ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನ ಗುರುಕುಲ

ಕಾವ್ಯಯಾನ ನನ್ನ ಗುರುಕುಲ ನೇತ್ರಾ ಪ್ರಕಾಶ್ ಹಲಗೇರಿ ಹುಡಿ ಮಣ್ಣಿನ ಹಾದಿ ಗೊರ್ಪಿಕಲ್ಲು, ಮುಳ್ಳಿನ ಮಿಶ್ರಣ,ಮಳೆರಾಯ ಧರೆಗಿಳಿದರೆಕೆಸರು ಮುದ್ದೆ ರಾಡಿ ರಾಡಿಸುತ್ತ ಗದ್ದೆಯ….ನೋಟಕಿರು – ಕಾಲುವೆಗಳ ಜುಳು – ಜುಳು ಪಾಟಿ ಚೀಲ ಹೊತ್ತುಓಡಿದ್ದೇ ಓಡಿದ್ದುಯಾವುದರ ಪರಿವೆ ಇಲ್ಲದೆರಕ್ತ ಮಡುಗಟ್ಟಿದ ಬರೀ ಪಾದದಲ್ಲಿಎಲ್ಲಾ ಮೇಷ್ಟ್ರುಗಳ ಸ್ಪೆಷಲ್ ಕ್ಲಾಸಿಗೆ ಉಸಿರುಗಟ್ಟಿಕನಸಿನ ಕಣ್ಣಿನಲ್ಲಿ… ಸೂರ್ಯಚಂದ್ರರ ಕೋಟಿ ಜೀವ ಜಂತುಗಳು ಆಶ್ರಯ ತಾಣಮಧ್ಯೆ ನಮ್ಮೆಲ್ಲರ ಗುರುಕುಲಬೋಧಿ ವೃಕ್ಷ – ಕಲ್ಪವೃಕ್ಷದ ಬದುಕಿನ ಅಡಿಪಾಯವೇ ಸರಿ ನಮ್ಮೀ ಗೋಪುರದ ಶಿಖರ…. ತಿದ್ದಿ-ತೀಡಿ ಜುಲಪಿ ಏಟಿಗೆ ಬಾಗಿ ಬೆಂಡಾಗಿ ಕಲಿತದ್ದೆ ಕಲಿತದ್ದು ಇಂದು ನಮ್ಮೆಲ್ಲರ ರೂಪಕ ಪ್ರತಿಮೆಗಳ ಪ್ರತಿಭೆಗಳ ಆಗಿದ್ದೇವೆ….. ಮಧ್ಯಾಹ್ನದ ವೇಳೆ ಡಬ್ಬಿಯ ರೊಟ್ಟಿ ಪಲ್ಯ ಅನ್ನ ಮೊಸರು ಉಪಹಾರ ವಂಗೆಮರ ದಡಿಯ ಸವಿಯಲುಕ್ಷಣಗಳ ಎಣಿಕೆ ಹಸಿವಿನ ತಡವರಿಕೆ ವಾಲಿಬಾಲ್ ಕೊಕ್ಕೋ ಬ್ಯಾಡ್ಮಿಂಟನ್ ಹೊಡೆದಾಟ ಒಡನಾಟ ನಮ್ಮೆಲ್ಲರ ನೆಚ್ಚಿನ ಕೈತೋಟದ ಸ್ವಚ್ಛತೆ ಆಗಾಗ ಎರಡು ದಶಕಗಳು ಕಳೆದರೂ ನಾವೆಲ್ಲರೂ ಬೆಳೆದರು ನಮ್ಮೆಲ್ಲರ ಆಪ್ತತೆ ಸ್ನೇಹ ಸ್ಪಂದನ ಈ ಬಂಧನ ಉಳಿದಿದೆ ಮುಗಿಯದಬೆಸುಗೆಯ ಕೊಂಡಿ ಭಾವನೆಗಳ ಬಂಧವಾಗಿ ಬೆಸೆದಿದೆಈ ಗುರುಕುಲ ಸಾಧನೆಯ ಮೆಟ್ಟಿಲುಗಳನ್ನು ಮುಟ್ಟಿಸಿದಜ್ಞಾನ ಮಂದಿರ ಈ ಗುರುಕುಲ

ನನ್ನ ಗುರುಕುಲ Read Post »

