ಗಜಲ್
ಪರವೂರ ಜನರಲ್ಲ ಪರಿಪರಿಯಲಿ ಪೇರಿಸಿ
ಪರಾಂಬರಿಸೆ ಪಸರಿಸುವುದೇ ನಿನ್ನ ರೂಪ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—43 ಆತ್ಮಾನುಸಂಧಾನ ಜಿ.ಸಿ. ಕಾಲೇಜಿನಲ್ಲೊಂದು ‘ಅಭಿನಯ ಮಂಟಪ’ ಅಂಕೋಲೆಯಲ್ಲಿ ಮಾನ್ಯ ದಿನಕರ ದೇಸಾಯಿ ಅವರ ನಾಯಕತ್ವದಲ್ಲಿ ಸ್ಥಾಪನೆಗೊಂಡ “ಕೆನರಾ ವೆಲ್ಫೇರ್ ಟ್ರಸ್ಟ್” ಎಂಬ ಶಿಕ್ಷಣ ಸಂಸ್ಥೆ ಜಿಲ್ಲೆಯಾದ್ಯಂತ ಹುಟ್ಟುಹಾಕಿದ ಜನತಾ ವಿದ್ಯಾಲಯಗಳೆಂಬ ಪ್ರೌಢಶಾಲೆಗಳು ಜಿಲ್ಲೆಯಲ್ಲಿ ಅಕ್ಷರ ಜ್ಯೋತಿ ಬೆಳಗಿಸುವ ಮಹತ್ವದ ಕಾರ್ಯಾಚರಣೆಗೆ ತೊಡಗಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾದದ್ದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಒಂದು ಸುವರ್ಣಮಯ ಕಾಲಾವಧಿ. ಇದರ ಮುಂದಿನ ಹೆಜ್ಜೆಯಾಗಿ ಸ್ಥಾಪನೆಗೊಂಡದ್ದೇ ಅಂಕೋಲೆಯ ‘ಗೋಖಲೆ ಸೆಂಟನರಿ ಕಾಲೇಜ್’ ಎಂಬ ಮಹಾವಿದ್ಯಾಲಯ. ತಮ್ಮ ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ಆಯ್ಕೆಯಲ್ಲಿಯೂ ತುಂಬಾ ಕಾಳಜಿಪೂರ್ವಕ ಪರಿಶೀಲನೆ ನಡೆಸುವ ಮಾನ್ಯ ದೇಸಾಯಿಯವರು ಅತ್ಯಂತ ದಕ್ಷ ಪ್ರಾಮಾಣಿಕ ಪ್ರತಿಭಾ ಸಂಪನ್ನರನ್ನೇ ಆಯ್ಕೆ ಮಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಸೇವೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತ ಪ್ರತಿಯೊಂದು ಸಂಸ್ಥೆಯೂ ಯಶಸ್ವಿಯಾಗಿ ಬೆಳವಣಿಗೆ ಹೊಂದುವಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ಕೇ.ಜಿ.ನಾಯ್ಕ ಎಂಬ ದಕ್ಷ ಆಡಳಿತಗಾರನೊಬ್ಬನನ್ನು ಗೋಖಲೆ ಸೆಂಟನರಿ ಕಾಲೇಜಿನ ಪ್ರಥಮ ಪ್ರಾಂಶುಪಾಲರನ್ನಾಗಿ ಆಯ್ಕೆ ಮಾಡಿದ್ದು, ಅವರ ಆಡಳಿತದಲ್ಲಿ ಕಾಲೇಜು ಕೆಲವೇ ಕೆಲವು ವರ್ಷಗಳಲ್ಲಿ ತನ್ನ ಶೈಕ್ಷಣಿಕ ಸಾಧನೆಗಳಿಂದಲೇ ರಾಜ್ಯಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಪ್ರಚುರ ಪಡಿಸಿದ್ದು ಚರಿತ್ರಾರ್ಹ ಸಂಗತಿಯಾಗಿದೆ. ಕೇ.ಜಿ.ನಾಯ್ಕ ಜಿಲ್ಲೆಗೆ ಅಪರಿಚಿತರೇನಲ್ಲ. ಮೂಲತಃ ಇದೇ ಜಿಲ್ಲೆಯ ಕುಮಟಾ ತಾಲೂಕಿನ ಹನೇಹಳ್ಳಿಯೆಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಹನೇಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಧಾರವಾಡ ಇತ್ಯಾದಿಯಾಗಿ ಜಿಲ್ಲೆಯ ಹೊರಗಿದ್ದುಕೊಂಡೇ ಪದವಿ ಶಿಕ್ಷಣ, ಸ್ನಾತಕೋತ್ತರ ಪದವಿಗಳನ್ನು ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದವರು. ಬಹುಶಃ ಇದೇ ಕಾರಣದಿಂದ ಜಿಲ್ಲೆಯ ಬಹುಜನ ಸಮುದಾಯಕ್ಕೆ ಅಪರಿಚಿತರಾಗಿದ್ದವರು. ಇದು ಕೇ.ಜಿ.ನಾಯ್ಕರ ಪ್ರಾಂಶುಪಾಲ ಹುದ್ದೆಯ ಆಡಳಿತ ವ್ಯವಹಾರಗಳಿಗೆ ವರವಾಗಿಯೇ ಪರಿಣಮಿಸಿತು ಎಂಬುದು ಮುಂದಿನ ಅವರ ಕಾರ್ಯಕ್ಷಮತೆಯನ್ನು ಕಾಣುವಾಗ ಯಾರಿಗಾದರೂ ಮನವರಿಕೆಯಾಗುತ್ತದೆ. ಅಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಮಾನ್ಯ ಅಡಕೆಯವರಲ್ಲಿ ತಮ್ಮ ಬೇಡಿಕೆಯನ್ನು ಸಲ್ಲಿಸಿ ಸಮರ್ಥ ಆಡಳಿತಗಾರನೋರ್ವನನ್ನು ನೀಡುವಂತೆ ದೇಸಾಯಿಯವರು ಮಾಡಿದ ಮನವಿಗೆ ಸ್ಪಂದಿಸಿದ ಮಾನ್ಯ ಅಡಕೆ ಸಾಹೇಬರು ಅಂಕೋಲೆಗೆ ನೀಡಿದ ಕೊಡುಗೆಯೇ ಶ್ರೀಮಾನ್ ಕೇ.ಜಿ.ನಾಯ್ಕ ಎಂಬ ಗೋಖಲೆ ಶತಾಬ್ಧಿ ಮಹಾವಿದ್ಯಾಲಯದ ಪ್ರಪ್ರಥಮ ಪ್ರಾಂಶುಪಾಲರು. ತೆಳ್ಳಗೆ-ಬೆಳ್ಳಗೆ ತುಂಬಾ ಎತ್ತರದ ನಿಲುವಿನ, ಸದಾ ಗಾಂಭೀರ್ಯವೇ ಮೂರ್ತಿವೆತ್ತಂತೆ ತೋರುವ ಕೇ.ಜಿ.ನಾಯ್ಕರು ತಮ್ಮ ಸಂಸ್ಥೆಯ ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡೇ ಇರುತ್ತಿದ್ದರು. ಅವರ ಪೂರ್ವಾನುಮತಿ ಇಲ್ಲದೆ ಅಧ್ಯಾಪಕರಾಗಲಿ, ಸಿಬ್ಬಂದಿಗಳಾಗಲಿ, ವಿದ್ಯಾರ್ಥಿಗಳಾಗಲಿ, ಸರಕಾರಿ ಅಧಿಕಾರಿಗಳಾಗಲೀ ಅವರ ಚೇಂಬರ್ ಪ್ರವೇಶಿಸುವ ಅವಕಾಶವಿರಲಿಲ್ಲ. ಇದು ಹಲವರಿಗೆ ತಲೆನೋವಿನ ಸಂಗತಿಯೆನಿಸಿದರೂ ಪ್ರಾಚಾರ್ಯ ಹುದ್ದೆಯ ಘನತೆಯನ್ನು ಅವರಂತೆ ಕಾಪಾಡಿಕೊಂಡ ಇನ್ನೊಬ್ಬ ವ್ಯಕ್ತಿ ಅಪರೂಪಕ್ಕೆ ಅಪರೂಪವಾಗಿಯೂ ನನಗೆ ಕಂಡಿಲ್ಲ. ಮುಂಜಾನೆ ಹನ್ನೊಂದು ಗಂಟೆಗೆ ಅವರು ಕಾಲೇಜ್ ಕ್ಯಾಂಪಸ್ಸಿಗೆ ಬಂದರೆ ಪಾಠ ಪ್ರವಚನಗಳ ಧ್ವನಿ- ಪ್ರತಿಧ್ವನಿಗಳಲ್ಲದೆ ಬೇರೆ ಯಾವ ಸದ್ದುಗದ್ದಲವನ್ನೂ ಅವರು ಸಹಿಸುತ್ತಿರಲಿಲ್ಲ. ಅವರೊಮ್ಮೆ ಕಾರಿಡಾರಿನಲ್ಲಿ ನಿಂತು ಅತ್ತಿತ್ತ ಕಣ್ಣು ಹಾಯಿಸಿದರೆ ಒಂದು ನರಪಿಳ್ಳೆಯೂ ತರಗತಿಯಿಂದ ಹೊರಗೆ ಕಾಣಿಸುವುದು ಸಾಧ್ಯವಿರಲಿಲ್ಲ. ವರ್ತಮಾನದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಯ ಆವರಣವನ್ನು ಪ್ರವೇಶಿಸಿದರೂ ಇಂಥ ಅನುಭವವನ್ನು ಪಡೆಯುವುದು ಸಾಧ್ಯವೇ ಇಲ್ಲ. ಆದರೆ ಮಾನ್ಯ ಕೇ.ಜಿ.ನಾಯ್ಕ ಅವರು ಅದು ಹೇಗೆ ಅಂದಿನ ದಿನಗಳಲ್ಲಿ ಅಂಥ ಗಾಂಭೀರ್ಯವನ್ನು ಕಾಯ್ದುಕೊಂಡರು? ಎಂದು ಯೋಚಿಸಿದರೆ ಅಚ್ಚರಿಯೇ ಆಗುತ್ತದೆ. ಕಾಲೇಜಿನಂಥ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳನ್ನಲ್ಲದೇ ಪಠ್ಯೇತರ ವಿಷಯಗಳಲ್ಲಿಯೂ ಕಲಿಕೆಯ ಆಸಕ್ತಿ ತೋರಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಖಂಡಿತ ಸಾಧ್ಯವಿಲ್ಲ. ಕೇ.ಜಿ ನಾಯ್ಕರು ಆಡಳಿತದಲ್ಲಿ ದಕ್ಷತೆ ತೋರುವುದರೊಂದಿಗೆ ಕಠಿಣ ಶಿಸ್ತನ್ನು ಪಾಲಿಸುತ್ತಿದ್ದರು. ಅದರ ಜೊತೆಯಲ್ಲಿಯೇ ಅವರ ವ್ಯಕ್ತಿತ್ವದಲ್ಲಿ ವಿಶಾಲ ದೃಷ್ಠಿಕೋನ ಮತ್ತು ದೂರದರ್ಶಿತ್ವ ಅಡಗಿತ್ತು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಸ್ಥೆಯು ಕೊಡಬಹುದಾದ ಎಲ್ಲ ಅವಕಾಶಗಳನ್ನು ಪೂರೈಸಬೇಕೆಂಬ ಜವಬ್ದಾರಿಯಿತ್ತು. ಇಂಥ ಸಂದರ್ಭದಲ್ಲಿ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಅದನ್ನು ಕಾರ್ಯಗತಗೊಳಿಸುವ ಸಂಕಲ್ಪ ಶಕ್ತಿಯಿತ್ತು. ಕಾಲೇಜಿನ ಪಠ್ಯೇತರ ಚಟುವಟಿಕೆಗಳಿಗಾಗಿಯೇ ‘ಯೂನಿಯನ್’, ‘ಜಿಮಖಾನಾ’ ಎಂಬ ಎರಡು ವಿಭಾಗಗಳು ಕ್ರಿಯಾಶೀಲವಾಗಿದ್ದವು. ಅವು ತುಂಬ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದ್ದವು. ಕೇ.ಜಿ. ನಾಯ್ಕ ಅವರ ಇನ್ನೊಂದು ವ್ಯಕ್ತಿ ವಿಶೇಷವೆಂದರೆ ಗುಣ ಗ್ರಾಹಿತ್ವ. ಯಾವ ಅಧ್ಯಾಪಕರಿಂದ ಯಾವ ಕೆಲಸವನ್ನು ಯಶಸ್ವಿಯಾಗಿ ಮಾಡಿಸಬಹುದೆಂಬ ಸೂಕ್ಷ್ಮಜ್ಞತೆ ಇರುವುದರಿಂದ ನಿರ್ದಿಷ್ಟ ವಿಭಾಗಕ್ಕೆ ಸೂಕ್ತ ವ್ಯಕ್ತಿಗಳನ್ನೇ ಆಯ್ದು ಜವಾಬ್ದಾರಿಯನ್ನು ಒಪ್ಪಿಸುತ್ತಿದ್ದರು. ಆರಂಭದ ದಿನಗಳಲ್ಲಿ ಹೆಚ್ಚಿನ ಕಾಲಾವಧಿಗೆ ಯೂನಿಯನ್ / ಜಿಮಖಾನಾ ವಿಭಾಗದ ಜವಾಬ್ದಾರಿಯನ್ನು ಪ್ರೊ. ವಿ.ಎ.ಜೋಷಿ ಮತ್ತು ಪ್ರೊ.ಎಂ.ಪಿ.ಭಟ್ ನಿಭಾಯಿಸಿದ್ದಾರೆ. ಪ್ರಸಕ್ತ ಕಾಲಾವಧಿಯ ಚರ್ಚಾ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಜಿಲ್ಲೆಯ ತುಂಬ ಇತರ ಶಿಕ್ಷಣ ಸಂಸ್ಥೆಗಳ ಗಮನ ಸೆಳೆಯುವಂತೆ ಇರುತ್ತಿದ್ದವು. ಕ್ರೀಡಾ ವಿಭಾಗದಲ್ಲಿ ಪ್ರತಿ ವರ್ಷವೂ ಎಂಟರಿಂದ ಹತ್ತರವರೆಗೂ ವಿವಿಧ ಕ್ಷೇತ್ರದ ಕ್ರೀಡಾಪಟುಗಳು “ಯೂನಿವರ್ಸಿಟಿ ಬ್ಲೂ” ಎನ್ನಿಸಿಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದರು,. ಉದಯ ಪ್ರಭು ಎಂಬ ವಿದ್ಯಾರ್ಥಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದು ನಿಲ್ಲುವಲ್ಲಿ ಪ್ರಾಚಾರ್ಯ ಕೇ.ಜಿ ನಾಯ್ಕ ಮತ್ತು ಪ್ರೊ. ಎಂ.ಪಿ.ಭಟ್ ಅವರ ಕೊಡುಗೆ ತುಂಬಾ ಸ್ಮರಣೀಯವಾದುದೇ ಆಗಿದೆ. ಯೂನಿಯನ್ ಮತ್ತು ಜಿಮಖಾನಾ ವಿಭಾಗಗಳ ಕಾರ್ಯಕ್ಷೇತ್ರಗಳ ಆಚೆಗೂ ಚಟುವಟಿಕೆಗಳನ್ನು ವಿಸ್ತರಿಸಬೇಕೆಂದು ಕೇ.