ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮರ ಕುಡಿದು ಬೊಡ್ಡೆಯೊಣಗಿದ ಮೇಲೆಯೂ
ಮರಿ ಗಿಡವು ತಲೆಯೆತ್ತಿ ನಗುತಿಹುದು ಚೆಂದ!
ವರವಾಗಿ ದೊರಕುವುದು ಪ್ರಕೃತಿ ಸದಾ ನಮಗೆ
ಕರ ಮುಗಿದು ನಮಿಸೋಣ ಧನ್ಯತೆಯಿಂದ !

ನಮ್ಮ ಸ್ವಾರ್ಥಕ್ಕೆ ಪ್ರಕೃತಿಯನು ಕುಲಗೆಡಿಸಿ
ಒಮ್ಮೆ ಮೆರೆಯಬಹುದು ನಾವು ಬೀಗಿ.
ಸುಮ್ಮನಿದ್ದ ಹಾವನ್ನು ಕೆಣಕಿದಂತೆಯೆ ಅದು
ತಮ್ಮ ಬುಡಕ್ಕೆ ಬಂದಾಗ ಫಲವೇನು ಮತ್ತೆ ಕೂಗಿ?

ನಾವು ನೀವುಗಳೆಲ್ಲ ಪ್ರಕೃತಿಯದೆ ಭಾಗಗಳು
ನೋವುಗಳ ಮಾಡುವುದು ಎಂದಿಗೂ ಸಲ್ಲ.
ಭಾವ ಭಿತ್ತಿಯೊಳಗೆ ಅಚ್ಚೊತ್ತಿ ನಿಲ್ಲಬೇಕು ಮಾತು
‘ದೇವನ ಕೊಡುಗೆಯನು ಹಾಳುಗೆಡಹುವುದಿಲ್ಲ’


About The Author

4 thoughts on “ವಿಶ್ವನಾಥ ಕುಲಾಲ್ ಮಿತ್ತೂರು ಅವರ ಕವಿತೆ-‘ಪ್ರಕೃತಿಯು ವರ!’”

  1. ಸುಂದರ ಕವಿತೆ,,,,
    ಒತ್ತಕ್ಕರಗಳನು ಕಡಿಮೆ ಬಳಸಬಹುದಲ್ಲ,!
    ಪರಿಸರ,ನಿಲಬೇಕು, ಬುಡಕೆ, ಸ್ಟಾರ್ಥಕೆ, ತಲೆಯೆತ್ತಿ ಬದಲಿ ಮೊಗವೆತ್ತಿ ಹೇಗೆ
    ಮೋಕೆಯಿಂದ,,, ಹಾಗೇ ಸುಮ್ಮನೆ….. ಅಭಿನಂದನೆ,,,, ಶುಭಾಶಯ

Leave a Reply

You cannot copy content of this page

Scroll to Top