ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅವನು ಆಗಾಗ

ಅವನು ಆಗಾಗ
ವಿಷವ ಕಾರುತ್ತಾನೆ
ಜಾತಿ ಮತಗಳ
ಕ್ರೂರ ಮಿಶ್ರಿತ ಮಾತು

ಹೀಗೆ ಅವನು
ಆಗಾಗ ತಿವಿಯುತ್ತಿದ್ದ
ಎಂ ಎಂ ಕಲಬುರ್ಗಿ
ಅವರ ಬದುಕು ಬರಹಕೆ

ಹರಿತ ಚೂರಿಯ ಟೀಕೆ
ಕೇಕೆ ಹಾಕಿದ
ವ್ಯಂಗ್ಯ ನಗೆ
ಗೌರಿ ಹೆಣವಾದಾಗ

ಈಗ ಸಾಣೆಹಳ್ಳಿ ಶ್ರೀಗಳಿಗೆ
ಬೆದರಿಕೆ ಹಾಕಿದ
ಬಸವ ತತ್ವ ಬೋಧನೆಗೆ
ರದ್ದಿ ಪೇಪರ್ ಎಚ್ಚರಿಕೆ

ಆಗಾಗ ಅವನು
ಹೀಗೆ ಬರೆಯುತ್ತೇನೆ
ಚುಚ್ಚುತ್ತಾನೆ ತಿವಿಯುತ್ತಾನೆ
ರಕ್ಕಸರ ಸಂತಾನ

ಬೇಕು ಅವನಿಗೆ ಸುದ್ಧಿ
ಬರೆವ ಎಲ್ಲರ ಗುದ್ದಿ
ಕೆಡಿಸಿ ನಮ್ಮಯ ನಿದ್ದಿ

ಮಾಡಬೇಕು ಅವನನ್ನು ಮುದ್ದಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

14 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಅವನು ಆಗಾಗ”

  1. ಜಾತಿವಾದಿಗಳು ಇನ್ನಾದರೂ ಎಚ್ಚರದಿಂದ ಇರಬೇಕು ಬುದ್ಧ ಬಸವ ಅಂಬೇಡ್ಕರ ಅವರ ವಿಚಾರ ಧಾರೆಯ ಟೀಕಿಸಿದರೆ ಒಳಿತಲ್ಲ

    ಮೂಲ ನಿವಾಸಿ ದ್ರಾವಿಡ ಅರುಣ

  2. ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ ಸರ್ ನಿಮ್ಮ ಕವಿತೆ.

  3. ವಿಷವ ಕಾರುವ ಜನರ ನಾವು ಸದೆಬಡೆಯಲೇಬೇಕು… ನಮ್ಮ ಬರವಣಿಗೆ… ಕಾರ್ಯವೈಖರಿ… ಅಭಿಪ್ರಾಯಗಳಿಂದ… ಮನೋನಿರ್ಧಾರಗಳಿಂದ… ಒಂದೊಳ್ಳೆಯ ಕವನ

    ಸುಶಿ

Leave a Reply

You cannot copy content of this page

Scroll to Top