ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ವಿಜಯಪ್ರಕಾಶ್ ಕೆ

ಎಷ್ಟಿದ್ದರೇನು ಗಂಟಿನೊಳಗಿರುವುದೆಲ್ಲವೂ ಉಸಿರಿರುವ ತನಕ
ನಂಟಿನೊಳಗಣ ಸಿಹಿಯ ಸವಿಯುತಲಿರುವ ನಾವಿರುವ ತನಕ

ಒಟ್ಟುಗೂಡಿ ಬಾಳಿದರೆ ಸಾರ್ಥಕವಾಗುವುದು ಮನುಜನ ಜನ್ಮ
ಅಟ್ಟದ ಮೇಲೆ ನೀ ಪೇರಿಸಿಟ್ಟಿರುವುದೆಲ್ಲಾ ಚಟ್ಟ ಕಟ್ಟುವ ತನಕ

ಮೂರು ತುತ್ತಿನ ಉದರ ಪೋಷಣೆಗೆ  ಬೇಕೇ ಊರೆಲ್ಲಾ ಲೂಟಿ
ತೆತ್ತು ಗಳಿಸಿದ ಮಾನ ಸನ್ಮಾನಗಳೆಲ್ಲಾ ಕಾಂಚಾಣವಿರುವ ತನಕ

ಅರೆ ಹೊಟ್ಟೆಯಲ್ಲಿ ಅಸುವಿಡಿದು ಕೂಡಿಡಬೇಡ ನೀ ಮತಿಗೆಟ್ಟು
ಉಳಿಯುವುದೇ ಬದುಕು ಬಯಸಿ ಕಾಲನನ್ನು ಕರೆಸುವ ತನಕ

ಪಡೆದು “ವಿಜಯ” ಅಂಕೆಯಲ್ಲಿಡಬೇಕು ಚಂಚಲ ಮನಸ್ಸನ್ನು
ಜಗವ ಮರೆತು ಮೆರೆಯುವುದೆಲ್ಲಾ ನಿನ್ನ ನೀ ಅರಿಯುವ ತನಕ


About The Author

Leave a Reply

You cannot copy content of this page

Scroll to Top