ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪಯಣ

ರೋಹಿಣಿ ಯಾದವಾಡ

ಹಸಿರುಟ್ಟ ವನದಲಿ
ಸಾಗುತಿರುವೆ ಹೆಜ್ಜೆಹಾಕಿ
ಅಜ್ಜನೊಟ್ಟಿಗೆ ಪ್ರಕೃತಿಯಲಿ
ಮುಂದೆಸಾಗಿಹೆ ಬೆನ್ನುಹಾಕಿ

ವನದೇವಿ ಧರೆಗಿಳಿದು
ರಂಗುರಂಗು ಬೀಸಿಹಳು
ವನಸಿರಿಯು ಮೈದಳೆದು
ಸುತ್ತೆಲ್ಲ ಕಂಗೋಳಿಸಿಹಳು

ಹಸಿರನುಟ್ಟ ವನದೇವಿ
ಚಿತ್ತಾರ ಬರೆದಿಹಳಿಲ್ಲಿ
ಕಣ್ಮನ ತಣಿಸುತಿಹುದು
ಮುದದಿ ಹರುಷ ತಾಳಿ

ಅಜ್ಜನೊಡನೆ ಮಾತುಕತೆ
ಸುಗಮವಾಗಿ ಸಾಗಿತಿಲ್ಲಿ
ಬದುಕದು ಸಾರ್ಥಕತೆ
ಬಾಳಪಯಣ ಪಾಠವೆಲ್ಲ

ಅಜ್ಜನ ಅನುಭವವಿಲ್ಲಿ
ಅನುಭಾವದ ಅರಿವಾಗಿ
ಹೊಸತಿನತ್ತ ಕಣ್ಣತೆರೆದು
ಸಾಗುತಿರುವೆ ಭರವಸೆಯಲಿ

ಏಳುಬೀಳು ಸಹಜವಿಲ್ಲಿ
ಬಿಸಿಲನೆರಳು ಇರುವಂತೆ
ಬದುಕು ಯಾಣದಲಿ
ನಡೆದುಕಾಣು ಸಾರ್ಥಕತೆ.


About The Author

Leave a Reply

You cannot copy content of this page

Scroll to Top