ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊರಳು ಮರುಳಿನ
ಹಾದಿಯಲಿ
ನಾನೇನ ಕಂಡ
ಕಪ್ಪೆಚಿಪ್ಪಿನೊಳಗಣ ಮುತ್ತೇ
ಕಂಕಣರಾಶಿಯೇ
ಮನದೊಳಗಣ ಸಂತೃಪ್ತಿಯ
ಸರಮಾಲೆಯೇ
ಬದುಕಿನ ಬವಣೆಯ
ಜಾಡಿನಲ್ಲಿ ಹುಡುಕಲಿ
ಏನನ್ನು
ಹೊರಗಣ ಫಳಫಳಿಸುವ
ದೀಪಗಳ ಚಮತ್ಕಾರವೇ
ಮನದಂಗಳದಿ ಹೊಮ್ಮುವ
ಭಾವಪುಷ್ಪವೇ
ತಿಳಿಯದೆ ಅಲೆದೆ
ಗೊಂದಲದ ಗೂಡಿನಲಿ
ಅಸ್ಪಷ್ಟ ನಿಲುವಿನಲಿ
ಅಗೋಚರವಾದ ಹಾದಿಯ
ತಿರುವುಗಳಲಿ
ಹುಡುಕಿದರೂ ಸಿಗದ
ಪರಮೋಚ್ಚ ಸತ್ಯವ
ಹುಡುಕಲು ಅಲೆಯುತ್ತಿದ್ದೇನೆ
ಕ್ಷಣ ಕ್ಷಣದ ದುಗುಡದಲಿ
ಹೊತ್ತು ಗೊತ್ತಿನ
ಅರಿವಿಲ್ಲದೆ


About The Author

3 thoughts on “ಸುಧಾ ಪಾಟೀಲ್ ಅವರ ಕವಿತೆ-ಹುಡುಕಾಟ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಹುಡುಕಾಟದ ಕವಿತೆ ಅರ್ಥಪೂರ್ಣವಾಗಿದೆ ಮೇಡಂ ಧನ್ಯವಾದಗಳು

  2. ಪರಮೋಚ್ಛ ಸತ್ಯ
    ಹುಡುಕಿದರೂ ಸಿಗದಂತೆ
    ಸಿಕ್ಕರೂ ದಕ್ಕದಂತೆ
    ಎಮ್ಮ ಅರಿವಿಗೆ ನಿಲುಕದಂತೆ
    ಈ ಅಂತೆ ಕಂತೆ ಮರೆತು
    ಇರಬೇಕಂತೆ ನಿಶ್ಚಿಂತನಂತೆ!

    ಗಿರಿ ಗವ್ಹರದೋಳಿಲ್ಲ
    ಕದಳಿ ಕಾನನದೋಳಿಲ್ಲ
    ಹಿಮ ಬೆಟ್ಟದಲ್ಲಿಲ್ಲ
    ಕಣಿವೆ ಕಂದರದಲ್ಲಿಲ್ಲ
    ದಣಿವು ಮರೆತು, ತೃಣವೂ ನಿಲ್ಲದೆ
    ಅರಸಿದರು ಸಿಗದು !

    ಅಳಿಸಂಕುಳವೆ, ಮಾಮರವೆ
    ಬೆಳದಿಂಗಳೆ ಕೋಗಿಲೆಯೇ
    ನಿಮ್ಮ ನಿಮ್ಮರೆಲ್ಲರಲ್ಲಿ
    ಒಂದು ಬೇಡುವೆ ಎನ್ನೊಡೆಯ
    ಚೆನ್ನಮಲ್ಲಿಕಾರ್ಜುನ ಕಂಡೊಡೆ
    ಕರೆದು ತೋರಿರೆ ಅಕ್ಕ ಹಲುಬಿದಳಲ್ಲವೆ?

    ಒಲಿಸಲೂ ಬೇಕಂತೆ ಅಳವು
    ಹೊರಗೆ ಹುಡುಕಿ
    ಒಳಗೆ ಮರೆತು
    ತನ್ನ ತಾನರಿಯದೆ
    ತನ್ನಂತೆ ಪರರ ಬಗೆಯದೆ
    ಇರಬೇಕಂತೆ ಆಸೆ ಹೊಸೆಯದೆ!

    -ಶಾಂತಲಿಂಗ ಪಾಟೀಲ
    21.03.2025

Leave a Reply

You cannot copy content of this page

Scroll to Top