ಪುಸ್ತಕ ಸಂಗಾತಿ

ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು

ಪುಸ್ತಕಸಂಗಾತಿ ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು ಡಾ. ರಮೇಶ್ ಕತ್ತಿ ಬಾಲ್ಯದಿಂದಲೂ ಅಳವಡಿಸಿಕೊಂಡಿರುವ ಅಧ್ಯಯನ ಶಿಸ್ತು, ಸಾಹಿತ್ಯ-ಸಾಂಸ್ಕೃತಿಕ ಕೂಟಗಳ ಒಡನೆ ನಡೆಸಿದ ಅನುಸಂಧಾನಗಳು ಈ ಕೃತಿಗೆ ಮೂಲ ಶ್ರೋತವಾಗಿವೆ.      ಈ ಕವನ ಸಂಕಲನದಲ್ಲಿ 27 ಕವನಗಳಿವೆ. ಏನನ್ನು ಹೇಳುವುದಿಲ್ಲ, ಕಲ್ಯಾಣ ಕ್ರಾಂತಿ, ಏನೋ ಹೇಳುವುದಿದೆ, ನೋಟ, ಕಾಡು, ಕುಸುಮ, ಹೂ- ಮುತ್ತು, ಉಪ್ಪಿನ, ಚಿತ್ರ ಪರದೆ, ಕಾಣದ ಚಂದ್ರ, ಹಕ್ಕು, ಮೌನ ಪ್ರಶ್ನೆ, ಗೀಗೀ ಗಾರುಡಿಗನಿಗೆ,ನಲವತ್ತಕ್ಕೆ ಚಾಲಿಸು, ಹುಡುಗಿಯರ ಗುಂಪಿನೊಳಗೆ, ಮಗಳು ಹುಟ್ಟಿದಳು, ಮಹಾಮಳೆಗೆ ನಲುಗಿದವರು, ಬಯಸಲಾರೆ, ಮನೆಯನೆಂದು ಕಟ್ಟದಿರುಯ ಮತ್ತು ಇನ್ನಷ್ಟು ಹನಿಗವನಗಳು ಸಂಕಲನದಲ್ಲಿ ಸಂಗ್ರಹಗೊಂಡಿವೆ.          ಇಂದಿನ ಶಿಕ್ಷಿತ ಜಗತ್ತಿನ ಜನರ ಆತ್ಮವಂಚನೆಯನ್ನು ವಸ್ತುವಾಗಿರಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮತ್ತು ಸಾಮಾಜಿಕ ಅಧೋಗತಿಗೆ ಸಂಕೇತವಾಗಿದೆ ಕವಿತೆ.    ಮೆತ್ತನೆಯ ಸಿಹಿ ಮಾತುಗಳು ನಿತ್ಯಉಗಳುವ    ವಾಗ್ಮಿಗಳ ಮಧ್ಯ    ಕನಿಕರದಿ ಮಾತನಾಡುವವರ ಮಧ್ಯೆ    ತನ್ನ ಇಷ್ಟಕ್ಕೆ ಮಾತು ಕೃತಿ ಎಲ್ಲ ವಿರಬೇಕು    ಎನ್ನುವವರ ಮಧ್ಯೆ    ಮಾತು ಕರಗುತ್ತದೆ.                            (ಏನನ್ನು ಹೇಳುವುದಿಲ್ಲ) ಮೃದು ನುಡಿಗಳು ಮನ ನೋಯಿಸದೆ ಇರಲು, ಎದುರಿಗೆ ಇರುವವರನ್ನು ಸಂತೋಷಗೊಳಿಸಲು ಮಾತ್ರ ಬಳಕೆಯಾಗುತ್ತಿರುವುದು ಮೇಲಿನ ಕವನದಲ್ಲಿದೆ. ಹಾಗೆಯೇ ಮಾತಿನ ದುರುಪಯೋಗ ಆಗುತ್ತಿರುವ ಬಗ್ಗೆ ಕವಿಗಿರುವ ಕಳವಳವನ್ನು ಹೇಳುತ್ತವೆ ಈ ಸಾಲುಗಳು.    ………….. ಎಲ್ಲವನ್ನೂ ಗುತ್ತಿಗೆ    ಪಡೆದವರಲ್ಲಿ ಮಾತು–ಕೃತಿ ಎರಡು ವ್ಯರ್ಥ                              (ಏನನ್ನು ಹೇಳುವುದಿಲ್ಲ)       ಕವಿ ನುಡಿಯ ನಯವಂಚನೆ ಆಗುತ್ತಿರುವ ಬಗ್ಗೆ ಎಷ್ಟು ಸೂಕ್ಷ್ಮಸಂವೇದಿ ಆಗಿದ್ದಾನೆ ಎಂಬುದಕ್ಕೆ ಮೇಲಿನ ಎರಡು ಸಾಲುಗಳು ಸಾಕ್ಷಿ.    