ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಮತಾ ಶಂಕರ್

ಯಥಾರ್ಥ

ಮತ್ತೆ ಮೇಲೆದ್ದು ಓಡಲಾಗದಂತೆ
ಮುಗ್ಗರಿಸಿ ಬಿದ್ದಿದೆ ಕುದುರೆ
ನೂರು ಅಶ್ವಶಕ್ತಿ ಬಲದ ಕಾಲುಗಳಲ್ಲೀಗ
ಕೀಲು ಕೀಲುಗಳಲ್ಲಿ ನೋವಿನ ಗುಳ್ಳೆಗಳು
ತಂದೊಡ್ಡಿದೆ ಮುಂದೋಡಲಾಗದ ಅಸಹಾಯಕತೆ

ಚೆಂದಾಗೇ ತಿಂದು ಬೆಳೆದ ದೇಹ
ಮಾಲೀಶು ಮೈ ಮಿರಮಿರನೆ ಮಿಂಚು
ನಯವಾದ ಬಾಲ
ಆತ್ಮ ವಿಶ್ವಾಸದ ಕಣ್ಣು

ತಾಲೀಮು ನಡೆದದ್ದು ಸಮತಟ್ಟು ಜಾಗ
ರಂಗಕ್ಕೆ ಬಂದಾಗ ಅಂಗಳವೇ ಭಿನ್ನ
ಛಲ ಕಲಿತ ಕುದುರೆ
ದಾಟುತ್ತ ಬಂತು ಕಲ್ಲುಮುಳ್ಳಿನ ಹಾದಿ
ಕನಸಿತ್ತು ನಾಗಾಲೋಟದ್ದು
ಜಗವೆಲ್ಲ ಅಂಗೈಗೆ ಎನ್ನುವಂತದ್ದು ….

ಇಳಿಜಾರಿನ ಆಟ
ಓಡಿದ್ದು ಓಟ
ಕಲಿತಷ್ಟು ಪಾಠ
ಅಚಾನಕ್ಕು ಹೊಡೆತ
ಆಯ ತಪ್ಪಿ ಪೆಟ್ಟು
ಕಣ್ಣಲ್ಲಿ ವೇದನೆ
ಮೈಯಲ್ಲಿ ಅಸಹಾಯಕತೆ

ಮಾಲೀಕನಿಗೋ ಅದನ್ನು
ಜರೂರಾಗಿ ಎಲ್ಲಿ ಸಾಗಹಾಕಬೇಕೆಂಬುದೇ ಚಿಂತೆ ಈಗ…

ಕುದುರೆ ಓಡಲಾರದು ಎಂಬುದಷ್ಟೇ
ಸದ್ಯದ ಸತ್ಯ….


About The Author

16 thoughts on “ಯಥಾರ್ಥ ಮಮತಾ ಶಂಕರ್ ಕವಿತೆ”

    1. ಮಮತಾಶಂಕರ್

      ಎಂದಿನ ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು ಹಮೀದಾ ಮೇಡಂ

  1. ಮಮತಾಶಂಕರ್

    ಎಂದಿನ ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು ಹಮೀದ ಮೇಡಂ

  2. ಅದ್ಭುತ ಜೀವನದ ಗೆಲುವು ಸೋಲನ್ನು ಮಾರ್ಮಿಕ ವಾಗಿ ಕಟ್ಟಿದ್ದಿರಾ ಧನ್ಯವಾದಗಳು ಮೇಡಂ

    1. ಮಮತಾಶಂಕರ್

      ಧನ್ಯವಾದ ಗಳು ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ

Leave a Reply

You cannot copy content of this page

Scroll to Top