ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಳ್ಳಿಯ ಜೀವನ ಬದುಕಿಗೆ ಚೇತನ
ತಳ್ಳಿ ಹಾಕದಿರು ಭಾವಗಳ
ಬಳ್ಳಿಯ ಬಳಸಿ ಹುಲ್ಲಿನ ಮನೆಯನು
ಹಾಳು ಗೆಡವದೆ ಕಟ್ಟಿಹರು

ಹ‌ಸುರಿನ ನಡುವೆ ಪರ್ಣ ಕುಟೀರವು
ಋಷಿ ಮುನಿಗಳು ವಾಸಿಪರು
ಬಿಸಿಲಿನ ಬೇಗೆಯ ತಡೆಯಲು ಆಗದೆ
ಬಳಲಿ ಬೆಂಡಾದ ಮಾನವರು

ಒಣಗಿದ ಮರದಲಿ ಉದುರುತ ಎಲೆಗಳು
ನುಣ್ಣಗೆ ಬೋಳಾಗಿ ಕಾಣುತಿದೆ
ಹಣ್ಣನು ಕಾಣದೆ ನೊಂದಿಹ ಮನವು
ತಣ್ಣನೆ ನೆರಳನು ಬಯಸಿದೆ

ಬಿಳಿಯ ಬಣ್ಣವ ಎರೆದಂತೆ ಬಾನಿಗೆ
ಮಳೆಯ ಸಿಂಚನ ಇಲ್ಲದೆ
ಹೊಳೆವ ಚಂದ್ರನ ಬೆಳಕಲಿ ಮಿಂದು
ಕೊಳೆಯ ತೊಳೆಯಿರಿ ಎಂದಿದೆ

——————-

.

About The Author

Leave a Reply

You cannot copy content of this page

Scroll to Top