ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮಾಸ್ತಿ ಬಾಬು.ಎಂ

ನನ್ನ ಜನ

ಇಳೆಯ ಗರ್ಭದಲ್ಲಿರುವ
ಜ್ವಾಲೆಯು ಕುದಿಯುತ್ತಾ
ಪುಟಿದೇಳಲು ತವಕಿಸುತ್ತಾ
ಈ ಜಗದಲಿ ನೊಂದು-ಬೆಂದವರು
ತುಳಿತಕ್ಕೊಳಗಾದವರು
ಆಕ್ರೋಶದ ಸಹನೆಯು ಕಟ್ಟೆಯೊಡೆಯುವ
ಕ್ಷಣಗಳನು ತೋರುತಿಹರು ನನ್ನ ಜನ

ಕತ್ತಲಿನಲಿ ನಡೆಯುತ
ಬೆಳಕನು ಹುಡುಕುತ
ಭಯವ ಬಿಟ್ಟು ಧೈರ್ಯದಿ
ಮುನ್ನುಗ್ಗಿ ಸಾಗುತ
ದಾಸ್ಯವ ತೊರೆದು
ಸಿಡಿದೇಳಲು ಸಜ್ಜಾಗಿಹರು
ನನ್ನ ಜನ

ಸಿರಿವಂತರ ದರ್ಪವು
ಜೀತಪದ್ಧತಿಯು ಕೊನೆಗೊಂಡು
ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದು
ಸಾಧನೆ ಹಾದಿಲಿ ಸಾಗಿಹರು ನನ್ನ ಜನ

ಗತಕಾಲದ ಗೊಡ್ಡು ಸಂಪ್ರದಾಯದ ಇತಿಹಾಸವನು ಬದಲಿಸಿ
ಹೊಸ ಇತಿಹಾಸದ ಪುಟಗಳನು
ಬರೆಯಲು ಸಜ್ಜಾಗಿ
ಪರಿಪಕ್ವವಾದ ಜ್ಞಾನವ ಪಡೆದಿಹರು ನನ್ನ ಜನ

ಅಂಬೇಡ್ಕರ್ ಮಾರ್ಗದಿಂ ಸ್ಪೂರ್ತಿಯ ಪಡೆದು
ಜೀವದ ಗತಿಯ ಬದಲಿಸಲು
ಕರೆಯ ಕೊಟ್ಟು ಒಗ್ಗೂಡಿಸಲು
ಎಲ್ಲರೂ ಕೂಡಿ
ಬದುಕುವರು ಸ್ವಾತಂತ್ರ್ಯದ ಬೆಳಕಲ್ಲಿ
ಅರುಣೋದಯವ ಹುಟ್ಟುಹಾಕಲಿ ನನ್ನ ಜನ

—————————


About The Author

Leave a Reply

You cannot copy content of this page

Scroll to Top