ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕ್ರಿಕೆಟ್ಟು

ವಿಶ್ವನಾಥ ಎನ್ ನೇರಳಕಟ್ಟೆ

ಅವನು ಔಟಾಗಿದ್ದ
ಐವತ್ತರ ಗೆರೆ ಹಾಯುವ
ಕನಸಿಟ್ಟುಕೊಂಡು
ಹುಮ್ಮಸ್ಸಿನಲ್ಲಿ ಬಂದವನು
ಹದಿನೈದರ ಲಘುಮೊತ್ತಕ್ಕೆ
ಕ್ರೀಸಿನಿಂದಾಚೆ ಹೆಜ್ಜೆ ಹಾಕಿದ್ದ

ಸುಖಾಸುಮ್ಮನೆ ಬೆರಳು ತೋರಿಸಿದ
ಆ ಅಂಪೈರ್ ಗೆ ಇವನ ಮೇಲೆ
ಅದ್ಯಾವ ಜನ್ಮದ ದ್ವೇಷವಿತ್ತೋ
ದೇವರೇ ಬಲ್ಲ
ಹಣ ತಿಂದಿದ್ದರೋ?
ಮ್ಯಾಚ್ ಫಿಕ್ಸಿಂಗ್ ಆಗಿತ್ತೋ?
ಹೊಟ್ಟೆ ಉರಿದಿತ್ತೋ?
ಗೆಲ್ಲಬೇಕಿದ್ದವನನ್ನು
ಪೆವಿಲಿಯನ್ ಆಚೆಗೆ
ದಬ್ಬಿ ಕಳಿಸಿದ್ದರು

ಕ್ರೀಸ್ ಬಿಟ್ಟು ಹೊರಡುವಾಗ
ಅವನ ಮುಖದಲ್ಲಿದ್ದ ದುಃಖ
ಬಿತ್ತರ ಶರಧಿಗಿಂತಲೂ ವಿಶಾಲವಾಗಿತ್ತು
ಸೀಮಾತೀತ ಆಗಸಕ್ಕಿಂತಲೂ ಹಿರಿದಾಗಿತ್ತು

ನೋಡುತ್ತಾ ಕುಳಿತ ನನ್ನಲ್ಲೀಗ
ಮೊನ್ನೆ ಮೊನ್ನೆ ತಾನೇ ನಾನೆದುರಿಸಿದ
ಉದ್ಯೋಗ ಸಂದರ್ಶನದ್ದೇ ಕನವರಿಕೆ


About The Author

Leave a Reply

You cannot copy content of this page

Scroll to Top