ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಿಗಿಯುವ ಕೊಂಬೆ
ಕಡಲ ಗಂಟಲಲ್ಲಿ
ಸಿಕ್ಕಿ ಬಿದ್ದ ಮೂಳೆ

ಮೇಲ್ಪದರ ಹೊದ್ದ
ಮತ್ಸ್ಯಗಳ ಅಸ್ಥಿ
ಇತಿಹಾಸಕ್ಕೆ ಇಂಧನ
ತುಂಬಿಸಬೇಕಿತ್ತು

ಕೊರಳಿಗೆ ಕಟ್ಟಿದ
ಕರಡಿಯ ರೋಮ
ನೇಣಿನ ಕುಣಿಕೆ
ಹೊಸೆಯುತ್ತಿತ್ತು.

ಒಡಲ ಬಗೆದ ಜೆ ಸಿ ಬಿ
ಕರುಳ ಕಥೆ ಬರೆಯಲು
ನೆತ್ತರ ಶಾಹಿಗಾಗಿ
ಹುಡುಕುತ್ತಿತ್ತು

ಹೆಣಗಳ ಓಣಿಯ
ತಳದಲ್ಲಿ ಕುಳಿತು
ಕಡ್ಡಿ ಗೀರುತ್ತಿರುವ
ಬೇರಿನ ಕಮಟು
ಗಾಳಿಗೆ ಬಣ್ಣ ಹಚ್ಚಿ
ತೇಲಿಬಿಟ್ಟಿತ್ತು
ಇಂದೋ…ನಾಳೆಯೋ…
ನಿರ್ಜನ ನೀರ ಹಾಡು
ಎದೆಗೆ ನಾಟಿದ ನಂಜಿನಿ ಬಾಣ
ಹಸಿರ ಕೊಂದು
ನೆತ್ತರ ಓಕುಳಿಯಾಡುತ್ತಿತ್ತು
ಎದೆ ಬರಿದಾಗಿತ್ತು.


About The Author

3 thoughts on “ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಬೇರಿನ ಕಮಟು”

Leave a Reply

You cannot copy content of this page

Scroll to Top