ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದೇವರಾಜ್ ಹುಣಸಿಕಟ್ಟಿಗೆ ದೊರೆತ….!

ಕನಕ

ಬಾಗಿಲು ಮುಚ್ಚುವಾಗ
ಕಿಟಕಿ ತೆರೆಯುವಾಗ
ಕೃಷ್ಣ ಕನಕ ಚರಿತ….

ಬೆರಳು ಕುಣಿಸುವಾಗ
ಕೊರಳು ಮಣಿಸುವಾಗ
ಕೃಷ್ಣನರಿಯುವಾಗ ಕನಕ ಹರಿತ …

ಕೃಷ್ಣನೊಂದು ಗಾಳಿ
ಕನಕನೊಂದು ಗಂಧ
ಗಾಳಿಯಲಿ ಸುಗಂಧವಾಗಿ ಬೆರತ…..

ಕೃಷ್ಣ ಕಂಬಳಿ ಹೊದ್ದ
ಕನಕ ಬೆಣ್ಣೆ ಮೆದ್ದ
ಲೋಕದ ತುಂಬಾ ಪ್ರೀತಿ ಸದ್ದ
ಈಗ ಬೆರತ ಚರಿತೆಯ ಮೊರೆತ….

‘ನಾನು ‘ತೊರೆಯುವಾಗ
ಜಾತಿ ಮುರಿಯುವಾಗ
ಕುಲದ ನೆಲೆಯನರಿಯುವಾಗ
ಕನಕ ದೊರೆತ….

About The Author

2 thoughts on “ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….!”

  1. ಪ್ರಭುರಾಜ ಅರಣಕಲ್.

    ‘ಕುಲದ ನೆಲೆಯನರಿಯುವವಾಗ ಕನಕ ದೊರೆತ’ ದೇವರಾಜ್ – ನಿಮ್ಮ ಕವಿತೆ ಓದಿ, ನನಗಗೂ ದೊರೆತ – ಕಿಂಡಿಯಕನಕ.

Leave a Reply

You cannot copy content of this page

Scroll to Top