ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

ಪ್ರಶಸ್ತಿಯ ಆಶೆಗಾಗಿ ಅವರಿವರಿಗೆ ದುಂಬಾಲು ಬೀಳುವೆಯಾ ನೀನು
ಆಸಕ್ತಿಯ ತೃಷೆಗೆ‌ ಓದದೇ ಸಾಹಿತ್ಯ ರಚನೆ ಕೇಳುವೆಯಾ ನೀನು.

ಪುರಸ್ಕಾರ ಬಹುಮಾನ ಪ್ರತಿಭೆ ಅರಸಿ ಬಂದರೆ ಗೌರವವಲ್ಲವೇ ಗೆಳತಿ
ತಿರಸ್ಕಾರ ಭಾವದಿ ಅಳಿಸಿ ಲೋಕ ನೇಗಾಡಿಕೊಂಡು ಆಳುವೆಯಾ ನೀನು.

ಗೀಚಿದ್ದೆಲ್ಲ ಕವನವಲ್ಲ ಬರೆದಿದ್ದೆಲ್ಲ ಲೇಖನವಲ್ಲ ಅರ್ಥೈಸಿಕೊಂಡು ನಡೆ
ತೋಚಿದ್ದು ಬರಹಕಿಳಿಸಿ ಸಾಹಿತಿ‌ ಎಂದವರ ಸಾಲಿನಲಿ ತಾಳುವೆಯಾ ನೀನು

ಆಮೀಷದಿ ಒಲಿದು ಬರುವ ಪ್ರಶಸ್ತಿಗಳಿಗೆ ಯಾವುದೇ ಮಾನದಂಡಗಳಿಲ್ಲ.
ಮೀನಾಮೇಷ ಮಾಡದೆ ಅರುಹಿ ಶಿಸ್ತಿನಲಿ ನಿನ್ನಾತ್ಮದಿ ಏಳುವೆಯಾ ನೀನು.

ದೇವಿ ಶಾರದೆಯ ಕೃಪಾಕಟಾಕ್ಷ ಎಲ್ಲರಿಗೂ ಸಿಗದು ಜಯ ಹೇಳುತಿಹಳು .
ದೀವಿಗೆ ಆರದೆ ಬೆಳಗಲು ತೈಲದಿ, ಅಕ್ಕರದ ಅಗಾಧ ಸಾಧನೆಗೆ ಉಳುವೆಯಾ ನೀನು


About The Author

Leave a Reply

You cannot copy content of this page

Scroll to Top