ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಲ್ಲಿ ಎಲ್ಲವೂ ರಾಜಕೀಯ
ಬದುಕು ಮಾತ್ರ ಶೋಚನೀಯ
ಎಲ್ಲದಕ್ಕೂ ಮತೀಯ ಬಣ್ಣ ಮಾನವೀಯತೆಯ ಮರೆತಿರುವೆವಣ್ಣ

ಕೊಲೆ ಸುಲಿಗೆ ಎಲ್ಲವೂ ಸಾಮಾನ್ಯ
ಹಳ್ಳಿ ಕಾಡಿನಲ್ಲಿನ ಜೀವನವೇ ಧನ್ಯ
ಬದುಕಿಗೆ ಇಲ್ಲ ಇಲ್ಲಿ
ಯಾವುದೇ ಗ್ಯಾರಂಟಿ
ನ್ಯಾಯ ನೀತಿಗಳಿಗೆ ಇಲ್ಲ ವಾರಂಟಿ

ಸತ್ತವರ ಹೆಸರಿನಲ್ಲಿ ನಡೆಸುವರು
ಸುಮ್ಮನೆ ಹುಚ್ಚಾಟ
ಜನಸಾಮಾನ್ಯರು ಕಲಿತಿಲ್ಲ
ಇನ್ನೂ ಪಾಠ
ಎರಡು ದಿನ ಎಲ್ಲರಲ್ಲೂ
ಮೂಡುವುದು ರೋಷ ಆವೇಶ
ಬಿತ್ತುವರು ಜನರ ನಡುವೆ
ವಿಷ ಬೀಜದ ದ್ವೇಷ

ಯಾರಿಗೂ ಬೇಕಿಲ್ಲ ನ್ಯಾಯ
ಸಮ್ಮತ ಹೋರಾಟ
ಎಲ್ಲರೂ ನಡೆಸುವರು
ಆ ಕ್ಷಣಕಷ್ಟೇ ಹಾರಾಟ

ನ್ಯಾಯನೀತಿಗೆ ಇಲ್ಲಿ ಬೆಲೆ ಇಲ್ಲ
ಸತ್ಯವಂತರಿಗೆ ಇದು ಕಾಲವಲ್ಲ
ಕಣ್ಣಿದ್ದು ಕುರುಡರಂತೆ ವರ್ತಿಸುವರಲ್ಲ ಬಡವರ ಜೀವನ ಕಣ್ಣೀರಿನಲ್ಲೆ
ಕರಗಿ ಹೋಗುವುದಲ್ಲ

ವಿಷಯಾಂತರದಲ್ಲಿ ಕಾಲ ಕಳೆಯುವರೆಲ್ಲ ವಾಸ್ತವದ ಬದುಕು ಯಾರಿಗೂ ಬೇಕಿಲ್ಲ
ಬಣ್ಣ ಬಣ್ಣದ ರೆಕ್ಕೆ ಕಟ್ಟಿ ಬಿಡುವವರೆಲ್ಲ
ಸತ್ಯ ಶೋಧನೆಯು ಯಾರಿಗೂ ಬೇಕಿಲ್ಲ

ಸತ್ಯ ಸಾಯುತ್ತಿದೆ ಸೋಲು ಮೆರೆಯುತ್ತಿದೆ ಪ್ರೀತಿ ವಿಶ್ವಾಸ ಆತ್ಮೀಯತೆ ಮರೆಯಾಗುತ್ತಿದೆ ಉಸಿರೋಳಗೆ ವಿಷ ಬೆರೆಯುತ್ತಿದೆ
ಹಣದ ಅಮಲಿನಲ್ಲಿ ಮನುಷ್ಯತ್ವ ಮರೆಯಾಗುತ್ತಿದೆ

ಮಾನವೀಯತೆಯ ಮೌಲ್ಯ ಕೊನೆಯಾಗುತ್ತಿದೆ
ಜೀವನ ಅದೋಗತಿಗೆ ಹೋಗುತ್ತಿದೆ
ಪ್ರೀತಿ ಕಾರುಣ್ಯತೆ ದೂರವಾಗುತ್ತಿದೆ

ಅಂತ್ಯವಾಗಬೇಕಿದೆ ರಕ್ತ ಚರಿತೆ
ಎಲ್ಲರಲ್ಲಿಯೂ ಹರಿಯಬೇಕಿದೆ
ಪ್ರೀತಿಯ ವರತೆ
ಎಲ್ಲೆಡೆಯೂ ಇರಬೇಕು ಕಾನೂನಿನ ಸುವ್ಯವಸ್ಥೆ
ದೂರವಾಗಿಸಬೇಕು ಅರಾಜಕತೆಯ ಅವ್ಯವಸ್ಥೆ


About The Author

Leave a Reply

You cannot copy content of this page

Scroll to Top