ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶಾಲಿನಿ ಆರ್

ಶಾರು ಗಜಲ್

ಬಿಸಿಲಧಗೆ ಹೆಚ್ವಿದೆ ಮರದ ನೆರಳಿಗಾಗಿ ಮನವು ಹುಡುಕುತಿದೆ ದೊರೆ
ನಂಬಿಕೆಯ ದಾಹ ತಣಿಸುವ ಒಲವಿಗಾಗಿ ಮನವು‌ ಹುಡುಕುತಿದೆ ದೊರೆ

ಕಮರಿದ ಆಸೆಗಳು ಕರುಬುತಿವೆ ನಭದಿ ಮಳೆಬಿಲ್ಲು ಕಾಣದಾಗಿದೆ
ಕರಿಮಾಡವಿದ್ದರು ಸುಳಿಯದ ಮಳೆಗಾಗಿ ಮನವು‌ ಹುಡುಕುತಿದೆ ದೊರೆ

ಕೇಳುವ ಕಿವಿಗಳು ಕುಣಿಯುತ ಒಳದನಿ ಬಾಯಿಗೆ ಬೀಗ ಜಡಿದಿದೆ
ಜೀವನ ಮೌಲ್ಯಗಳ ಹಸಿರ ಉಸಿರಿಗಾಗಿ ಮನವು ಹುಡುಕುತಿದೆ ದೊರೆ

ತುತ್ತು ಉಣಿಸುವ ಅವನಿಯೊಡಲು ಹಸಿವಿನಿಂದ ಪರಿತಪಿಸಿದೆ
ಸಂಜೆ ಅರಳುವ ಮಲ್ಲೆ ಕಂಪಿನಾಸೆಗಾಗಿ ಮನವು ಹುಡುಕುತಿದೆ ದೊರೆ

ಗೋರಿಯೊಳಗೆ ಮಗ್ಗುಲಾದ ಶವ ಮತ್ತೆ ಅಸ್ಮಿತೆಯ ಅರಸುತಿದೆ
ಶಾರು ದನಿಪದದಲಿರದ ಭಾವಗಳಿಗಾಗಿ ಮನವು ಹುಡುಕುತಿದೆ ದೊರೆ.


ಶಾಲಿನಿ.ಆರ್

About The Author

3 thoughts on “ಶಾರು ಗಜಲ್”

    1. ವಿಜಯ‌ ಅಮೃತರಾಜ್ ವಕೀಲರು ಕೊಪ್ಪಳ

      ರಾಜ ಪ್ರಭುತ್ವ ವಾಸಿ ಎನ್ನುವ ತಮ್ಮ ಗಜಲ್ ಹೊಸತನ, ಹೊಸ ಚಿಂತನೆ ಮನಸ್ಸಿನಲ್ಲಿ ಹುಟ್ಟು ಹಾಕಿತು.

  1. ಹೆಚ್. ಮಂಜುಳಾ.

    ಜೀವನ ಮೌಲ್ಯಗಳ ಹಸಿರ ಉಸಿರಿಗಾಗಿ ಮನವು ಹುಡುಕುತಿದೆ ದೊರೆ….
    ಹೌದು ಶಾಲಿನಿಯವರೆ ಮೌಲ್ಯರಹಿತರ ಮಧ್ಯೆ ಸಿಲುಕಿರುವ ಜನಸಾಮಾನ್ಯರು ನೊಜ್ಜುಗೊಜ್ಜಾಗುತ್ತಿದ್ದಾರೆ. ಈ ಹುಡುಕಾಟಕ್ಕೆ ಕೊನೆ ಎಲ್ಲೋ ಕಾಣದಾಗಿದೆ! ಬದುಕಿನ ವಾಸ್ತವವನ್ನು ತುಂಬಾ ಚೆನ್ನಾಗಿ ಹೆಣೆದಿದ್ದೀರ.ಧನ್ಯವಾದಗಳು ತಮಗೆ.

Leave a Reply

You cannot copy content of this page

Scroll to Top