ಸುಖವನ ರಿಸಿದ ಬೆಳಕು ಕವಿತೆಯ ಸಾಲುಗಳಲ್ಲಿ          “ಬೆಳಕೆಂಬುದು ಸುಖದ ಸಂಗತಿ            ಈ ಸುಖದ ಸೆಲೆಗೆ ಜೀತ ವಾದವರು“                          (ಸುಖವನ ರಿಸಿದ ಬೆಳಕು) ಎಂಬ ಪ್ರಭಾವಶಾಲಿ ಸಾಲುಗಳ ಮೂಲಕ ಕವಿಯ ಆಂತರ್ಯ ಅಭಿವ್ಯಕ್ತಗೊಳ್ಳುತ್ತದೆ.        ಶರಣ ಚಳುವಳಿಯ ಋಜುತ್ವ ಕ್ಕೆ ಜಗದೇವ ಮಲ್ಲಿಬೊಮ್ಮಯ್ಯರು ಸಾಕ್ಷಿಯಾಗುವ ಸನ್ನಿವೇಶದ ವಸ್ತು ಹೊಂದಿರುವ ಈ ಕವನದ ಸಾಲುಗಳು ಕಲ್ಯಾಣ ಕ್ರಾಂತಿಯ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ.           ಎಲ್ಲಿದ್ದರೋ ಶರಣ ಭಟರು           ಜಗದೇವ ಮಲ್ಲಿಬೊಮ್ಮಯ್ಯರು           ಬಿಜ್ಜಳನ ಠಾವ ಶೋಧಿಸಿ          ಶರಣರ ಅವಧಿಯ          ಪ್ರತಿಕಾರವನ್ನು ಬಯಸಿ ಬಿಮ್ಮನೆ          ಶರಣರು ಬಂದರು.          ಬಿಜ್ಜಳನ ವಧೆಯ ಪವಡಿಸಿ ಮೆಲ್ಲಗೆ          ದೂರ ಸರಿದರು.                           (ಕಲ್ಯಾಣ ಕ್ರಾಂತಿ).          ಒಂದೆಡೆ ಏನನ್ನು ಹೇಳುವುದಿಲ್ಲ ಎನ್ನುತ್ತಲೇ ಕವಿ ನೆಲದ ನಾಡಿನ ನಾಗರಿಕರಾಗಿ ಮಕ್ಕಳಿಗೆ ಹೀಗೆ ಹೇಳುತ್ತಾರೆ.        “ಮಿತ್ಯ- ಸತ್ಯವಾಗುವ ಸತ್ಯ-ಮಿಥ್ಯವಾಗುವ ಬಗೆಯನ್ನು ಮಕ್ಕಳಿಗಾಗಿ ಬರೆದ “ಏನೋ ಹೇಳುವುದಿದೆ” ಕವನದಲ್ಲಿ ವಿವರಿಸುತ್ತಾರೆ.         ಇಲ್ಲಿ ಪ್ರಸ್ತಾಪಿಸಲೆಬೇಕಾದ ಕವಿ-ಸಹೃದಯ, ವಿಮರ್ಶಕ ಎಲ್ಲರಿಗೂ ಕ್ಷಣಹೊತ್ತು ಹಿಡಿದು ನಿಲ್ಲಿಸುವ ಈ ಕವನದ ಗಮನಾರ್ಹ ಸಾಲುಗಳು ಮುಂದಿವೆ. ಸಾವಿರದ ಗೀಗೀ ಪದಗಳ ಮೋಡಿಕಾರ ಕಡಣಿ   ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಓದಿದವರಿಗೆ, ಕಲ್ಲಪ್ಪ ಕವಿಯ ಪರಿಚಯಸ್ಥರಿಗೆ ಮತ್ತು ಸಹೃದಯರಿಗೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ತನ್ನ ಊರಿನ ಅಭಿಜಾತ ಜಾನಪದ ಕವಿಯ ಕುರಿತು ಲೇಖಕನೊಬ್ಬನಿಗೆ ಇರುವ ಅಭಿಮಾನದ ಹೊಳೆ ಹರಿದು ಕಣ್ಣಂಚಿನಲ್ಲಿ ನೀರೂರಿಸಿಕೊಂಡು ಬರೆದಿರಬಹುದಾದ ಈ ಕವನ ಓದುಗನ ಮನೋಸಾಗರದಲ್ಲಿ ಸಂಚಲನ ಮೂಡಿಸುತ್ತದೆ. “ಪದಗಳ ಗಂಟುಕಟ್ಟಿ, ಗಂಟುಗಳ ರಾಶಿ ಇಟ್ಟವ,   ಸಾವಿರ ಪದಕಟ್ಟಿ ಹಾಡಿದವ ಸಾವಿರದ ಈ   ಪದಗಾರ“                                   (ಗೀ ಗೀ ಗಾರುಡಿಗನಿಗೆ) ಎಂದು ಸಂಬೋಧಿಸಿ ಈ ಜಾನಪದ ಜಂಗಮನಿಗೆ ಅಮರನಾಗಿಸುವ ಪ್ರಯತ್ನ ಮಾಡಿದ್ದಾರೆ. ಪದಗಳ ಸರದಾರ ಕಡಣಿ ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಒಂದು ಬಯೋಪಿಕ್ ನಂತೆ ಭಾಸವಾಗುತ್ತದೆ. ಹೀಗೆ ಹೇಳಿ ಈ ಜಾನಪದ ಜಂಗಮನಿಗೆ ಸಾವು ಇಲ್ಲ ಎಂಬ ಸಂದೇಶ ಕೊಡಲು ಯತ್ನಿಸುತ್ತಾರೆ ಕವಿ.       ಮನೆಯ ಹಿರಿಯಜ್ಜಿಯಿoದಾದಿಯಾಗಿ ಅಪ್ಪ-ಅವ್ವ ಅಷ್ಟೇಕೆ ಅರ್ಧಾಂಗಿ ಕೂಡ ತಾನು ಹೆತ್ತ ಹೆಣ್ಣು ಮಗುವನ್ನು ಕಂಡು ಮುಳು ಮುಳು ಅಳುತ್ತಿದ್ದ ಅಂದಿನ ನೆನಪು ಮಾಡಿಕೊಳ್ಳುತ್ತಾರೆ ಕವಿ. ಆದರೆ ಈಗ ಅದೇ ಮಗಳು ಮನೆಗೆ ನೆಮ್ಮದಿ ತಂದಿದ್ದಾಳೆ.    ಯಾರಿಗೂ ಕಾಡದ ತನ್ನವರಿಗೆ ಪ್ರೀತಿ ಹಂಚಿದ    ನೋಟದಲಿ, ಆಟದಲಿ ಮನಗೆದ್ದು ಸೈ ಎನಿಸಿ    ಸಂಭ್ರಮದಿ ಮನೆಮಾಡಿದ ಮಗಳು.                                      (ಮಗಳು ಹುಟ್ಟಿದಳು)     ಹೆಣ್ಣಿನ ಕುರಿತು ತನ್ನ ಪ್ರಜ್ಞೆ ಸಾಂಪ್ರದಾಯಿಕ ವಲ್ಲ,ಎಂಬುದನ್ನು ಕವಿ ಮೇಲಿನ ಸಾಲುಗಳಲ್ಲಿ ದಾಖಲಿಸುತ್ತಾರೆ.       ತನ್ನ ಕವಿತೆ ಎಂಥದ್ದು? ಎಂಬುದನ್ನು ಕವಿ ಹೀಗೆ ವಿವರಿಸುತ್ತಾರೆ.       ಬಯಲನೆ ಹೂ       ನೀ       ಧರೆಗೆ ಮುತ್ತಿಕ್ಕಿದ       ಧರೆಯ ಹಾಡಿದು                        (ಹೂ–ಮುತ್ತು)     ರಮೇಶ್ ಕತ್ತಿಯವರ “ಏನನ್ನು ಹೇಳುವುದಿಲ್ಲ”ಸಂಕಲನದ ಕವನಗಳ ಕುರಿತು —————-“ಈ ಕವಿತೆಗಳು ಮನುಷ್ಯತ್ವವನ್ನು ಕಳೆದುಕೊಂಡ ಜನರ ಹೃದಯದಲ್ಲಿ ಮಾನವೀಯತೆಯ ಪ್ರೀತಿ-ಪ್ರೇಮದ ಗುಟುಕನ್ನು ಹನಿಸುವ ಗುಣ ಹೊಂದಿವೆ,” ಕಾವ್ಯ ಕಟ್ಟುವ ತಂತ್ರದಲ್ಲಿ ರಮೇಶ್ ಕತ್ತಿಯವರಿಗೆ ಲಭಿಸಿದ ‘ಹದ’ ಅವರ ಲೇಖನಿಯಿಂದ ಇನ್ನಷ್ಟು ಕವನ ಸಂಕಲನ ತರುವ ಭರವಸೆ ಕೊಡುತ್ತದೆ. ಎನ್ನುತ್ತಾರೆ ಮುನ್ನುಡಿ ಬರೆದ ವಿಮರ್ಶಕಿ ಡಾ. ಸಿ. ಸುಜಾತಾ ಅವರು. ಕನ್ನಡ ಸಾರಸ್ವತ ಲೋಕಕ್ಕೆ ಇದುವರೆಗೆ 15 ಕೃತಿಗಳನ್ನು ಕೊಟ್ಟಿರುವ ರಮೇಶ್ ಕತ್ತಿ ಭೀಮಾತೀರದ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಡಿ.ಎಂ. ನದಾಫ್

ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು Read Post »

ಕಾವ್ಯಯಾನ

ಈ ಸಂಜೆ

ಕಾವ್ಯಯಾನ ಈ ಸಂಜೆ ಅಕ್ಷತಾ ಜಗದೀಶ ಜೊತೆಯಾಗಿ ಮೂಡಿಸಿದೆವುನಮ್ಮ ‌ಹೆಸರು‌ ಮರಳಿನ ಮೇಲೆ..ಕಡಲ ಅಲೆಗಳ ಸ್ಪರ್ಶಿಸುತಜೊತೆಯಾಗಿ ನಡೆದೆವುಆ ಸುಂದರ ‌ಸಂಜೆಯಲಿ.. ರವಿ ಆಗಸದಿಂದ ಜಾರಿದರುಸಮಯವೇಕೆ ಇಷ್ಟು ಬೇಗ‌ಓಡುತ್ತಿದೆ ಎಂದುಮುನಿಸಿಕೊಂಡೆವು…..ನಿನ್ನೊಡನೆ ಪಿಸುಗುಡುವಾಗಅಲೆಗಳ ಬೋರ್ಗರೆತವೇಕೇಳಲಿಲ್ಲ ನನಗಂದು…. ಇಂದೆಕೊ ಮತ್ತೆ ಏಕಾಂತನಮ್ಮ ಹೆಸರನ್ನೇಕೊಕಡಲ ಅಲೆಗಳು ಬಂದುನುಂಗುತ್ತಿವೆ ಇಂದು… ಆಗಸದ ಸೂರ್ಯ ಅದೇಕೊನಿಧಾನಗತಿಯಲಿ ಚಲಿಸುತಿಹನೋ..ಕಡಲೇಕೊ ಬೋರ್ಗರೆದುನನ್ನ ನೋಡಿ ಆರ್ಭಟಿಸುತಿದೆಎನ್ನುವಂತೆ ಭಾಸ.. ಮರೆಯಾದೆ ಏಕೆ‌ ನನ್ನ ರಜನಿಅಗಾದ ಕಡಲಿಗೆ ಸೆರುತ್ತಿದೆನೀ ಉಳಿಸಿಹೋದ ಕಂಬನಿ…ಈ ಸಂಜೆ‌ ನೀ ಜೊತೆಗಿಲ್ಲಆದರೂ….ಕಡಲ ಅಲೆಗಳಿಗೆ ಸ್ಪರ್ಶಿಸುವುದನಾ ಮರೆತಿಲ್ಲ….‌‌