ಜಿ.ನಾಯ್ಕರು ಸದಾ ಚಿಂತನೆ ನಡೆಸುತ್ತಿದ್ದರು. ಸಹ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ಸಲಹೆಗಳು ದೊರೆತಾಗ ಪರಿಪೂರ್ಣ ಸಹಕಾರ ನೀಡಿ ಕಾರ್ಯರೂಪಕ್ಕೆ ತರುತ್ತಿದ್ದರು. ಅದರ ಫಲಶೃತಿಯಾಗಿ ಹುಟ್ಟಿಕೊಂಡ ಮಹತ್ವದ ವೇದಿಕೆಗಳೆಂದರೆ ‘ಅಭಿನಯ ಮಂಟಪ’, ‘ಫೋಟೋ ಕ್ಲಬ್’ ಮತ್ತು ‘ಲೇಡಿಸ್ ಫೋರಂ’. ವಿದ್ಯಾರ್ಥಿನಿಯರ ವೈಯಕ್ತಿಕ ಸಮಸ್ಯೆಗಳು ಮತ್ತು ಯೋಗಕ್ಷೇಮದತ್ತ ಗಮನ ಹರಿಸಲು ಸೂಕ್ತ ವೇದಿಕೆಯಾದದ್ದು ‘ಲೇಡಿಸ್ ಫೋರಂ’. ಅದನ್ನು ಸ್ಥಾಪಿಸುವುದರೊಂದಿಗೆ ವಿದ್ಯಾರ್ಥಿನಿಯರ ಮುಕ್ತ ಮಾತುಕತೆಗೆ ಅವಕಾಶ ಕಲ್ಪಿಸಿದ್ದು ಇದರ ಜವಾಬ್ದಾರಿಯನ್ನು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಾಂತಾ ಥಾಮಸ್ ಬಹು ದೀರ್ಘ ಕಾಲ ಯಶಸ್ವಿಯಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳಲ್ಲಿ ಫೋಟೋಗ್ರಾಫಿಯ ಅರಿವು ಮತ್ತು ಆಸಕ್ತಿಯನ್ನು ಬೆಳೆಸುವುದಕ್ಕಾಗಿಯೇ ಕಾಲೇಜಿನಲ್ಲಿ ‘ಫೋಟೋ ಕ್ಲಬ್’ ಒಂದನ್ನು ಸ್ಥಾಪಿಸಲಾಯಿತು. ಈ ಮಹತ್ವದ ಸಲಹೆ ಮತ್ತು ಯೋಜನೆಯನ್ನು ಪ್ರಾಚಾರ್ಯರ ಗಮನಕ್ಕೆ ತಂದ ರಸಾಯನ ಶಾಸ್ತ್ರ ಅಧ್ಯಾಪಕ ಪ್ರೊ.ವಿ.ಆರ್. ವೇರ್ಣೇಕರ್ ಮತ್ತು ಸಸ್ಯಶಾಸ್ತ್ರ ವಿಭಾಗದ ಪ್ರೊ.ಆರ್.ಬಿ ನಾಯ್ಕ ಎಂಬ ಅಧ್ಯಾಪಕರಿಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು ಹತ್ತಾರು ವರ್ಷಗಳವರೆಗೆ ನೂರಾರು ವಿದ್ಯಾರ್ಥಿಗಳು ಫೋಟೋಗ್ರಾಪಿಯ ಕಲಿಕೆಯ ಪ್ರಯೋಜನ ಪಡೆಯುವ ಅವಕಾಶವನ್ನು ಪ್ರಾಚಾರ್ಯ ಕೇ.ಜಿ. ನಾಯ್ಕ ಪೂರೈಸಿದರು. ಯೂನಿಯನ್ ವಿಭಾಗದ ‘ಕಲಾಮಂಡಲ’ದ ಅಧ್ಯಕ್ಷರಾಗಿ ಬಹಳಷ್ಟು ವರ್ಷ ಕಾರ್ಯನಿರ್ವಹಿಸಿದ್ದ ಪ್ರೊ. ಮೋಹನ ಹಬ್ಬು ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಮತ್ತು ನಾಟಕ ಕಲಿಕೆಯ ಅವಕಾಶ ಕಲ್ಪಿಸಲು ಒಂದು ಪ್ರತ್ಯೇಕ ವೇದಿಕೆಯ ಅವಶ್ಯಕತೆಯಿರುವುದನ್ನು ನಮ್ಮ ಪ್ರಾಚಾರ್ಯರ ಗಮನಕ್ಕೆ ತಂದರು. ಅದಕ್ಕೆ ಒಪ್ಪಿಕೊಂಡ ಪ್ರಾಚಾರ್ಯರು ಅಗತ್ಯವಾದ ಎಲ್ಲ ನೆರವನ್ನೂ ನೀಡುವ ಭರವಸೆಯೊಂದಿಗೆ ವೇದಿಕೆಗೆ ಪ್ರೊ.ಹಬ್ಬು ಅವರೇ ಸೂಚಿಸಿದ “ಅಭಿನಯ ಮಂಟಪ” ಎಂಬ ಹೆಸರಿನೊಂದಿಗೆ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಾರಂಬ ಮಾಡಿಸಿದ್ದರು. ಆರಂಭದ ಎರಡು ವರ್ಷಗಳ ಕಾಲ ಇಂಗ್ಲೀಷ್ ವಿಭಾಗದ ಅಧ್ಯಾಪಕರಾದ ಎಸ್.ಎಸ್.ನಾಯಕ ವೇದಿಕೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೆ, ಮುಂದಿನ ಹಲವು ವರ್ಷಗಳ ಕಾಲ ನಾನು “ಅಭಿನಯ ಮಂಟಪದ”ದ ಜವಾಬ್ದಾರಿ ವಹಿಸಿಕೊಂಡಿದ್ದೆ. ಯಕ್ಷಗಾನ ಕಲಿಕೆಗೆ ಅಗತ್ಯವಾದ ಹಿಮ್ಮೇಳದ ವಾದ್ಯಪರಿಕರಗಳಾದ ಮೃದಂಗ, ಚಂಡೆ, ಶೃತಿ ಪೆಟ್ಟಿಗೆ, ತಾಳ ಇತ್ಯಾದಿಗಳನ್ನೆಲ್ಲ ಪೂರೈಸಿಕೊಟ್ಟ ನಮ್ಮ ಪ್ರಾಚಾರ್ಯರು ನಿರ್ದಿಷ್ಟ ದಿನಾಂಕಗಳಲ್ಲಿ ಕಲಿಕೆಯ ವೇಳಾಪತ್ರಿಕೆಯನ್ನು ಸಿದ್ಧಪಡಿಸುವಂತೆ ಮಾಡಿ ತರಬೇತಿ ನೀಡುವ ಭಾಗವತ, ಮದ್ದಳೆಗಾರರ ಸಂಭಾವನೆಗೂ ಆರ್ಥಿಕ ನೆರವನ್ನು ನಿರಂತರವಾಗಿ ಒದಗಿಸಿಕೊಟ್ಟಿದ್ದರು. ಆರಂಭದ ದಿನಗಳಲ್ಲಿ ಹಿರಿಯರಾದ ಬುದ್ದು ಭಾಗ್ವತ ವಂದಿಗೆ, ಬಾಬಣ್ಣ ಮಾಸ್ತರ ವಂದಿಗೆ, ಕೃಷ್ಣ ಮಾಸ್ಕೇರಿ ಮುಂತಾದ ಮಹನೀಯರು ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಯ ತರಬೇತಿ ನೀಡಿದ್ದರು. ಇಂದು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ವೃತ್ತಿಯಲ್ಲಿದ್ದೂ ಹವ್ಯಾಸಿ ಯಕ್ಷಗಾನ ಭಾಗವತರೆಂದು ಹೆಸರು ಮಾಡಿರುವ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ ಅವರು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಇದೇ ಅಭಿನಯ ಮಂಟಪದ ಸದಸ್ಯರಾಗಿ ಮಾರ್ಗದರ್ಶನ ಪಡೆದಿದ್ದರು. ವಿದ್ಯಾರ್ಥಿಯಾಗಿರುವಾಗಲೇ ಗೆಳೆಯರ ಬಳಗದೊಂದಿಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸುತ್ತಿದ್ದರು. ವಿದ್ಯಾರ್ಥಿ ಭಾಗವತರಾಗಿಯೇ ಬೊಮ್ಮಯ್ಯ ಗಾಂವಕರರು ಕಾಲೇಜಿನಲ್ಲಿ ‘ತಾಳಮದ್ದಲೆ’ ಕಾರ್ಯಕ್ರಮವೊಂದನ್ನು ಸಂಘಟಿಸಿ “ಭೀಷ್ಮ ವಿಜಯ” ಪ್ರಸಂಗವನ್ನು ಸಾದರಪಡಿಸಿದ್ದರು. ಈ ತಾಳಮದ್ದಲೆ ಪ್ರದರ್ಶನದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರೊ. ಕೇ.ವಿ.ನಾಯಕ ಡಾ. ಶ್ರೀಪಾದ ಶೆಟ್ಟಿ ಮತ್ತು ನಾನು ಅರ್ಥಧಾರಿಗಳಾಗಿ ಭಾಗವಹಿಸಿದ್ದೆವು. ಬೊಮ್ಮಯ್ಯ ಗಾಂವಕರ ತನ್ನ ಗೆಳೆಯರ ಬಳಗದೊಂದಿಗೆ ಸಾದರ ಪಡಿಸಿದ “ರುಕ್ಮಿಣೀ ಸ್ವಯಂವರ” ಎಂಬ ಯಕ್ಷಗಾನ ಪ್ರದರ್ಶನ ಬಹುಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂದು ವೃತ್ತಿಯಿಂದ ಪ್ರಸಿದ್ಧ ನ್ಯಾಯವಾದಿಯಾಗಿ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ ಕಾರವಾರದ ನಾಗರಾಜ ನಾಯಕ ನಮ್ಮ ಕಾಲೇಜಿನ ‘ಅಭಿನಯ ಮಂಟಪ’ದ ಸದಸ್ಯರಾಗಿದ್ದರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಗೆಳೆಯರೊಂದಿಗೆ ಕಾಲೇಜಿನಲ್ಲಿ ಪ್ರದರ್ಶನಗೊಂಡ ‘ಲವ-ಕುಶ’ ಪ್ರಸಂಗದ ಕುಶನ ಪಾತ್ರನಿರ್ವಹಣೆಯಲ್ಲಿ ನಾಗರಾಜ ನಾಯಕ ತೋರಿದ ಕಲಾವಂತಿಕೆಯು ಬಹು ಜನರ ಮೆಚ್ಚುಗೆ ಗಳಿಸಿದ್ದು ಒಂದು ಸುಂದರ ನೆನಪಾಗಿದೆ. ಸೂರ್ವೆಯ ಶಿಕ್ಷಕ ರಾಜೇಶ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಹೊಸ್ಕೇರಿ ಹೊನ್ನಪ್ಪ ನಾಯಕ, ಶಿಕ್ಷಕರಾಗಿರುವ ಶೀಳ್ಯ ರಮಾನಂದ ನಾಯಕ, ನಿತೀಶ ನಾಯಕ ಮುಂತಾದವರೆಲ್ಲ ಯಕ್ಷರಂಗದಲ್ಲಿ ಹೆಸರು ಮಾಡಿರುವುದಕ್ಕೆ ಕಾಲೇಜಿನ ‘ಅಭಿನಯ ಮಂಟಪ’ ಮಹತ್ವದ ಕೊಡುಗೆ ನೀಡಿದೆ ಎಂದು ನಾನು ಭಾವಿಸಿದ್ದೇನೆ. ಅಂದಿನ ದಿನಗಳಲ್ಲಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವೆಂದರೆ ಎರಡು ದಿನಗಳ ಉತ್ಸವವೇ ಆಗಿರುತ್ತಿತ್ತು. ಮೊದಲ ದಿನ ರಾಜ್ಯಮಟ್ಟದ ಖ್ಯಾತ ಸಾಹಿತಿಗಳು ಮುಖ್ಯ ಅಥಿತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ನೀಡುವ ಉಪನ್ಯಾಸ, (ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬೀಚಿ, ಶ್ರೀರಂಗ, ವಿ.ಕೃ.ಗೋಕಾಕ್ ಮುಂತಾದವರು) ವಿದ್ಯಾರ್ಥಿಗಳ ಯೂನಿಯನ್/ಜಿಮಖಾನಾ ಪ್ರಶಸ್ತಿಗಳು, ಮೆರಿಟ್ ಪ್ರಶಸ್ತಿ ಪತ್ರಗಳ ವಿತರಣೆ, ಕೊನೆಯಲ್ಲಿ ಕಾಲೇಜಿನ ಕಲಾಮಂಡಲ ಸಾದರಪಡಿಸುವ ಮನರಂಜನೆ ಕಾರ್ಯಕ್ರಮಗಳು ಇರುತ್ತಿದ್ದವು. ಎರಡನೆಯ ದಿನದ ರಾತ್ರಿಯಿಡೀ ಅಭಿನಯ ಮಂಟಪದ ಕಲಾವಿದರಿಂದ ನಾಟಕ ಮತ್ತು ಯಕ್ಷಗಾನ ಪ್ರದರ್ಶನಗಳು ಇರುತ್ತಿದ್ದವು. ರಾಜೇಂದ್ರ ನಾಯಕ ಸಗಡಗೇರಿ, ಮನೋಹರ ನಾಯಕ ಜಮಗೋಡ, ತೇಜಸ್ವಿ ನಾಯಕ, ಗೋಕರ್ಣ, ಪೂರ್ಣಿಮಾ ಗಾಂವಕರ, ವಿಶ್ವಭಾರತಿ ನಾಯಕ, ದಾಮೋದರ ನಾಯ್ಕ ಮುಂತಾದ ವಿದ್ಯಾರ್ಥಿ ಕಲಾವಿದರು ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅಧ್ಯಾಪಕರಲ್ಲಿ ಪ್ರೊ. ಹಬ್ಬು, ದಫೇದಾರ, ಎಲ್.ಎನ್. ನಾಯ್ಕ ಮತ್ತು ನಾನು ಪಾತ್ರಧಾರಿಗಳಾಗಿ ವಿದ್ಯಾರ್ಥಿಗಳ ಜೊತೆ ಸೇರುತ್ತಿದ್ದೆವು. ಅಂದು ನಾವು ಪ್ರದರ್ಶಿಸಿದ ‘ಜಾತ್ರೆ’ ‘ಕಂಬನಿ’ ಮುಂತಾದ ನಾಟಕಗಳು ನಮ್ಮೆಲ್ಲರಿಗೂ ಒಳ್ಳೆಯ ಹೆಸರು ತಂದುಕೊಟ್ಟಿದ್ದವು. ೧೯೬೬ ರಿಂದ ಆರಂಭಿಸಿ ಪ್ರಾಚಾರ್ಯ ಕೇ.ಜಿ.