ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ

ಬದುಕಿನ ಸಂಗಾತಿ “ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ನಾನು ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿಲ್ಲ ಜಗತ್ತಿನ ಪ್ರತಿ ಒಬ್ಬರು ತಿಳಿದುಕೊಳ್ಳಬೇಕಾದ ಮಾತಿದು ಎಷ್ಟೇ ಕೋಟಿ ಹಣ ಆಸ್ತಿ ಇದ್ದರೂ ನಾವು ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಇಷ್ಟೆಲ್ಲ ಇದ್ದರೂ ಅದನ್ನೆಲ್ಲವನ್ನು ಅನುಭವಿಸುವಂತಹ ಶಕ್ತಿ ಮನುಷ್ಯನಿಗೆ ಇಲ್ಲ. ಕಾರಣ ಆಸ್ತಿ ಹಣಕ್ಕೆ ಇರುವಷ್ಟು ವಯಸ್ಸು ಮನುಷ್ಯನಿಗೆ ಇಲ್ಲ.ಇದ್ದಾಗ ಇರುವಷ್ಟುನ್ನು ಅನುಭವಿಸುವಷ್ಟು ಮನೋ ಧೈರ್ಯವೂ ಮನುಷ್ಯನಿಗೆ ಇಲ್ಲ. 10 ಕಾರಿದ್ದರು ಒಂದು ಸಲಕ್ಕೆ ಒಂದೇ ಕಾರಿನಲ್ಲಿ  ಕುಳಿತು ಪ್ರಯಾಣ ಮಾಡಲು ಸಾಧ್ಯ. ಹಾಗೆಯೇ ಕೋಟಿ ಕೋಟಿ ಹಣ ವಿದ್ದರೂ ಅದನ್ನೆಲ್ಲ ಎಲ್ಲರ ಎದುರಿಗೆ ತೋರಿಸುವಷ್ಟು ಧೈರ್ಯವಿಲ್ಲ. ಕಾರಣ ಅಷ್ಟೊಂದು ಹಣ ಬರಲು ಒಳ್ಳೆಯ ದಾರಿಯಿಂದ ಅವಕಾಶವಿಲ್ಲ. ಇದ್ದ ಹಣದಲ್ಲಿ ಧಾರಾಳವಾಗಿ ಯಾರಿಗೂ ಸಹಾಯ ಮಾಡದೆ ತನ್ನಲ್ಲಿ ಹಾಗೆ ಇಟ್ಟು ಅದನ್ನು ಉಪಯೋಗಕ್ಕೆ ಬರದಂತೆ ಮಾಡುವುದು ಕೆಟ್ಟ ಮನಸ್ಥಿತಿ ಇರುವ ಮನುಷ್ಯನಿಗೆ ಮಾತ್ರ ಸಾಧ್ಯ. ಹಾಗೆ ತಾನು ಅನುಭವಿಸದೆ ತನ್ನವರಿಗೂ ಕೊಡದೆ ಸತ್ತಾಗ “ದರಿದ್ರದವರು ಬದುಕಿದ್ದು ಏನು ಪ್ರಯೋಜನ ಸತ್ತರೆ ಸಾಯಲಿ ಬಿಡಿ” ಎಂದು ಜನ ಅಂದುಕೊಳ್ಳುವಂತೆ ಬದುಕುವುದು ಏಕೆ ಬೇಕು? ನ್ಯಾಯವಾಗಿ ಬದುಕಿ ದುಡಿದದ್ದರಲ್ಲಿ ತನಗೆ ತನ್ನವರಿಗೆ ಎಂದು ಬಚ್ಚಿಡದೆ ಇರುವಷ್ಟು ದಿನ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಿ ಸತ್ತಾಗ “ಈ ಮನುಷ್ಯ ಇನ್ನಷ್ಟು ದಿನ ಬದುಕಿರಬೇಕಿತ್ತು “ಅಂದುಕೊಳ್ಳುವಂತೆ ಬದುಕುವುದು ಎಷ್ಟು ಒಳ್ಳೆಯ ಸಾರ್ಥಕತೆಯ ಬದುಕಲ್ಲವೇ?.ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನಾಗಿಯೇ ಇಲ್ಲ ಅವನನ್ನು ಮೃಗಗಳಿಗೆ ಹೋಲಿಸುವುದು ಖಂಡಿತ ಬೇಡವೇ ಬೇಡ. ಮೃಗಗಳಿಗಿರುವಷ್ಟು ಒಳ್ಳೆಯತನ ಈ ಕೆಟ್ಟ ಮನುಷ್ಯನಿಗಿಲ್ಲ. ಸ್ವಾರ್ಥ ಮೋಸ ಧಗ ವಂಚನೆ ಅನ್ಯಾಯ ಇವೆಲ್ಲವೂ ಮನುಷ್ಯನ ಐದು ಅಂಗಗಳಂತಾಗಿದೆ. ಮನುಷ್ಯ ತನ್ನ ದುನ೯ಡತೆ ದುರ್ಗುಣ ಇವುಗಳಿಂದ ತನ್ನನ್ನು ತಾನು ಹಾಳು ಮಾಡಿಕೊಂಡು ತನ್ನ ಸುತ್ತಮುತ್ತಲಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾನೆ. ಒಳ್ಳೆಯದು ಮಾಡಲು ಒಂದು ಕ್ಷಣ ಯೋಚನೆ ಮಾಡಿದರೆ ಸಾಕು. ಕೆಟ್ಟದ್ದನ್ನು ಮಾಡಲು ಸಾವಿರ ಸಲ ಯೋಚಿಸಬೇಕು. ಆದರೆ ಈಗಿನ ಯುವ ಜನತೆ ತಪ್ಪನ್ನು ಮಾಡಲು ಒಂದೇ ಕ್ಷಣ ಯೋಚಿಸುತ್ತಾರೆ ಒಳ್ಳೆಯದನ್ನು ಮಾಡಲು ಸಾವಿರ ಸಲ ಯೋಚಿಸುತ್ತಾರೆ. ಹಾಗಾಗಿ ಇಂದು ಎಷ್ಟೋ ಯುವಜನತೆ ತಪ್ಪುಗಳನ್ನು ಮಾಡಿ  ಜೈಲನ್ನು ಸೇರಿದ್ದಾರೆ. ಅವರನ್ನೆಲ್ಲ ನೋಡಿ ಆದರೂ ಉಳಿಧ ಜನರುಬುದ್ದಿ ಕಲಿತು ಬದುಕಬೇಕು.ಇವತ್ತಿನ ಮಕ್ಕಳು ತಂದೆ ತಾಯಿಯರ ಮಾತಿಗೆ ಬೆಲೆ ಕೊಡದೆ, ತಮ್ಮದೇ ಆದ ರೀತಿಯಲ್ಲಿ ನಡೆದುಕೊಂಡು ಜೀವನ ವನ್ನೇ ಹಾಳುಮಾಡಿಕೊಂಡು, ಕೇಳಿದರೆ ಅವ್ರೆಲ್ಲ ಹೇಳೋ ಮಾತು ಏನು ಗೊತ್ತಾ? ನಾವು ನಿಮ್ಮ ಕಾಲದವರಲ್ಲ, ಇವತ್ತಿನ ಜನರೇಷನ್ ನಾವು ಎಂದು  ಉತ್ತರಿಸುವ ರೀತಿ ಅಸಯ್ಯ ತರುತ್ತೆ. ತಂದೆ ತಾಯಿಗಳು ಈ ಮಕ್ಕಳ ಕಾಲದಲ್ಲಿ ಸೋತು ಹೋಗಿದ್ದಾರೆ. ನಾನು ತಂದೆ ತಾಯಿಗಳಿಗೆ ಒಂದು ಮಾತು ಹೇಳುತ್ತೇನೆ. ಯಾರ ಮಕ್ಕಳೇ ಆಗಲಿ ಮರ್ಯಾದೆ ತೆಗೆಯೋ ಕೆಲಸ ಮಾಡಿದರೆ ನೀವು ನೊಂದುಕೊಂಡು ಜೀವ ಕಳೆದುಕೊಳ್ಳಬೇಡಿ. ಕಾರಣ ಯಾವ ತಂದೆ ತಾಯಂದಿರು  ಮಕ್ಕಳನ್ನು  ಕೆಟ್ಟ ದಾರಿಗೆ ಹೋಗಲು ಪ್ರೇರೇಪಿಸುವುದಿಲ್ಲ. ಹಾಗೆಯೇ ಯಾರು ನೋವುಂಡ ತಂದೆ ತಾಯಿಯರಿಗೆ ದಯವಿಟ್ಟು ಅವಮಾನಿಸಿ ಮಾತನಾಡಬೇಡಿ. ಹಣ ಇಲ್ಲ ಅಂದ್ರೆ ಜನಗಳ ಎದುರಿಗೆ ಓಡಾಡಬಹುದು  ಆದ್ರೆ ಮರ್ಯಾದೆ ಹೋದರೆ ಹೇಗೆ ಓಡಾಡಬಹುದು ಅಲ್ಲವೇ,  ಮರ್ಯಾದೆ ಇಲ್ಲ ಅಂದ್ರೆ ನೆಮ್ಮದಿ ಎಲ್ಲಿರುತ್ತೆ. ವನಜ ಮಹಾಲಿoಗಯ್ಯ ಮಾದಾಪುರ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ತಕದಿಮಿತ” ತಕದಿಮಿತಎದೆಯ ಕವಿತೆಯೊಳಗೆಭಾವದ ತಕದಿಮಿತಮೋಡ ಮಲ್ಲಿಗೆಯ ದಾಟಿಗಾಳಿ ವೀಣೆಯ ನುಡಿಸಿಪಲ್ಲವಿಯ ಹಿಡಿದೆಬ್ಬಿಸಿಜಗದ ಒಲವಿಗೆಬಾಳುವುದ ಕಲಿಸಿನಾದದಿ ಮತ್ತೆ ನಾದವಾಗಿಉಲಿವ ತಕದಿಮಿತಸುಳಿವ ತೇರಿನ ನೆರಳುಮುಂಗುರುಳ ಮಾತಾಡಿಸಿಮೌನದಲಿ ಹಬ್ಬಿರುವನಗೆಯ ನಗುವಾಗಿಸಿಕುಣಿವಂದದ ಕುಣಿತದಿಮೇಲ್ಮುಗಿಲ ತೋರಣದಿಹೆಜ್ಜೆಗೊಂದು ಕರಗಳ ಹಿಡಿದುನಡೆ ನಂಬಿ ಬಂದ ಹಕ್ಕಿಗೆಗೂಡೊಳಗೆ ಸವಿನಿದ್ದೆಬೆಟ್ಟದ ತುದಿಯಕಲ್ಲು ಮಂಚದ ಮೇಲೆಮಲಗಿದ್ದ ಉಸಿರಿನಬಡಿತವೂ ಒಂದು ತಕದಿಮಿತಹೂವರಳಿ ನಿಂತಂದಕೆಬೇರೊಳಗೆ ಸಂಚಲನಬೇರು ಮಣ್ಣೊಳಗೆಜೊತೆಗಿರುವ ಅನುಬಂಧಮಾತು ಮಾತಿಗೆಗೆರೆಯಾಗದ ಸಂಬಂಧಗರಿಗಳ ನಡುವೆ ಬೀಸುವತಂಗಾಳಿಯ ಪಿಸುಮಾತುಕೂಡ ಒಂದು ತಕದಿಮಿತ ನಾಗರಾಜ ಬಿ ನಾಯ್ಕ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ” Read Post »

