ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪುಸ್ತಕ

ರೇಷ್ಮಾ ಕಂದಕೂರ

ಮಸ್ತಕಕೆ ಧೀಮಂತ
ವಸ್ತು ವಿಷಯ ಅರಿಯುತ
ಏಕಾಂತವ ಕಳೆವ ಸ್ನೇಹಿತ‌.

ಬದುಕು ಬದಲಿಸಿ
ಅಂತಃಕರಣ ತುಂಬಿಸಿ
ಜ್ಞಾನದಾಗರವ ಹೊರಹೊಮ್ಮಿಸಿ.

ಏಕಾಗ್ರತೆಗೆ ಕಾರಣ
ಸಮಗ್ರತೆಯ ಹೂರಣ
ಸ್ವಸ್ಥ ಸಮಾಜಕೆ ಧಾರಣ.

ಮಾನಸಿಕ ಸ್ಥೈರ್ಯ ತುಂಬುತ
ಶಾಶ್ವತ ಗೆಳೆಯ ನಂಬುತ
ಭರವಸೆಯ ಸಂಗಾತ.

ಓದಿನ ಹಂಬಲಕೆ ರಹದಾರಿ
ಮನೋಬಲಕೆ ಸರಿದಾರಿ
ಭೀತಿ ಕಳೆವ ಹೆದ್ದಾರಿ.

ಉತ್ತಮ ಹವ್ಯಾಸದ ರೂಪಕ
ಜ್ಞಾನ ದೀವಿಗೆಯ ಜ್ಞಾಪಕ
ಬಾವನೆಗಳ ರೂಪಕ.

ಸಂಸ್ಕೃತಿಯ ಉಪಾಸನೆ
ವಿವೇಚನೆಯ ಸಾಧನೆ
ಸಮಾಲೋಚನೆಯ ಪ್ರತಿಪಾಧನೆ.

ಪುಸ್ತಕವೆಂಬ ಸಾಧನ
ನೀತಿ ನೇಮದ ಸದನ
ಅರಿವಿನರಮನೆಯ ಗಾನ.


About The Author

Leave a Reply

You cannot copy content of this page

Scroll to Top