ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮನ್ವಂತರ

ಅರುಣಾ ರಾವ್

ಯಾರು ಊದಿದರೇ ನಿನ್ನ ಕಿವಿಯಲ್ಲಿ ಗುಟ್ಟು

ವಸಂತ ಬರುತಿಹನೆಂದು ನಿನಗೇಗೆ ಗೊತ್ತು

ನಿರೀಕ್ಷಣೆಯ ಕಾತರ ಮನದಲಿ ಹೊತ್ತು
ಪಕಳೆ ಪಕಳೆಗಳಲ್ಲಿ ಸಿಹಿ ಜೇನ ಮುತ್ತು

ಮಧುರ ಮಧುವನು ಮನಸಾರೆ ಹೀರಿ
ಚೆಲ್ಲಾಟದಿ ಹಾರಾಡಿವೆ ದುಂಬಿ ಗಣ
ಕಣ್ ಹರಿಯಲೆತ್ತೆತ್ತ  ಸೂರೆಗೊಳುವುದು
ವಸಂತನ ಪರ್ಣ ಕುಸುಮ ಫಲ ರಿಂಗಣ

ಎಣ್ಣೆಯ ಜೊತೆಜೊತೆಗೆ ಮಹಾ ಮಜ್ಜನ
ನವನವೀನ ಉಡುಪು ತಳಿರು ತೋರಣ
ಪಾಡ್ಯ ಕೂಜನಕೂ ತಂದಿದೆ ಸಂಭ್ರಮ
ಬಂಧು ಬಾಂಧವರ ಕೂಡೆ ಸಕಾರಣ

ಬಂತದೋ ನವ ಸಂವತ್ಸರ ಬಾಗಿಲಲ್ಲಿ
ಮರೆಸಿ ಹಳೆಯದರ ದುಗುಡ ದುಮ್ಮಾನ 
ತಂದಿದೆ  ನವ ವಸಂತವ ನಲಿವಿನಲ್ಲಿ
ಸಾವು ಸಂಕಟಗಳ ಮೀರಿ ಸುಖಿಸೋಣ 

ಯುಗಾದಿ ಹೊಸ ಮನ್ವಂತರದ ಬುನಾದಿ
ಬೇವುಬೆಲ್ಲ ಹೋಳಿಗೆ ಘಮಲು ಜೊತೆ ಸೇರಿ 
ಹೊಡೆದೋಡಿಸಿ ಕಹಿ ದ್ವೇಷ ದಳ್ಳುರಿ
ನಗುನಗುತಲಿ ಬಾಳ ಹಸನಾಗಿಸಿರಿ.


About The Author

Leave a Reply

You cannot copy content of this page

Scroll to Top