ನಾಯ್ಕರು ನಿವೃತ್ತಿ ಹೊಂದಿದ ೧೯೯೧ ರವರೆಗಿನ ಕಾಲಾವಧಿಯಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳೂ ನಿರಂತರವಾಗಿ ನಡೆಯುವಂತೆ ಎಲ್ಲರೂ ಸಹಕಾರ ನೀಡಿ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ತದನಂತರದ ದಿನಗಳಲ್ಲಿ ಈ ಮಹತ್ವದ ವೇದಿಕೆಗಳಲ್ಲಿಯೂ ಕಟ್ಟುನಿಟ್ಟಿನ ಕಾರ್ಯಕ್ರಮ ಸಂಘಟನೆ ನಡೆಯಲಿಲ್ಲ. ಕಾಲಕ್ರಮೇಣ ನಾವೆಲ್ಲರಿದ್ದೂ ನಮ್ಮ ಕಣ್ಣೆದುರೇ ಈ ಮಹತ್ವದ ವೇದಿಕೆಗಳು ನಿಷ್ಕಿçಯವಾದದ್ದು ಒಂದು ದುರಂತವೆಂದೇ ಹೇಳಬೇಕು. ಏನಿದ್ದರೂ ಪದವಿ ಮಹಾವಿದ್ಯಾಲಯದಂಥ ಸಂಸ್ಥೆಯ ಆವರಣದಲ್ಲಿ ಇಂಥ ಮಹತ್ವದ ವೇದಿಕೆಗಳು ಉದಯವಾದದ್ದು ಹಲವು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ನಮ್ಮ ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತುಂಬಾ ಮಹತ್ವದ ಕೊಡುಗೆ ನೀಡಿದೆ ಎಂಬುದರಲ್ಲಿ ಯಾವುದೇ
ಕಾಮನೆಯ ಕಡಲಿನ ಭೋರ್ಗರೆತ ನಿಲ್ಲಿಸಲಾಗದು ಎಂಬುದೇನೋ ಸರಿ
ಒಂಟಿಯಾಗಿ ಮನವ ಭಾವದಲೆಯಲೇ ತೇಲಾಡಿಸಿ ನೀ ತಪ್ಪುಮಾಡಿದೆ ಮಿತ್ರ
ಧಾರಾವಾಹಿ ಆವರ್ತನ ಅದ್ಯಾಯ-34 ಆವರ್ತನ ಅಧ್ಯಾಯ: 34 ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು. ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ ಜೀವವರ್ಗಗಳಿಂದ ಪ್ರಕೃತಿಗೂ ಮತ್ತು ಮುಖ್ಯವಾಗಿ ಮಾನವ ಪರಿಸರಕ್ಕೂ ದೊರಕುತ್ತಿರುವಂಥ ವಿವಿಧ ರೂಪದ ಉಪಕಾರಗಳು ಹಾಗೂ ನಿಸರ್ಗದಲ್ಲಿ ಆ ಜೀವರಾಶಿಗಳ ಪಾತ್ರ ಮತ್ತು ಮಹತ್ವಗಳು ಯಾವ ಬಗೆಯವು ಎಂಬಂಥ ಹತ್ತು ಹಲವು ವಿಚಾರಗಳ ಕುರಿತು ಅನೇಕ ವರ್ಷಗಳಿಂದ ಅಧ್ಯಯನ ಮಾಡುತ್ತ ಬಂದವನು. ಜೊತೆಗೆ ಒಂದಷ್ಟು ಜನರ ಪ್ರಕೃತಿ ವಿರೋಧಿ ಚಟುವಟಿಕೆ ಮತ್ತು ಜೀವನಕ್ರಮಗಳಿಂದ ಆಗಾಗ ಘಾಸಿಗೊಳ್ಳುವ ವಿವಿಧ ಜಾತಿಯ ಹಾವುಗಳನ್ನು ತಂದು ಶುಶ್ರೂಷೆ ನೀಡುವ ಸೇವೆಯಲ್ಲೂ ಸಾರ್ಥಕತೆಯನ್ನು ಕಾಣುತ್ತಿರುವವನು. ಅಷ್ಟಲ್ಲದೇ ಹಾವುಗಳು ಮತ್ತವುಗಳ ಮೇಲಿನ ಜನರ ನಂಬಿಕೆಗಳು ಹಾಗೂ ವಿಶೇಷತೆಗಳ ಕುರಿತು ಪತ್ರಿಕೆಗಳಿಗೂ ನಿರಂತರ ಬರೆಯುತ್ತ ಜನಜಾಗ್ರತಿ ಮೂಡಿಸುತ್ತ ಬರುತ್ತಿರುವವನು.ಹೀಗಾಗಿ ಅವನಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಮತ್ತು ಜನರ ಪ್ರೀತಿ, ಬೆಂಬಲಗಳೂ ಸಹಜವಾಗಿಯೇ ಒಲಿದು ಬಂದಿದ್ದವು.ಗುರೂಜಿಯವರಿಗೆ ರೋಹಿತ್ನ ಈ ಎಲ್ಲ ಕಾರ್ಯ ಚಟುವಟಿಕೆಗಳ ಕುರಿತು ಚೆನ್ನಾಗಿ ತಿಳಿದಿತ್ತು.ಹಾಗಾಗಿ ಅವರಿಂದು ಅವನನ್ನು ಪರಿಚಯಿಸಿಕೊಳ್ಳಲಿಚ್ಛಿಸಿ ಶಂಕರನಿಂದ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದರು.ಅತ್ತಲಿಂದ ರೋಹಿತನೂ ಕರೆ ಸ್ವೀಕರಿಸಿದ. ಅವನಿಗೂ ಗುರೂಜಿಯವರ ಕುರಿತು ತಿಳಿದಿತ್ತು.ಹಾಗಾಗಿ ಅವರೊಡನೆ ಮಾತಾಡುವ ಆಸಕ್ತಿ ಉಂಟಾಗದಿದ್ದರೂ ಶಿಷ್ಟಾಚಾರಕ್ಕೆ, ‘ನಮಸ್ಕಾರ ಸರ್ ಹೇಳಿ…?’ ಎಂದ. ‘ಏನಿಲ್ಲ ರೋಹಿತರೇ, ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇವೆ ಮತ್ತು ಓದಿದ್ದೇವೆ.ಪ್ರಕೃತಿಗೂ ನಾಗಸಂತತಿಗೂ ನೀವು ಮಾಡುತ್ತಿರುವ ಸೇವೆ ನಿಜಕ್ಕೂ ಶ್ರೇಷ್ಠವಾದದ್ದು.ಆ ಸುಬ್ರಹ್ಮಣ್ಯ ಮತ್ತು ಆದಿಶೇಷರ ಆಶೀರ್ವಾದಗಳು ಸದಾ ನಿಮ್ಮ ಮೇಲಿರುತ್ತವೆ.ಹಾಗಾಗಿಯೇ ನೀವಿಂದು ನಮ್ಮ ರಾಜ್ಯದ್ಯಂತ ಪ್ರಸಿದ್ಧಿ ಪಡೆದಿದ್ದೀರಿ…!’ ಎಂದು ಹೊಗಳಿದರು. ರೋಹಿತ್ಗೆ ಮುಜುಗರವಾಯಿತು.‘ಹಾಗೇನಿಲ್ಲ ಸರ್.ನಾನೂ ಎಲ್ಲರಂತೆಯೇ ಬದುಕುತ್ತಿರುವವನು.ಆದರೆ ಜೀವನವೆಂದ ಮೇಲೆ ಅದಕ್ಕೊಂದು ಚಟುವಟಿಕೆ ಮತ್ತು ಅರ್ಥವಿರಬೇಕೆಂದು ಅನ್ನಿಸಿದ್ದರಿಂದ ಈ ಹವ್ಯಾಸಕ್ಕೆ ಅಂಟಿಕೊಂಡೆ.ನೀವು ಹೇಳಿದಂತೆ ನನ್ನ ಕಾಯಕಕ್ಕೆ ದೇವರ ಆಶೀರ್ವಾದವೂ ದೊರಕಿರುವುದು ನನ್ನ ಪುಣ್ಯ. ಹ್ಞಾಂ! ಹಾಗಂತ ನನ್ನದೇನೂ ನಿಸ್ವಾರ್ಥ ಸೇವೆಯಲ್ಲ ಸರ್.