ಈ ಸಂಜೆ Read Post »

ಕಥಾಗುಚ್ಛ

ಕಥೆ ಶಾರದ ಭಾಗ-2 ಅನಸೂಯ ಎಂ.ಆರ್ ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು  “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ  ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್  SSLC ಪರೀಕ್ಷೆಯಲ್ಲಿ  ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು  ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ.   ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು  “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು  ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು ಶ್ರಮಗಳಿದ್ದರೆ ಸಾಕು ಈಗ ಮುಂದುವರಿಬಹುದು.ನೀನೇನು ಚಿಂತೆ ಮಾಡ್ಬೇಡ”   ಅಂದು ರಾತ್ರಿ ಎಲ್ಲರ ಊಟವಾದ ನಂತರ ಶಾರದಳೇ “ವರುಣ್, ಎಲೆಕ್ಟ್ರಿಕಲ್ ಶಾಪ್ ಇಡೋಕ್ಕೆ ಬಂಡವಾಳನ ಎಲ್ಲಿಂದ ಹೇಗೆ ವ್ಯವಸ್ಥೆ ಮಾಡ್ಬೇಕು ಅಂತ ಪ್ಲಾನ್ ಏನು ಮಾಡಿದೀಯಾ?”ಎಂದು ಕೇಳಿದಳು”ಅತ್ತೆ ಅಪ್ಪ ಒಂದು  ಸ್ಟಲ್ಪ ಬಂಡವಾಳ ಕೊಡಲಿ.ಅಂಗಡಿಗೆ ಹೇಗೂ ಬಾಡಿಗೆನ ಕೊಡಬೇಕಾಗಿಲ್ಲ ಆದ್ದರಿಂದ ಬ್ಯಾಂಕ್ ನಲ್ಲಿ ಸಾಲವನ್ನು ಕೊಡಿಸಲಿ. ಸಾಲ ತೀರಿಸೊ ಜವಾಬ್ದಾರಿನೂ ನಂದೆ” ಆಗ   ಮಂಜುನಾಥ “ಅಕ್ಕ ಇನ್ನು ವಾಣಿದು ಮದ್ವೆ ಆಗಿಲ್ಲ. ಇನ್ನ ಒಂದೆರಡು ವರ್ಷ ಅವರತ್ರನೇ ಕೆಲ್ಸ ಮಾಡಿ ಅನುಭವ ಆಗಲಿ ವಾಣಿ ಮದ್ವೆ ಆದ ಮೇಲೆ ಅವನು ಹೇಳಿದಂಗೆ  ಮಾಡಿಕೊಡ್ತೀನಿ”ಎಂದು ಹೇಳಿದ.”ಈಗಾಗಲೇ ಮೂರು ವರ್ಷದ ಅನುಭವ ಆಯ್ತು ಕಣಪ್ಪ ನಾನೇ ಸ್ವಂತ ಶಾಪ್ ಇಟ್ಟು ನಡಿಸೋ ಅಷ್ಟು ಜವಾಬ್ದಾರಿ ಬಂದಿದೆ. ನಾನೇನೂ ಇನ್ನು ಚಿಕ್ಕಹುಡುಗ ಅಲ್ಲ. ಎಲ್ಲರೂ ಸಪೋರ್ಟ್ ಮಾಡ್ರಿ” ಎಂದನು. “ಆಯ್ತು ಮಂಜು, ನೀನು ನಿನ್ನ ಕೈಲಾದಷ್ಟು ಕೊಡು ನನ್ನ ಕೈಲಾದಷ್ಟು ನಾನು ಕೊಡ್ತೀನಿ. ಉಳಿದಿದ್ದಕ್ಕೆ ಬ್ಯಾಂಕ್ ಲ್ಲಿ ಸಾಲ ತೆಗೆದುಕೊಡು. ಸಾಲದ ಹಣ ಅವನೇ ಕಟ್ಟಬೇಕು”ಎಂದು ತೀರ್ಮಾನವಾದ ಖುಷಿಯಲ್ಲಿ ತಮ್ಮ ವರುಣನ ಮುಖ ಅರಳಿದಾಗ ವಾಣಿ “ಅಂಗಡಿಗೆ ಏನಂತ ಹೆಸರಿಡ್ತೀಯಾ ವರುಣ” ಮಂಜು ತಕ್ಷಣವೇ “ಶಾರದಾ ಎಲೆಕ್ಟ್ರಿಕಲ್ಸ್”ಎನ್ನುತ್ತಿದ್ದಂತೆ ಎಲ್ಲರು ಚಪ್ಪಾಳೆ ಹಾಕಿದರು. ಎರಡು ತಿಂಗಳೊಳಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ತಿರುಗಾಡುತ್ತ ವರುಣ್ ಎಲ್ಲ ಕೆಲಸಗಳನ್ನು ಮುಗಿಸಿದನು   ಶುಭ ಮುಹೂರ್ತದಲ್ಲಿ ಅಂಗಡಿಯನ್ನು ಪ್ರಾರಂಭಿಸಿದನು  ಕೆಲವು ದಿನಗಳಾದ ಮೇಲೆ “ಅತ್ತೆ,ಇದು ನನ್ನ ಮೊದಲನೆ ಲಾಭ. ನೀನು ಅಮ್ಮ ನಿಮಗೇನು ಇಷ್ಟಾನೋ ತಗೊಳ್ಳಿ” ಹಣವನ್ನು ಕೊಡುತ್ತ ಹೇಳಿದ.” ನಮಗೇನು ಬೇಡ ಕಣಪ್ಪ ಮೊದಲು ಬ್ಯಾಂಕ್ ಸಾಲ ತೀರ್ಸು.