ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಮುಂದಿನ ಪೀಳಿಗೆ
ಮನೆ ಕಟ್ಟಿಸೋವಾಗ
ಅಡುಗೆ ಮನೆ ವರ್ಜ್ಯ
ಸ್ವಿಗ್ಗೀ, ಝುಮಾಟೋ ರಾಜ್ಯ.

ಸ್ನೇಹ ಸಂಬಂಧಗಳ
ಸಂತೋಷಪಡಿಸಲು
ತ್ಯಾಗವೇನು ಬೇಕಿಲ್ಲ
ಸವಿ ಮಾತು ಸಾಕಲ್ಲ!.

ಅರಮನೆ ಇದ್ದರೂ
ನೆರೆ ಮನೆಯು ಬೇಕು,
ಸುಖ ದುಃಖ ಹಂಚಲು
ಕಿರು ನಗೆಯು ಸಾಕು.

ಮನವೆಂಬ ಬೆರಳು
ನರಗಳೇ ತಂತಿಯು
ಉದರ ತಳದಿಂದ
ಹೊಮ್ಮುತ್ತಿದೆ ರಾಗವು.

ನಾಭಿಯ ‘ಬಾತೆ’ ಮಾಡಿ
ಹೊರಡಿಸಿದ ಗಾಳಿ
ನಾಲಿಗೆ, ಕಂಠದಲ್ಲಿ
ಸಪ್ತಸ್ವರ ಹಾಡಿತು.

ಪಾಲಕರ ನೆರಳು
ಗಂಧದ ಮರದಂತೆ
ಸುಗಂಧ ಅರಿಯೋದು
ತೀರಿ ಹೋದಮೇಲಂತೆ.

ವ್ಯಸನಕ್ಕೆ ದೇಹದಿ
ಕೊಡಬೇಡ ಜಾಗವ,
ಆಮೇಲೆ ಅವುಗಳು
ಬಿಡಲು ತಕರಾರು.


About The Author

Leave a Reply

You cannot copy content of this page

Scroll to Top