರತ್ನ. ಹೆಚ್ ಗಂಗಾವತಿ
“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ Read Post »


