ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವಣ್ಣ ಇಂದು
ನಿನ್ನ ಹುಟ್ಟು ಹಬ್ಬ
ಬಾಗಿಲ ಮುಂದೆ ರಂಗೋಲಿ
ಕಳೆದ ವರ್ಷದ ಫೋಟೋ
ಒರೆಸಿ ಒಣಗಿದ ಮಾಲೆ
ಹೂವು ಕಿತ್ತೊಗೆದು
ಅದಕ್ಕೆ ವಿಭೂತಿ ಕುಂಕುಮ
ಹಚ್ಚಿ ದೀಪ ಧೂಪ ಬೆಳಗಿ
ಉದಿನಕಡ್ಡಿ ಕರ್ಪುರ ಆರತಿ
ಮುಂದೆ ಒಡೆದ ಕಾಯಿ
ಬಾಳೆಲೆಯಲ್ಲಿ ಹೋಳಿಗೆ
ಮಾವಿನರಸ ಎಡೆ ಹಿಡಿದು
ಅಯ್ಯನವರ ಕಾಲು ತೊಳೆದು
ನೀರು ನಾವೆಲ್ಲ ಕುಡಿದು
ಮನೆ ತುಂಬಾ ಸಿಂಪಡಿಸಿ
ಶುದ್ಧ ಪವಿತ್ರರಾಗುತ್ತೇವೆ
ಗುರುವಿಗೆ ಸಾವಿರ ದಕ್ಷಿಣೆ
ಹಾಕಿದೆವು ಫೋಟೊ ಪ್ರದಕ್ಷಿಣೆ
ಸಂಜೆ ಎತ್ತುಗಳ ಮೆರವಣಿಗೆ
ಡೊಳ್ಳು ವಾದ್ಯ ಜೋರು
ಕುಲಗೆಟ್ಟ ಮಂತ್ರಿ ಶಾಸಕರ
ಸ್ವಾಮಿಗಳ ಶ್ರೀಮಂತರ ನಾಯಕರ
ಬಹು ದೊಡ್ಡ ದಂಡು
ತೇರಿಗೆ ಕಬ್ಬು ಬಾಳೆ ಸಿಂಗಾರ
ಎಲ್ಲೆಡೆ ಹುಮ್ಮಸ ಉನ್ಮಾದ
ಮಂತ್ರ ಘೋಷಣೆ ಕೂಗು
ಕುಣಿತ ಲೆಜಿಮ ಹಲಗಿಮ್ಯಾಳ
ವೇದಿಕೆಯ ಮೇಲೆ ಅಬ್ಬರದ ಭಾಷಣ
ಕಾವಿಗಳ ಕವಿಗಳ ಭೂಷಣ
ಹಾರ ತುರಾಯಿ ಶಾಲು ಸಮ್ಮಾನ
ಭರ್ಜರಿ ಊಟ ಭೋಜನ
ಬಸವಣ್ಣನ ಜಾತ್ರೇಲಿ
ಬಡವಾಯಿತು ಲಿಂಗ
ಜಡವಾಯಿತು ಜಂಗಮ
ಶಬ್ದವಾಯಿತು ಮಂತ್ರ
ಮೂಲೆ ಸೇರಿತು ಪ್ರಸಾದ
ಒಣಗಿತು ವಿಭೂತಿ
ಭಾರವಾಯಿತು ರುದ್ರಾಕ್ಷಿ
ಭಕ್ತ ಶರಣ ಜಯ ಜೀಯ
ವಚನ ಪಚನವಾಗದೆ
ವ್ಯರ್ಥ ಗೋಡೆ ಬರಹ ಕಂಡು
ಮಮ್ಮಲ ಮರುಗಿದ ಸಂಗನ ಬಸವಣ್ಣ


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ””

  1. ಡಾ ವೀಣಾ ಹೂಗಾರ

    ವಾಸ್ತವಿಕ ನೆಲೆಗಟ್ಟಿನಲ್ಲಿ ಮೂಡಿ ಬಂದ ಕವನ ಸರ್

Leave a Reply

You cannot copy content of this page

Scroll to Top