ಕಾವ್ಯಯಾನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ”

ಕಾವ್ಯ ಸಂಗಾತಿ ಸುಮತಿ ನಿರಂಜನ “ಪತಂಗ ಸಂಗ-ತಿ” ಹಾರೋಣ ಬನ್ನಿರಿ ಗೆಳೆಯರೇ ಹಾರೋಣನೀಲಿ ಆಕಾಶಕ್ಕೆ ಹಾಕೋಣ ಲಗ್ಗೆಒಂದೇ ದಿನವೆಂದು ಕುಂದದೆ ನಾವಿಂದುಒಂದಾಗಿ ಚಂದದಲಿ ನಲಿಯೋಣಚಂದಿರನ ಹೊಲದಲಿ ಚಿಕ್ಕೆಯ ಕುಯಿಲುಸಿಕ್ಕಷ್ಟು ಬಾಚಿ ತಬ್ಬೋಣ ಸುಗ್ಗಿಯಸಗ್ಗದ ಸುಖವ ಸವಿಯೋಣ !ಬೇರೆ ಬೇರೆ ರಂಗು ಬೇರೆ ಬೇರೆ ಗುಂಗುಲಂಗುಲಗಾಮಿಲ್ಲದೇ ಹಾರೋಣಒಬ್ಬರ ಬಿತ್ತರ ಇನ್ನೊಬ್ಬರೆತ್ತರಕಂಡು ಕರುಬದೆ ಮೇಲೆ ಹಾರೋಣರೆಕ್ಕೆ ಕತ್ತರಿಸದೆ ಕೊಕ್ಕಿಂದ ಚುಚ್ಚದೆಸಕ್ಕರೆ ಅಚ್ಚು ಹಂಚೋಣ ಸ್ನೇಹಿತರೆಅಕ್ಕರೆಯಿಂದ ಹರಸೋಣ ಕಣ್ಣಲ್ಲೆಕನಸಿನ ಗೋಪುರ ಕಟ್ಟೋಣಕೊನೆಯಿಲ್ಲ ಕಲ್ಪನೆ ಕ್ಷಿತಿಜಕ್ಕೆ ಕೆಳೆಯರೇಮಿತಿಯಿಲ್ಲ ಆತುಮ ಬಲಕೆ ಸಾಹಸಕೆಬನ್ನಿರಿ ಗೆಳೆಯರೆ ತನ್ನಿರಿ ಸುಮಶರಕಾಮನ ಬಿಲ್ಲ ಹೆದೆಗೇರಿಸೋಣಕಟ್ಟೋಣ ತೋರಣ ಬಾನ ಬಾಗಿಲಿಗೆಮುತ್ತಿನ ತೋರಣ ಕಟ್ಟೋಣ ಬನ್ನಿರಿಅಕ್ಷರ ದೀಪವ ಬೆಳಗೋಣ !! ಸುಮತಿ ನಿರಂಜನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಕವಿತೆ “ಅಧಿಕಾರ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಅಧಿಕಾರ ಅಧಿಕಾರವೆಂದರೆಕೈಯಲ್ಲಿರುವ ಕಿರೀಟವಲ್ಲ,ಜವಾಬ್ದಾರಿಯುತ ಹೊಣೆಗಾರಿಕೆಅದು ಗದ್ದುಗೆ ಮೇಲಿನ ಮೋಹ ಅಲ್ಲ,ನೆಲದ ಮೇಲಿನ ಬೆಳಕ ದೀವಿಗೆ.ಹೆಜ್ಜೆ ಹಾಕುವ ಪ್ರತಿ ಹಾದಿಯನ್ನೂಜವಾಬ್ದಾರಿಯಿಂದ ತೋರುವ ದೀಪ.ಕಠಿಣ ಧ್ವನಿಯಲ್ಲಿ ಕೂಗುವುದಲ್ಲ ಕೀಲುರಿಮೆಯಿಂದ  ಕಾಣುವುದಿಲ್ಲ ಕಿರಿ ಮಾಡಿ ಮೊದಲಿಸುದಲ್ಲ ಅಧಿಕಾರ,!