ನನ್ನ ಕುಟುಂಬ ನಿರ್ವಹಣೆಗೆ ಅದೆಷ್ಟು ಬೇಕೋ ಅಷ್ಟನ್ನು ನನ್ನ ಹವ್ಯಾಸವೇ ಒದಗಿಸುತ್ತಿದೆ.ನಿಮ್ಮ ಹಾರೈಕೆಗೆ ಥ್ಯಾಂಕ್ಸ್!’ ಎಂದ. ‘ಅರೆರೇ, ಹಾಗಲ್ಲ ರೋಹಿತರೇ…! ನಿಮ್ಮ ಹವ್ಯಾಸವನ್ನು ನೀವು ಅಷ್ಟೊಂದು ಹಗುರವಾಗಿ ಭಾವಿಸಬೇಡಿ ಮತ್ತು ನಿಮ್ಮ ಕಾರ್ಯಕ್ಷೇತ್ರ ನಿಮ್ಮದೇ ಆಯ್ಕೆ ಎಂದು ಕೂಡಾ ತಿಳಿಯಬೇಡಿ. ಅದೆಲ್ಲ ನೀವು ನಿಮ್ಮ ಪೂರ್ವಜನ್ಮದಲ್ಲಿ ಮಾಡಿದ ಸತ್ಕಾರ್ಯದ ಫಲವೇ ಸರಿ! ಆದ್ದರಿಂದಲೇ ನಿಮ್ಮ ಸೇವೆಯನ್ನು ಎಲ್ಲರೂ ಹೊಗಳುವಂತಾಗಿರುವುದು! ಅಲ್ಲದೇ ಇನ್ನೊಂದು ಮಾತನ್ನೂ ಹೇಳುತ್ತೇವೆ ಕೇಳಿ. ಹಾವು ಹಿಡಿಯುವವರು ಬೇಕಾದಷ್ಟು ಜನ ಸಿಗುತ್ತಾರೆ ರೋಹಿತರೇ! ಆದರೆ ನಿಮ್ಮಂತೆ ಆ ಜೀವಿಗಳ ಮೇಲೆ ನಿಜವಾದ ಪೀತಿ ಮತ್ತು ಕಾಳಜಿಯಿಟ್ಟುಕೊಂಡು ಅವುಗಳೊಂದಿಗೇ ಬದುಕುವುದಿದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಭಾರಿ ಧೈರ್ಯವೂ ಸಾಹಸವೂ ಬೇಕಾಗುತ್ತದೆ. ಅದೆಲ್ಲ ನಿಮ್ಮಲ್ಲಿದೆ.ಹಾವುಗಳ ಕುರಿತು ನೀವು ಜನರಲ್ಲಿರುವ ಅಜ್ಞಾನವನ್ನು ನಿವಾರಿಸುವಂಥ ಉಪನ್ಯಾಸಗಳನ್ನೂ ನೀಡುತ್ತಿರುವುದನ್ನು ಗಮನಿಸುತ್ತಿದ್ದೇವೆ.ಹಾಗಾಗಿಯೇ ಇವತ್ತು ನಿಮ್ಮೊಂದಿಗೆ ಮಾತಾಡಲು ನಮಗೆ ಮನಸ್ಸಾದುದು.ನಾವು ನಿಮ್ಮನ್ನು ಹೊಗಳಿದೆವು ಅಂತ ದಯವಿಟ್ಟು ಭಾವಿಸಬೇಡಿ!’ ಎಂದು ಗುರೂಜಿಯವರು ಅವನ ಮನಸ್ಸಿಗೆ ನಾಟುವಂತೆಯೂ ಮತ್ತು ತಮ್ಮ ಬಗ್ಗೆ ಅವನಲ್ಲಿ ಸದಾಭಿಪ್ರಾಯ ಮೂಡುವಂತೆಯೂ ಮಾತಾಡಿದರು. ಆದರೆ ಅವನ ಹವ್ಯಾಸ ಹಾಗೂ ಆ ಕುರಿತು ಅವನ ಜ್ಞಾನವನ್ನು ತಿಳಿದಿದ್ದ ಊರಿನ ಬಹುತೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನು ಇದೇ ರೀತಿ ಪ್ರಶಂಸಿಸುತ್ತ ಬರುತ್ತಿದ್ದುದರಿಂದ ಇಂದು ಗುರೂಜಿಯವರ ಮಾತಿನಿಂದ ಅವನಿಗೆ ಖುಷಿಯೊಂದಿಗೆ ಅತೀವ ಸಂಕೋಚವೂ ಮೂಡಿತು. ‘ಎಲ್ಲಾ ತಮ್ಮಂಥವರ ಆಶೀರ್ವಾದ ಸರ್…!’ ಎಂದಷ್ಟೇ ಹೇಳಿ ಸುಮ್ಮನಾದ. ‘ನಮ್ಮ ಆಶೀರ್ವಾದ ಮತ್ತು ಹಾರೈಕೆಗಳು ಸದಾ ನಿಮ್ಮೊಂದಿಗೆ ಇರುತ್ತವೆ ರೋಹಿತರೇ.ಯಾಕೆಂದರೆ ನಾವು ಕೂಡಾ ನಿಮ್ಮ ಹಾಗೆಯೇ ಬೇರೊಂದು ರೀತಿಯಲ್ಲಿ ನಾಗನ ಸೇವೆ ಮಾಡುತ್ತ ಬರುತ್ತಿರುವವರು.ಆ ಸೇವೆಯಲ್ಲಿ ಸಿಗುವ ಒಂದು ಸಣ್ಣ ಮೊತ್ತವನ್ನು ನಿಮ್ಮಂಥವರ ಸತ್ಕಾರ್ಯಕ್ಕೂ ವಿನಿಯೋಗಿಸಬೇಕೆಂಬುದು ನಮ್ಮ ಬಹಳ ದಿನದ ಆಸೆಯಾಗಿತ್ತು.ಹಾಗಾಗಿ ನಿಮ್ಮನ್ನೊಮ್ಮೆ ಭೇಟಿಯಾಗಬೇಕು.ಅದಕ್ಕೆ ಯಾವಾಗ ಬರಬಹುದು ನಾವು…?’ ಎಂದರು ಆತ್ಮೀಯವಾಗಿ.ಆದರೆ ಅಷ್ಟು ಕೇಳಿದ ರೋಹಿತ್ನಿಗೆ ಪೇಚಾಟಕ್ಕಿಟ್ಟುಕೊಂಡಿತು. ಆದರೂ ಸಂಭಾಳಿಸಿಕೊಂಡವನು, ‘ಅಯ್ಯೋ ಸರ್ ತಾವು ಯಾವತ್ತು ಬೇಕಿದ್ದರೂ ಬರಬಹುದು.ಆದರೆ ನನಗೀಗ ಹಣದ ಅವಶ್ಯಕತೆಯಿಲ್ಲ. ಆ ವಿಷಯದಲ್ಲಿ ದಯವಿಟ್ಟು ಕ್ಷಮಿಸಬೇಕು!’ ಎಂದು ನಯವಾಗಿ ನಿರಾಕರಿಸಿದ. ಅದರಿಂದ ಗುರೂಜಿ ತುಸು ನಿರಾಶರಾದರು.ಆದರೂ ಪ್ರಯತ್ನ ಬಿಡದೆ, ‘ಸರಿ ರೋಹಿತರೇ, ನೀವು ಬಹಳ ಸ್ವಾಭಿಮಾನಿ ಅಂಥ ತಿಳಿಯುತ್ತದೆ.ಹಾಗಾಗಿಯೂ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗಲು ಬಯಸುತ್ತೇವೆ.ನಾಳೆ ಬಂದರೆ ಹೇಗೆ…?’ ಎಂದು ಅಮಾಯಕರಂತೆ ಪ್ರಶ್ನಿಸಿದರು. ‘ಖಂಡಿತವಾಗಿಯೂ ಬನ್ನಿ ಸರ್..!’ ಎಂದ ರೋಹಿತ್. ಗುರೂಜಿಯವರು ಮರುದಿನ ಮುಂಜಾನೆ ರೋಹಿತ್ಗೆ ಕರೆ ಮಾಡಿ ತಾವು ಹೊರಟಿರುವುದನ್ನು ತಿಳಿಸಿದರು.