ಆಮೇಲೆ ಕೊಡೋದು ಇದ್ದೇ ಇದೆ” ಶಾರದ ಹೇಳಿದಳು.ಆಗ ಮಂಗಳ ” ಹೌದು ಬ್ಯಾಂಕಿಗೆ ಕಟ್ಟಪ್ಪ”ಎಂದಳು. ಎಲ್ಲರೂ ಆ ರಾತ್ರಿ ಊಟಕ್ಕೆ  ಕುಳಿತಾಗ ಶಾರದ ವರುಣ್ ಹಣ ತಂದುಕೊಟ್ಟ ವಿಷಯ ಹೇಳಿ ಬ್ಯಾಂಕ್ ಸಾಲ ತೀರ್ಸಲು ತಿಳಿಸಿದೆ ಎಂದಳು. ಆಗ ಮಂಜುನಾಥ ಹೆಮ್ಮೆಯಿಂದ “ನಮ್ಮ ಮನೇಲಿರೊ ಐದು ಜನ ಇದೀವಿ ಅದ್ರಲ್ಲಿ ನಾಲ್ಕು ಜನ ದುಡಿತೀವಿ” ಹೇಳಿದ ಕೂಡಲೆ ವಾಣಿ ” ಅಪ್ಪ, ನಾವು ಐದು ಜನರು ದುಡೀತಾ ಇದೀವಿ ಕಣಪ್ಪ. ನಾವು ನಾಲ್ಕು ಜನ ಹೊರಗಡೆ ದುಡಿದ್ರೆ ಅಮ್ಮ ಮನೆಯೊಳಗೆ ದುಡೀತಾಳೆ.”ತಕ್ಷಣವೇ ಶಾರದ “ಸರ್ಯಾಗಿ ಹೇಳಿದೆ ಕಣೆ”ಎಂದು ಅವಳ ಬೆನ್ನು ತಟ್ಟಲು “ಆಯ್ತು ಮಗಳೆ ಒಪ್ಕಂಡೆ. ಅದಕ್ಕೆ ಹೇಳೋದು ನಾನು ನನ್ನ ಮಗಳು ಜಾಣೆ ಅಂತ” ಎಂದು ಹೇಳಿದವನು ತಕ್ಷಣ ಹೆಂಡತಿ ಕಡೆ ನೋಡುತ್ತಾ” ತಪ್ಪಾಯ್ತು ನಮ್ಮ ಮಗಳು”  ಎನ್ನಲು ಎಲ್ಲರೂ ನಕ್ಕು ಬಿಟ್ಟರು. ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು  “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ  ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ “ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ “ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು. ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ” ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ ಧ್ವನಿಗೂಡಿಸಿದರು. ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್  SSLC ಪರೀಕ್ಷೆಯಲ್ಲಿ  ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು  ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ.   ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು  “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು  ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು

Read Post »

You cannot copy content of this page

Scroll to Top