ಮೃದು  ಭಾವದಲ್ಲಿ ನಂಬಿಕೆ  ಹುಟ್ಟಿಸುವಂಥದ್ದು. ಅಧಿಕಾರ!ಭಯ ಹುಟ್ಟಿಸುವ ಕೈಯಲ್ಲಲ್ಲ,ಆಶ್ರಯ ಕೊಡುವ ಹೃದಯದ ಆದರ್ಶ ಅರ್ಥಪೂರ್ಣ ವ್ಯವಸ್ಥೆ ಅಧಿಕಾರ!ಒಮ್ಮೆ ಅಹಂಕಾರವಾದರೆಅದು ವಿಷವಾಗುತ್ತ  ಮನಸ್ಸುಹದಗೆಡಿಸಿ ಮನಗಳ ಕೊಲೆಯಂತಪಾಪಕೃತ್ಯ ಇಳಿಸಿಬಿಡುವ ನಶೆ.ಸ್ವಂತ ಬೇರುಗಳನ್ನೇಸುಟ್ಟುಹಾಕುವ ಅಗ್ನಿ. ಅಧಿಕಾರ,,!ಸೇವೆಯಾಗಿ ಪರಿವರ್ತಿತವಾದರೆಅದು ಅಮೃತವಾಗುವ ಸಂಜೀವಿನಿಬಾಯಾರಿದ ಬದುಕುಗಳಿಗೆ  ಜೀವ  ನದಿ. ಅಧಿಕಾರ.!ಆಜ್ಞೆ ನೀಡುವುದು ಸುಲಭ,ಆದರ್ಶವಾಗಿಸುವುದು ಕಠಿಣ.ತೀರ್ಪು ಹೇಳುವುದು ಸುಲಭ,ನ್ಯಾಯ ಒದಗಿಸುವದು ಧೈರ್ಯ.ನಿಜವಾದ ಅಧಿಕಾರಎತ್ತರದಲ್ಲಿ ನಿಂತು ನೋಡುವುದಲ್ಲ,ಕೆಳಗಿಳಿದು ಕೈ ಹಿಡಿದು ನಡೆಯುವುದು.ತಾನೊಬ್ಬನೆ ಹೊಳೆಯುವುದಲ್ಲ, ಬಿದ್ದವರನ್ನು ಕೈ ಹಿಡಿದು ಎತ್ತಿ ಬದುಕ ಬೆಳಗಿಸಿ  ಮೌನವಾಗುವುದು.ಅಧಿಕಾರಗೆಲುವಿನ ಘೋಷಣೆ ಅಲ್ಲ,ಸೋಲಿನ   ಸಮಯದಲ್ಲಿಜೊತೆಯಾಗಿರುವ  ಆಪ್ತತೆ.ಗತಕಾಲದಲ್ಲಿ ಆಳಿದಗದ್ದುಗೆಗಳು ಕರಗಿಮಣ್ಣಲ್ಲಿ ಮಣ್ಣಾಗಿವೆ.ಹುದ್ದೆಗಳು ರದ್ದಾಗುತ್ತವೆ.ಉಳಿಯುವುದು ಮಾತ್ರ ನಿನ್ನ ನಡತೆ  ಘೋರತೆಯ ನೆನಪು.ಹಾಗಾಗಿಅಧಿಕಾರವನ್ನು ಧರಿಸುಭಾರವಾಗಿ ಅಲ್ಲ, ಭಕ್ತಿಯಂತೆ.ಅದನ್ನು ಬಳಸು.ಯುಕ್ತಿ, ಸ್ವಾರ್ಥಕ್ಕಾಗಿ ಅಲ್ಲ,ಸಾರ್ಥಕತೆಗಳಿಗಾಗಿ.ಏಕೆಂದರೆಅಧಿಕಾರಕ್ಕೆ ಅಂತ್ಯವಿದೆ,ಉತ್ತಮಾಧಿಕಾರದ ಮೌಲ್ಯಕ್ಕೆಅಂತ್ಯವಿಲ್ಲ. ಅದು ಶಾಶ್ವತ ಡಾ ತಾರಾ ಬಿ ಎನ್

ಡಾ ತಾರಾ ಬಿ ಎನ್ ಕವಿತೆ “ಅಧಿಕಾರ” Read Post »

You cannot copy content of this page

Scroll to Top