ಯಾವುದಕ್ಕೂ ಘನತೆಗಿರಲಿ ಎಂದುಕೊಂಡು ಒಬ್ಬ ಸಹಾಯಕನನ್ನೂ ಕರೆದುಕೊಂಡು ದೊಡ್ಡ ಟ್ಯಾಕ್ಸಿಯೊಂದರಲ್ಲಿ ರೋಹಿತ್ನ ಮನೆಗೆ ಹೋದರು. ಗುರೂಜಿಯವರ ವೇಷ ಭೂಷಣವನ್ನೂ, ಮತ್ತವರ ಎದೆಯ ಮೇಲೆ ತೂಗಾಡುತ್ತಿದ್ದ ವಿವಿಧ ದೇವತಾ ಮೂರ್ತಿಗಳಿದ್ದ ಅನೇಕ ಮಾಲೆಗಳನ್ನೂ ಕಂಡ ರೋಹಿತ್ ಕಸಿವಿಸಿಯಾಗಿಬಿಟ್ಟ. ಆದರೂ ತನ್ನ ಪುಟ್ಟ ಮನೆಗೆ ಅವರನ್ನು ಆದರದಿಂದ ಸ್ವಾಗತಿಸಿದ. ಅಂಗಳದಲ್ಲಿಯೇ ಕುರ್ಚಿಗಳನ್ನು ಹಾಕಿ ಅವರನ್ನು ಕುಳ್ಳಿರಿಸಿ ಕುಶಲೋಪರಿ ವಿಚಾರಿಸಿದ. ಗುರೂಜಿಯವರು ಸರಳ ಸಜ್ಜನಿಕೆಯ ಮೂರ್ತಿಯಂತೆ ಅವನೆದುರು ಕುಳಿತು ಮಾತಿಗಿಳಿದರು. ಅವನ ಸಾಧನೆ ಮತ್ತು ಪರಿಶ್ರಮವನ್ನು ಮರಳಿ ಪದೇಪದೇ ಹೊಗಳುತ್ತ ಒಲಿಸಿಕೊಳ್ಳಲು ಪ್ರಯತ್ನಿಸಿದರು.ಅದರಿಂದ ಅವನಿಗೂ ತಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡಿದಂತೆ ಅವರಿಗನ್ನಿಸಿತು.ಹಾಗಾಗಿ ಸುಮಾರು ಹೊತ್ತಿನ ಮಾತುಕತೆಯ ನಂತರ ತಾವು ಬಂದ ವಿಷಯದತ್ತ ಗಮನ ಹರಿಸಿದವರು ತಮ್ಮ ಸಹಾಯಕನಿಗೇನೋ ಸಜ್ಞೆ ಮಾಡಿದರು. ಅವನು ಕೂಡಲೇ ಕಾರಿನತ್ತ ಓಡಿಹೋಗಿ ಒಂದು ದೊಡ್ಡ ಚೀಲವನ್ನು ಹೊತ್ತು ತಂದ. ಅದರೊಳಗಿದ್ದ ಹಿತ್ತಾಳೆಯ ಹರಿವಾಣವನ್ನು ತೆಗೆದಿರಿಸಿದ. ಸೇಬು ಚಿಕ್ಕು ಮೋಸಂಬಿ ಮತ್ತು ಬಾಳೆಹಣ್ಣುಗಳನ್ನು ಆ ಹರಿವಾಣದಲ್ಲಿ ಓಪ್ಪವಾಗಿ ಜೋಡಿಸಿದ. ಗಂಧದ (ಅಕೇಶಿಯಾ ಮರದ ಕೀಸುಳಿಯಿಂದ ತಯಾರಿಸಿ, ತುಸು ಗಂಧದ ಪರಿಮಳವನ್ನು ಅದಕ್ಕೆ ಸಿಂಪಡಿಸಿ ಶ್ರೀಗಂಧದ ಹಾರವೆಂದು ಮಾರಾಟ ಮಾಡುವ ಮಾಲೆ!) ಹಾರವನ್ನೂ ರೇಶ್ಮೆಯ ಶಾಲನ್ನೂ ತೆಗೆದು ಗುರೂಜಿಯವರ ಕೈಗಿತ್ತ. ಆಗ ರೋಹಿತ್ಗೆ, ಗುರೂಜಿಯವರು ಸಾಧಕರ ಮನೆ ಬಾಗಿಲಿಗೇ ಬಂದು ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂಬುದು ಮನವರಿಕೆಯಾಯಿತು. ಅವನು ಸಂಕೋಚದಿಂದ ಹಿಡಿಯಾದ. ಆದರೂ ತನ್ನ ಒಳಮನಸ್ಸು ಆನಂದದಿಂದ ಅರಳಿದ್ದನ್ನೂ ಗಮನಿಸಿದ. ಜೊತೆಗೆ ಈ ಗುರೂಜಿಯವರ ಸನ್ಮಾನವನ್ನು ಸ್ವೀಕರಿಸಬೇಕೋ, ಬಿಡಬೇಕೋ ಎಂಬ ಗೊಂದಲಕ್ಕೂ ಬಿದ್ದ. ಆದರೆ ಅವನ ಯಾವ ಯೋಚನೆಗಳಿಗೂ ಆಸ್ಪದವಿಲ್ಲದಂತೆ ಗುರೂಜಿಯವರು ತಟ್ಟನೆ ಎದ್ದು ನಿಂತರು. ನಗುತ್ತ ಅವನ ಕೊರಳಿಗೆ ಗಂಧದ ಮಾಲೆ ತೊಡಿಸಿ ಫಲಪುಷ್ಪಾದಿಗಳು ತುಂಬಿದ ಹರಿವಾಣವನ್ನು ಅವನ ಮಡಿಲಲ್ಲಿಟ್ಟು ಪ್ರಶಸ್ತಿ ಫಲಕದ ಬದಲಾಗಿ ಕಾವಿ ಬಟ್ಟೆಯ ಸಣ್ಣದೊಂದು ಗಂಟನ್ನು ಅವನ ಕೈಯಲ್ಲಿಟ್ಟು ಪುರಸ್ಕರಿಸಿದರು. ಗುರೂಜಿಯವರ ಅಭಿಮಾನಕ್ಕೆ ರೋಹಿತ್ ತುಸುಹೊತ್ತು ಮೂಕನಾದ. ಅವರ ಪಾದಗಳೆದುರು ಡೊಗ್ಗಾಲು ಬಿದ್ದು ನಮಸ್ಕರಿಸಿದ. ಗುರೂಜಿಯವರು ಅವನ ಹಿಂತಲೆಗೆ ಹಸ್ತಗಳನ್ನಿಟ್ಟು, ‘ನೂರು ಕಾಲ ಸಮಾಜಸೇವೆ ಮಾಡುತ್ತ ಪ್ರಸಿದ್ಧಿವಂತನಾಗಿ ಬಾಳು!’ ಎಂದು ಹರಸಿದರು. ತಮ್ಮ ಮನೆಗೆ ಧಾರ್ಮಿಕ ಗುರುಗಳೊಬ್ಬರು ಬಂದು ಕುಳಿತುಕೊಂಡು ತಮ್ಮೊಡನೆ ಪ್ರೀತಿಯಿಂದ ಮಾತನಾಡಿದ್ದು ರೋಹಿತ್ನ ತಾಯಿಗೆ ಮಠದ ಶ್ರೀ ಸ್ವಾಮಿಗಳೇ ಆಗಮಿಸಿದಷ್ಟು ಆನಂದವಾಗಿದ್ದರೆ ಅವನ ಹೆಂಡತಿಗೂ ಗುರೂಜಿಯವರು, ‘ಪ್ರತಿಯೊಬ್ಬ ಸಾಧಕನ ಯಶಸ್ಸಿನ ಹಿಂದೆ ಅವನ ಹೆಂಡತಿಯ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ!’ ಎಂಬ ಮಾತನ್ನು ಒತ್ತಿ ಹೇಳಿದ್ದು ಮತ್ತು ತಮ್ಮಿಬ್ಬರನ್ನೂ ಅವರು ಯದ್ವಾತದ್ವ ಹೊಗಳಿ ಅಟ್ಟಕೇರಿಸಿ ಆಶೀರ್ವದಿಸಿದ್ದೆಲ್ಲವೂ ಅವಳಿಗೆ ಹೇಳತೀರದಷ್ಟು ಖುಷಿಕೊಟ್ಟಿತ್ತು. ಹಾಗಾಗಿ ಅವರಿಬ್ಬರೂ ಮಕ್ಕಳೊಂದಿಗೆ ಗುರೂಜಿಯವರ ಪಾದಕ್ಕೆ ಸಾಷ್ಟಾಂಗ ಬಿದ್ದು ಎದ್ದವರು ಇವತ್ತಿಗೆ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಂಡು ರೋಮಾಂಚಿತರಾದರು.ಅವರನ್ನು ಮನದುಂಬಿ ಹರಸಿದ ಗುರೂಜಿಯವರು ತಮ್ಮ ಕೆಲಸವಾಗುತ್ತಲೇ ರೋಹಿತ್ನಿಂದ ಬೀಳ್ಗೊಂಡು ಹಿಂದಿರುಗಿದರು.ಅವರು ಹೋದ ಬಳಿಕ ರೋಹಿತ್ ಅವರು ನೀಡಿದ್ದ ಕಾವಿಯ ಗಂಟನ್ನು ಬಿಚ್ಚಿದ. ಅದರಲ್ಲಿ ಒಂದು ಕುಂಕುಮದ ಕಟ್ಟಿನೊಂದಿಗೆ ಹತ್ತು ರೂಪಾಯಿ ನೋಟಿನ ಮೂರು ಕಟ್ಟುಗಳಿದ್ದವು.