ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾವವೆಲ್ಲ ಸತ್ತ ಮೇಲೆ ಭಾವನೆಗೆಲ್ಲಿ ಜಾಗ
ಮಾನವೆಲ್ಲ ಹೋದ ಮೇಲೆ ಪ್ರಾಣಕ್ಕೆಲ್ಲಿ ವೇಗ
ತ್ರಾಣವೆಲ್ಲ ಬಿಸಿಯಾಗಿ ಬದುಕಲೆಲ್ಲಿ ತ್ಯಾಗ
ಜಾಣ ದದ್ದನಾದ ಮೇಲೆ ಅವನೇನು ಭಾಗ

ಮನದ ನೋವು ಓದಲಿಕ್ಕೆ ಲಿಪಿಯು ಇಹುದೇ ಜಗದಿ
ಕನಸು ನನಸು ಆಗಿದ್ದರೆ ಕಷ್ಟ ಇರದೆ ಭವದಿ
ವಿವಿಧ ವೇಷ ಹೊರಗಡೆಗೆ ಮನದ ಒಳಗೆ ಬೆತ್ತಲೆ
ಬಂದ ದಿನದ ಹೋಗೋ ದಿನದ ನಡುವೆ ನಾಲ್ಕು ಕ್ಷಣಗಳೇ

ಆಚೆ ಈಚೆ ಸುತ್ತಲೂನು ಹಣದ ಆಸೆ ಒಂದಿದೆ
ಧನ ಧಾನ್ಯ ಹೆಣ್ಣು ಹೊನ್ನು ಸರ್ವರಿಗೂ ಬೇಕಾಗಿದೆ
ತಾನು ತನ್ನದು ತನ್ನವರಿಗೆ ಎನುವ ಮಾತು ಮಾತ್ರ
ಹೋಗೋ ದೇಹ ಸಾಧನೆಯ ಮರೆತರೇನು ಸೂತ್ರ….

About The Author

Leave a Reply

You cannot copy content of this page

Scroll to Top