ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭೀಮರಾಯ

ಉತ್ತಮ. ಎ.ದೊಡ್ಮನಿ

ಮತ್ತೆ ಮರುಕಳಿಸಿದೆ ಅದೇ ಜೀವನ
ನೀವು ಹೋದ ದಿನದಿಂದ ಭೀಮರಾಯ

ಬರಿ ಮೋಸ ವಂಚನೆ ತುಂಬಿದ ಜಗದಲ್ಲಿ
ನಿಯತಿಗೆ ಕಿಮ್ಮತಿಲ್ಲ ಇಲ್ಲಿ ಭೀಮರಾಯ

ಹಾದಿ ಉದ್ದಕು ಕಿತ್ತು ತಿನ್ನುವ ನರ ರಾಕ್ಷಸರು
ಹೊಂಚ್ಚು ಹಾಕಿ ಕಾಯುತ್ತಿದ್ದಾರೆ ಭೀಮರಾಯ

ನಮ್ಮವರೇ ನಮ್ಮನು ಶೋಷಿಸುತಿರುವರು
ನಿಮ್ಮ ಹೆಸರೇಳಿ ಬದಕುತಿರುವರು ಭೀಮರಾಯ

ನಂಬಿಕೆ ಸತ್ತಿ ಹೋಗಿದೆ
ಸತ್ಯದ ಮೇಲೆ ಸುಳ್ಳು ಕುಣಿಯುತ್ತದೆ ಭೀಮರಾಯ

ಪ್ರೀತಿ ಕರುಣೆ ನಂಬಿಕೆಯ ನಾಟಕವಾಡಿ
ಜಾತಿ ಧರ್ಮದ ಆಟ ಹೆಚ್ಚಾಗಿದೆ ಭೀಮರಾಯ

ಬಡವರ ಬದುಕು ಹಸನಾಗಲೆಯಿಲ್ಲ
ನಿನ್ನ ಆಶೆ ಇಡೆರಲೇಯಿಲ್ಲ ಭೀಮರಾಯ

ಮುಗ್ಧತೆ ಬಂಡವಾಳ ಮಾಡಿಕೊಂಡು
ಭಾವನೆ ಜೋತೆ ಆಡುತಿರುವರು ಭೀಮರಾಯ

ತಮ್ಮನೂ ತಾವು ನಾಯಕರೆನ್ನುವರು
ಜನಗಳಿಗೆ ಹಗಲು ನಕ್ಷತ್ರ ತೋರಿಸುತ್ತಿರುವರು ಭೀಮರಾಯ

ಬಂಡವಾಳ ಶಾಹಿಗಳ ದಬ್ಬಾಳಿಕೆಗೆ
ಬಡವರ ಬದುಕು ಬೀದಿಗೆ ಬಿದ್ದಿದೆ ಭೀಮರಾಯ

ಇಂದಲ್ಲ ನಾಳೆ ಬದುಕು ಬದಲಾಗುತ್ತೆಂದು
ಕಾಯುತ್ತಿರುವರು ಭರವಸೆಯೊಂದಿಗೆ ಭೀಮರಾಯ


About The Author

Leave a Reply

You cannot copy content of this page

Scroll to Top