ಅದನ್ನು ಕಂಡವನಿಗೆ ಹಿಂಸೆಯಾಯಿತು.ಆದರೆ ಅವನಿಗೆ ಹಣದ ಅವಶ್ಯಕತೆ ಇರಲಿಲ್ಲವೆಂದಲ್ಲ. ಹಾವುಗಳ ಶುಶ್ರೂಷೆಗೆ ಬೇಕಾಗುವ ವಿವಿಧ ಔಷಧಿ ಮತ್ತು ಅವನ್ನಿಟ್ಟುಕೊಳ್ಳುವ ಪಂಜರಗಳಿಗೆ ಸದಾ ದುಡ್ಡಿನ ಅಗತ್ಯ ಬೀಳುತ್ತಿತ್ತು. ಆದರೆ ಅದನ್ನು ಅವನು ಎಲ್ಲರಿಂದಲೂ ಸ್ವೀಕರಿಸುತ್ತಿರಲಿಲ್ಲ. ಮೂಕ ಜೀವರಾಶಿಗಳ ಮೇಲೆ ನಿಜವಾದ ಪ್ರೀತಿಯಿದ್ದು ಪ್ರಚಾರದ ಗೀಳಿಲ್ಲದಂಥ ಜನರು ಅವರಾಗಿ ಬಂದು ನೀಡಿದರೆ ಸ್ವೀಕರಿಸುತ್ತಿದ್ದ. ಆದರೂ ಇಂದು ಯಾಕೋ ಅವನಿಗೆ ಈ ಹಣವನ್ನು ಗುರೂಜಿಯವರಿಗೇ ಹಿಂದಿರುಗಿಸಬೇಕು ಎಂದೆನ್ನಿಸಿಬಿಟ್ಟಿತು. ಕೂಡಲೇ ಕರೆ ಮಾಡಿದ. ‘ಹಲೋ ಸರ್, ನಮಸ್ಕಾರ…!’ ಎಂದ. ‘ಓಂ ನಾಗಾಯ ನಮಃ ಹೇಳಿ ರೋಹಿತರೇ…?’ ಎಂದರು ಗುರೂಜಿ. ‘ಸರ್ ತಪ್ಪು ತಿಳಿದುಕೊಳ್ಬೇಡಿ.ತಾವು ನನ್ನ ಮನೆ ಬಾಗಿಲಿಗೇ ಬಂದು ನನ್ನನ್ನು ಗೌರವಿಸಿರುವುದರ ಕುರಿತು ಅಪಾರ ಅಭಿಮಾನವಿದೆ. ಆದರೆ ಅದರೊಂದಿಗೆ ತಾವು ಹಣವನ್ನೂ ನೀಡಿರುವುದು ನನಗ್ಯಾಕೋ ಸರಿಬರುತ್ತಿಲ್ಲ. ದಯವಿಟ್ಟು ತಾವು ಅದನ್ನು ಹಿಂದೆ ಪಡೆಯಬೇಕು. ಈ ವಿಷಯದ ಕುರಿತು ನಾನು ನಿನ್ನೆಯೇ ತಮಗೆ ತಿಳಿಸಿದ್ದೆ!’ ಎಂದ ನಯವಾಗಿ. ಅರೆರೇ, ಇವನೆಂಥ ಹುಚ್ಚನಪ್ಪಾ…? ಕಾಲಬುಡಕ್ಕ ಬಂದಂಥ ಲಕ್ಷ್ಮಿಯನ್ನು ದೂರತಳ್ಳುವ ಇವನಿಗೆ ಇನ್ನೂ ಬದುಕುವ ದಾರಿಯೇ ತಿಳಿದಿಲ್ಲ ಮೂರ್ಖನಿಗೆ!’ ಎಂದು ಮನಸ್ಸಿನಲ್ಲೇ ಬೈದುಕೊಂಡ ಗುರೂಜಿಯವರು, ‘ಅಯ್ಯಯ್ಯೋ ರೋಹಿತರೇ… ನಮ್ಮನ್ನು ತಪ್ಪು ತಿಳಿಯಬೇಡಿ! ನೀವು ತುಂಬಾ ಸ್ವಾಭಿಮಾನಿ ಅಂತ ಗೊತ್ತು.ಹಾಗಾಗಿ ಆ ಹಣವನ್ನು ನಾವು ನಿಮ್ಮ ಸ್ವಂತ ಖರ್ಚಿಗೆಂದು ಕೊಟ್ಟದ್ದಲ್ಲ. ನೀವು ಚಿಕಿತ್ಸೆ ಮಾಡುವ ನಾಗನ ಸಂತತಿಗೆ ನಮ್ಮಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಒಂದು ಸಣ್ಣ ಕಾಣಿಕೆಯಷ್ಟೆ.ನಮ್ಮ ಮೇಲೆ ಬೇಸರವಾಗಿದ್ದರೆ ಕ್ಷಮಿಸಿಬೇಕು!’ ಎಂದು ಕೃತಕ ನಮ್ರತೆಯಿಂದ ಮಾತಾಡಿದರು. ಆಗ ರೋಹಿತ್ನಿಗೆ ಏನು ಹೇಳಲೂ ತೋಚಲಿಲ್ಲ. ಆದ್ದರಿಂದ, ‘ಹಾಗಾದರೆ ಸರಿ ಸರ್.ನಿಮ್ಮಿಚ್ಛೆಯಂತೆಯೇ ಆಗಲಿ!’ ಎಂದು ಹೇಳಿ ಸುಮ್ಮನಾದ. ಜೊತೆಗೆ ಗುರೂಜಿಯವರ ಬಣ್ಣದ ಮಾತುಗಳಿಂದ ಅವನಿಗೆ ಅವರ ಮೇಲೆ ಅಭಿಮಾನವೂ ಹೆಚ್ಚಿತು.ಅಂದಿನಿಂದ ಸಮಯ ಸಿಕ್ಕಾಗಲೆಲ್ಲ ಗುರೂಜಿಯವರು ಅವನಿಗೆ ಕರೆ ಮಾಡಿ ಸ್ನೇಹದಿಂದ ಮಾತಾಡುತ್ತಿದ್ದವರು ಒಂದೆರಡು ಬಾರಿ, ‘ನಿಮ್ಮೂರಿನಾಚೆಯೇ ಬರುವುದಿತ್ತು.ಹಾಗೆ ನಿಮ್ಮನ್ನೂ ಮಾತಾಡಿಸಿಕೊಂಡು ಹೋಗುವ ಅಂತ ಮನಸ್ಸಾಯಿತು!’ ಎಂದು ಸುಳ್ಳು ಹೇಳಿ ಭೇಟಿ ಕೊಟ್ಟು ಅವನಿಗೆ ತಮ್ಮ ಮೇಲೆ ಇನ್ನಷ್ಟು ಪ್ರೀತ್ಯಾದರ ಮೂಡುವಂತೆ ವರ್ತಿಸತೊಡಗಿದರು.ಅದರಿಂದ ಅವನೂ ಅವರ ಮೇಲಿನ ಹಿಂದಿನ ಧೋರಣೆಯನ್ನು ತೊರೆದು ಆತ್ಮೀಯವಾಗಿ ಇರತೊಡಗಿದ. ಇತ್ತ ಮಸಣದಗುಡ್ಡೆಯ ನಾಗಭವನ ಜೀರ್ಣೋದ್ಧಾರದ ಸಮಯವೂ ಸಮೀಪಿಸುತ್ತಿತ್ತು.ಹಾಗಾಗಿ ಗುರೂಜಿಯವರು ಚುರುಕಾದರು.ಇನ್ನು ಸಮಯ ಕಳೆಯಬಾರದು.ರೋಹಿತನಿಗೆ ತಮ್ಮ ಮೇಲೆ ಸಂಪೂರ್ಣ ವಿಶ್ವಾಸ ಬಂದ ಹಾಗಿದೆ. ಕೂಡಲೇ ತಮ್ಮ ಕೆಲಸವನ್ನು ಸಾಧಿಸಬೇಕು! ಎಂದು ಯೋಚಿಸಿದವರು ಆವತ್ತೊಂದು ಮುಂಜಾನೆ ರೋಹಿತ್ನ ಮನೆಗೆ ದಿಢೀರ್ ಭೇಟಿಕೊಟ್ಟರು.ರೋಹಿತನೂ ಅವರನ್ನು ಆದರದಿಂದ ಮಾತಾಡಿಸಿದ. ಗುರೂಜಿಯವರು ಇವತ್ತು ಅವನೊಂದಿಗೆ ಹಿಂದೂ ಧರ್ಮ ಮತ್ತು ನಾಗಾರಾಧನೆ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ನಂಬಿಕೆ, ಆಚರಣೆಗಳ ಕುರಿತು ತುಂಬಾ ಹೊತ್ತು ಚರ್ಚಿಸಿದರು. ಅವನೂ ಅವರ ವಿಚಾರಧಾರೆಯನ್ನು ಕೇಳುತ್ತಿದ್ದ ಹಾಗೂ ತನಗೆ ಸರಿ ಅನ್ನಿಸಿದ್ದರ ಕುರಿತು ಅಭಿಮಾನದಿಂದ ತಲೆದೂಗುತ್ತಿದ. ತಪ್ಪು
You cannot copy content of this page