ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಿತ್ತು ತಿನ್ನುವ ಬಡತನ
ತುತ್ತು ಕೊಳಿಗಾಗಿ ದುಡಿದು
ತರಕಾರಿ ಮಾರಿ, ಬಂದ
ಹಣದಲ್ಲಿ ಹೊಟ್ಟೆಗೆ ‘ಇದ್ದರೆ,
ಬಟ್ಟೆಗೆಇಲ್ಲ……

ಅಪ್ಪ ಇಲ್ಲ’ ಅವ್ವ ಕೂಲಿಗೆ,
ನಾನು ಶಾಲೆ ಬಿಟ್ಟು
ತರಕಾರಿ ಮಾರುವೆ.
ತುಂಬಾ ಹಣ ಗಳಿಸುವೆ’
ಆದರೆ ಬೇಸಿಗೆ ಬಿಸಿಲು
ಯಾರು ಬಂದಿಲ್ಲಾ ಕೊಳ್ಳಲು,
ಹಸಿವಿನಿಂದ ಬಳಲಿ, ಕಣ್ಣು
ಮುಚ್ಚುತ್ತಿವೆ.
ಶಾಲೆ ಇಲ್ಲಾ ಊಟಾ ಇಲ್ಲಾ
ನಾನಾ ಚಿಂತೆ ಕಾಡುತಿವೆ.,
ನಾನು ಓದಿ ಸಂಪಾದಿಸಬೇಕು
ಅವ್ವನನ್ನು ಸಾಕಬೇಕು
ಶ್ರೀಮಂತ ನಾಗಬೇಕು
ತಿಂಗಳು ಸಂಬಳ ಪಡೆಯಬೇಕು.
ಹೊಟ್ಟೆ ತುಂಬ ಉಣ್ಣಬೇಕು. ಹೀಗೆ
ಅನೇಕ … ಕನಸು  ರೆಪ್ಪೆಯೊಳಗೆ
ತುಂಬಿವೆ,
ಆದರೆ ಆ    ರೆಪ್ಪೆಯೊಳಗಿನ ಕನಸು
ಯಾವಾಗ ಆದಿತು ನನಸು
ದೇವರೇ ಮಾಡಬೇಕು ಮನಸು


About The Author

Leave a Reply

You cannot copy content of this page

Scroll to Top