ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ
ಕಾವ್ಯ ಸಂಗಾತಿ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ ಬಾನಿಂದ ಗುಡುಗು ಮಿಂಚು ವೇದಘೋಷದೊಂದಿಗೆ ವರ್ಷಾಧಾರೆ ಇಳಿಯದೆ ಇಳೆಗೆ ಹರ್ಷ ತರದು..ಚೆಂದದ ನುಡಿ ಕಟ್ಟಿ ಹಸಿರು ಜನಪದ ಸಂಪತ್ತನಾಡಿನಾದ್ಯಂತ ಪಸರಿಸಾದೇ ವಸುಂಧರೆಗೆ ಕಳೆ ಕಟ್ಟದು..//೧// ಬರಗಾಲ ಆಗಮಿಸಿ ಕಾವು ವೇರಿರುವ ಮಾತೆ ಕಾವೇರಿಕಾಲಕ್ಕಾದರೂ ಜುಳು ಜುಳು ನಾದವಾಗಿ ಧುಮ್ಮುಕಬಾರದೇ..ಹಸಿದ ರೈತನ ಕುಗ್ಗಿದ ಉದರ ಬಾವುಗಳಿಗೆಜಯವ ತಂದು ಚಾಮುಂಡಿ ತಾಯಿ ಕಾರುಣ್ಯವಾ ತೋರಬಾರದೇ..//೨// ನಿಸ್ವಾರ್ಥ ಸೇವಕರಿಗೆ ಶತ್ರುಗಳು ಅಧಿಕನಡೆ ಬುದ್ದನಂತೆ ಗುರಿಯ ಕಡೆಗೆ ಬಿಡದೇ ..ಅಂಜದಿರು ಅಳುಕದಿರು ನಿಂದನೆಯ ಈ ಜಗಕೆಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ..//೩// ಕಲೆ ಸಾಹಿತ್ಯ ವಿಜ್ಞಾನ ವೀರ ಕಲಿಗಳ ನಾಡಿದುರಾಜ ಮಹಾರಾಜರು ಪೂಜಿಸಿದ ಶಿಲ್ಪಿಗಳ ಕಲೆಯಿದು..ವಿಶಿಷ್ಟ ರಾಜಕಾರಣಿಗಳ ತಜ್ಞರ ನೆಲೆಯುರಂಗನಾಥನ ದೇಗುಲವು ವಿಶಿಷ್ಟ ಐಸಿರಿಯ ಗುಡಿಯು..//೪// ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ Read Post »









