ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಮಾನವ ಬೇಟೆ ನಿಲ್ಲಲಿ”

ಸಹಿಸಲಾರೆವು ನಾವು,ದೇವನೇ…
ನೀನೇಕೆ ಮೌನಿಯಾಗಿರುವಿ ದೇವನೇ,!
ರಕ್ತಸಿಕ್ತ ಮಕ್ಕಳ ಆ ದೇಹಗಳ…
ಗಾಯ ನೋಡಲಾರೆವು,ಅವುಗಳ,!
ನಿತ್ಯ ಸ್ಪೋಟಿಸುವ ನಿರಂತರ…
ಬಂದೂಕು ಗುಂಡುಗಳ ಅವಾಂತರ,!
ಗಾಝಾ ಮಣ್ಣಿಗೆ ಮುಕ್ತಿ ಇಲ್ಲವೆ…?
ಕಣ್ಣೀರು ಆ ಮಕ್ಕಳ ಕಾಣಿಸುತ್ತಿಲ್ಲವೇ,!
ಬೇಟೆ ನಿರತ ದುಷ್ಟ ತೋಳಗಳೇ…
ಕರುಣೆಯ ಕಣ್ಣಿಲ್ಲದ ನೀಚ ಕುಲಗಳೇ,!
ದುರಾಂಕಾರವು ಶಾಶ್ವತವಲ್ಲ…
ಮನುಷ್ಯತ್ವಕ್ಕೆ ನಿಮ್ಮಲ್ಲಿ ಬೆಲೆಯಿಲ್ಲ,!?
ಇತಿಹಾಸದ ಮಣ್ಣದು ಜಾಗ್ರತೆ…
ಇಸ್ರೇಲ್ ಕ್ರೂರಕ್ಕೆ ಅಲ್ಲಿಲ್ಲ ಅರ್ಹತೆ,!
ನರ ಮಾನವ ಬೇಟೆ ನಿಲ್ಲಿಸಲಿ …
ನರಭಕ್ಷಕ ತೋಳಗಳ ಅಟ್ಟಾಡಿಸಲಿ,!
ಲೋಕ ರಾಷ್ಟ್ರಗಳೆಲ್ಲವು ಎದ್ದೇಳಲಿ…
ಕ್ರೂರಿಗಳ ಅಟ್ಟಹಾಸವನು ತೊಲಗಿಸಲಿ.!
ಹಮೀದ್ ಹಸನ್ ಮಾಡೂರು




